ರಸದೊಳಗೆ ಕಸ

‘ಯಾರು ತುಂಬಿಟ್ಟರೋ
ಈ ಬಿಳಿಬಿಳಿ ಅಕ್ಕಿಯೊಳಗೆ
ನೊರಜುಗಲ್ಲು
ಕರಿ ಮಣ್ಣೆಂಟೆ
ಹುಲ್ಲು ಬೀಜ
ಭತ್ತ, ಹೊಟ್ಟು?’

ಸದಾ ಇವರ ಗೊಣಗು
ಮೊಗದಲ್ಲಿಲ್ಲ ನಗು
ಎಲ್ಲ ಶುದ್ಧವಿರಬೇಕು
ಬೇಕೆಂದಾಕ್ಷಣ ಬಳಸುವಂತಿರಬೇಕು
ಇವರಿಗೆ ತಿಳಿದಿಲ್ಲ
ತಪ್ಪು ಅಕ್ಕಿಯದಲ್ಲ !

ಇದೆಲ್ಲ ಇಲ್ಲಿ ಸಹಜ
ಅವಿಲ್ಲದಿದ್ದರೆ ಎಲ್ಲಿ ಮಜ?

ತೊನೆದ ತೆನೆಗಳಲಿ
ಮೂಡಿದ ಭತ್ತವ
ಮತ್ತೆ ನೆಲಕ್ಕೊಗೆಯಬೇಕು
ತೆನೆಯುಜ್ಜಿ ಕಾಳು ಬೇರ್ಪಡಿಸಬೇಕು
ಮಣ್ಣು – ಕಲ್ಲಲಿ ಬೆರೆತ
ತೆಗೆದೊಗೆದು ತನ್ನನಾವರಿಸಿದ ಹುತ್ತ
ಬಿಳಿ ಕಾಳಾಗಬೇಕು

ಜೊತೆಗೊಂದೋ ಎರಡೋ
ಮೂಲರೂಪದ ಭತ್ತ
ಮಣ್ಣಲ್ಲಿ ಬೆಳೆದ ಸಾಕ್ಷಿಗೆ
ಕಲ್ಲು ಕರಿ ಮಣ್ಣೆಂಟೆ
ನೆರೆಹೊರೆಯ ಹುಲ್ಲುಬೀಜ
ಜೊತೆಗಿಲ್ಲದಿದ್ದರುಂಟೆ?

ಕಸದೊಳಗೆ ರಸ
ರಸದೊಳಗೆ ಕಸ!
ಕಸವೆಸೆದ ರಸ ಮಾನ್ಯ
ಗುರುತಿಸುವ ಮನ ಧನ್ಯ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನೆಂದು ಹಾಡಲಿ
Next post ಬಂಜೆಯರಿಗೆ ತೊಟ್ಟಿಲು ಭಾಗ್ಯದ ಪ್ರಣಾಳ ಶಿಶುಗಳು

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys