Home / ಲೇಖನ / ವಿಜ್ಞಾನ / ಮರೆವಿನ ರೋಗಕ್ಕೆ ಒಂದು ದೇಶಿ ಔಷಧಿ

ಮರೆವಿನ ರೋಗಕ್ಕೆ ಒಂದು ದೇಶಿ ಔಷಧಿ

ಬೆಳಿಗ್ಗೆಲ್ಲಾ ರಾಮಾಯಣ ಕೇಳಿ ‘ಸೀತೆಗೂ ರಾವಣನಿಗೂ’, ಏನು ಸಂಬಂಧ ಎಂಬ ಪ್ರಶ್ನೆಗೆ ಮಾವ, ಸೊಸೆ ಎಂಬ ಉತ್ತರ ಕೊಟ್ಟನಂತೆ ಅಂದರೆ ರಾಮಾಯಣದ ಪಾತ್ರಗಳ ಸಂಬಂಧವನ್ನೇ ಮರೆತು ಬಿಡುವ ಪ್ರಸಂಗವು ಬಹಳ ಜನಕ್ಕೆ ಇದೆ. ಇದೀಗ ಇಟ್ಟ ವಸ್ತು ಎಲ್ಲಿ ಅಂತ ಗೂತ್ತಾಗಿಲ್ಲ, ಎಂಬ ಮರವು. ಇಡೀ ರಾತ್ರಿ ಓದಿದ ವಿದ್ಯಾರ್ಥಿ ಬೆಳಗಿನ ಪರೀಕ್ಷೆಗೆ ಮರೆತು ಹೋಗಿ ಉತ್ತರಿಸಲಾರದೆ ಹಿಂದಿರುಗುತ್ತಾನೆ. ಇದಕ್ಕೆ ಕಾರಣ ಮರೆವು. ಇಂಥವರಿಗೆ ಮರೆವಿನ ಮಹಾಪುರುಷರೆಂದು ಕರೆಯುತ್ತಾರೆ. ಈ ಮರೆವು ಪ್ರತಿಯೊಬ್ಬರಲ್ಲೂ ಚರಿತ್ರೆ ಕಾಲದಿಂದಲೂ ಅಂಟು ರೋಗದಂತೆ ಬಂದಿದೆ, ಇದರಿಂದಾಗಿ ಏನೆಲ್ಲ ಅನಾಹುತಗಳಾದ ನಿದರ್ಶಗಳು ನಮ್ಮ ಮುಂದಿವೆ.

ಇಂಥಹ ಮರೆವಿಗೆ ದೇಶಿ ಔಷಧಿಯ ಮದ್ದನ್ನು ಇದೀಗ ಕಂಡು ಹಿಡಿಯಲಾಗಿದೆ. ಕೆಲವು ವರ್ಷಗಳಿಂದ ರಾಜ್ಯದಲ್ಲಿ ಆರಂಭಗೊಂಡ ಪ್ರಕೃತಿ ಆಯುರ್ವೇದಿಕ್ ಮತ್ತು ಆರ್ಗಾನಿಕ್ ಪೌಂಡೇಶನ್ ಸಂಸ್ಥೆಯು ಬಿಳಿಗಿರಿ ರಂಗನ ಬೆಟ್ಟದ ಡಾ|| ಸುದರ್ಶನ ಅವರ ಸಂಸ್ಥೆಯ ಪ್ರಕೃತಿಯಾಧಾರಿತ ಗಿಡಮೂಲಿಕೆ ಉತ್ಪನ್ನಗಳನ್ನು ಜನತೆಗೆ ತಲುಪಿಸುತ್ತಿದೆ. ತಜ್ಞವೈದ್ಯರುಗಳಿಂದ ಆಯುರ್‍ವೇದಿಕ್ ಚಿಕಿತ್ಸಾ ವ್ಯವಸ್ಥೆ ಗಿಡಮೂಲಿಕೆಗಳ ಬಗೆಗೆ ಜಾಗೃತಿ ಮೂಡಿಸಲಾಗುತ್ತದೆ. ಇದೀಗ ಈ ಸಂಸ್ಥೆಯು ಮರೆವಿನ ಸಮಸ್ಯೆಯಿಂದ ಬಳಲುತ್ತಿರವವರಿಗೆ ‘ಮೆಮೊಲಿಕ್ಸ್’ ಎಂಬ ಸಂಪೂರ್ಣ ಗಿಡಮೂಲಿಕಾ ಆಹಾರವನ್ನು ಬಿಡುಗಡೆ ಮಾಡಿದೆ. ಬ್ರಾಹ್ಮಿ, ಶಂಖಪುಷ್ಪಿಯಂತಹ ಉತ್ತಮ ಗಿಡಮೂಲಿಕೆಗಳನ್ನು ಹಲವಾರು ಔಷಧಿಯುಕ್ತ ಮೂಲಿಕೆಗಳ ಮಿಶ್ರಣದಿಂದ ಇದನ್ನು ತಯಾರಿಸಿದೆ. ‘ಮೆಮೊಲಿಕ್ಸ್’ ವಿಶೇಷವಾಗಿ ನೆನಪಿನ ಶಕ್ತಿಯ ಕೊರತೆಯಿಂದ ಬಳಲುತ್ತಿರುವವರಿಗೆ ವರದಾನದಾಗಿದೆ. ಮುಂಬರುವ ಪರೀಕ್ಷೆಗಳನ್ನು ಎದುರಿಸಲು ಮರೆವಿನ ಒತ್ತಡದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆಯಾಗಿದೆ. ಯಾವುದೇ ದುಷ್ಪರಿಣಾಮವಿಲ್ಲದ ಈ ಉತ್ಪನ್ನ ಸ್ಮರಣಶಕ್ತಿ ಅಭಿವೃದ್ದಿಯೊಂದಿಗೆ ಅವಶ್ಯಕ ದೇಹ ಪೋಷಕಾಂಶಗಳನ್ನು ಹೂಂದಿದೆ ಮತ್ತು ಇದು ಸ್ವದೇಶಿ ಔಷಧಿಯಾಗಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...