ಮರೆವಿನ ರೋಗಕ್ಕೆ ಒಂದು ದೇಶಿ ಔಷಧಿ

ಮರೆವಿನ ರೋಗಕ್ಕೆ ಒಂದು ದೇಶಿ ಔಷಧಿ

ಬೆಳಿಗ್ಗೆಲ್ಲಾ ರಾಮಾಯಣ ಕೇಳಿ ‘ಸೀತೆಗೂ ರಾವಣನಿಗೂ’, ಏನು ಸಂಬಂಧ ಎಂಬ ಪ್ರಶ್ನೆಗೆ ಮಾವ, ಸೊಸೆ ಎಂಬ ಉತ್ತರ ಕೊಟ್ಟನಂತೆ ಅಂದರೆ ರಾಮಾಯಣದ ಪಾತ್ರಗಳ ಸಂಬಂಧವನ್ನೇ ಮರೆತು ಬಿಡುವ ಪ್ರಸಂಗವು ಬಹಳ ಜನಕ್ಕೆ ಇದೆ. ಇದೀಗ ಇಟ್ಟ ವಸ್ತು ಎಲ್ಲಿ ಅಂತ ಗೂತ್ತಾಗಿಲ್ಲ, ಎಂಬ ಮರವು. ಇಡೀ ರಾತ್ರಿ ಓದಿದ ವಿದ್ಯಾರ್ಥಿ ಬೆಳಗಿನ ಪರೀಕ್ಷೆಗೆ ಮರೆತು ಹೋಗಿ ಉತ್ತರಿಸಲಾರದೆ ಹಿಂದಿರುಗುತ್ತಾನೆ. ಇದಕ್ಕೆ ಕಾರಣ ಮರೆವು. ಇಂಥವರಿಗೆ ಮರೆವಿನ ಮಹಾಪುರುಷರೆಂದು ಕರೆಯುತ್ತಾರೆ. ಈ ಮರೆವು ಪ್ರತಿಯೊಬ್ಬರಲ್ಲೂ ಚರಿತ್ರೆ ಕಾಲದಿಂದಲೂ ಅಂಟು ರೋಗದಂತೆ ಬಂದಿದೆ, ಇದರಿಂದಾಗಿ ಏನೆಲ್ಲ ಅನಾಹುತಗಳಾದ ನಿದರ್ಶಗಳು ನಮ್ಮ ಮುಂದಿವೆ.

ಇಂಥಹ ಮರೆವಿಗೆ ದೇಶಿ ಔಷಧಿಯ ಮದ್ದನ್ನು ಇದೀಗ ಕಂಡು ಹಿಡಿಯಲಾಗಿದೆ. ಕೆಲವು ವರ್ಷಗಳಿಂದ ರಾಜ್ಯದಲ್ಲಿ ಆರಂಭಗೊಂಡ ಪ್ರಕೃತಿ ಆಯುರ್ವೇದಿಕ್ ಮತ್ತು ಆರ್ಗಾನಿಕ್ ಪೌಂಡೇಶನ್ ಸಂಸ್ಥೆಯು ಬಿಳಿಗಿರಿ ರಂಗನ ಬೆಟ್ಟದ ಡಾ|| ಸುದರ್ಶನ ಅವರ ಸಂಸ್ಥೆಯ ಪ್ರಕೃತಿಯಾಧಾರಿತ ಗಿಡಮೂಲಿಕೆ ಉತ್ಪನ್ನಗಳನ್ನು ಜನತೆಗೆ ತಲುಪಿಸುತ್ತಿದೆ. ತಜ್ಞವೈದ್ಯರುಗಳಿಂದ ಆಯುರ್‍ವೇದಿಕ್ ಚಿಕಿತ್ಸಾ ವ್ಯವಸ್ಥೆ ಗಿಡಮೂಲಿಕೆಗಳ ಬಗೆಗೆ ಜಾಗೃತಿ ಮೂಡಿಸಲಾಗುತ್ತದೆ. ಇದೀಗ ಈ ಸಂಸ್ಥೆಯು ಮರೆವಿನ ಸಮಸ್ಯೆಯಿಂದ ಬಳಲುತ್ತಿರವವರಿಗೆ ‘ಮೆಮೊಲಿಕ್ಸ್’ ಎಂಬ ಸಂಪೂರ್ಣ ಗಿಡಮೂಲಿಕಾ ಆಹಾರವನ್ನು ಬಿಡುಗಡೆ ಮಾಡಿದೆ. ಬ್ರಾಹ್ಮಿ, ಶಂಖಪುಷ್ಪಿಯಂತಹ ಉತ್ತಮ ಗಿಡಮೂಲಿಕೆಗಳನ್ನು ಹಲವಾರು ಔಷಧಿಯುಕ್ತ ಮೂಲಿಕೆಗಳ ಮಿಶ್ರಣದಿಂದ ಇದನ್ನು ತಯಾರಿಸಿದೆ. ‘ಮೆಮೊಲಿಕ್ಸ್’ ವಿಶೇಷವಾಗಿ ನೆನಪಿನ ಶಕ್ತಿಯ ಕೊರತೆಯಿಂದ ಬಳಲುತ್ತಿರುವವರಿಗೆ ವರದಾನದಾಗಿದೆ. ಮುಂಬರುವ ಪರೀಕ್ಷೆಗಳನ್ನು ಎದುರಿಸಲು ಮರೆವಿನ ಒತ್ತಡದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆಯಾಗಿದೆ. ಯಾವುದೇ ದುಷ್ಪರಿಣಾಮವಿಲ್ಲದ ಈ ಉತ್ಪನ್ನ ಸ್ಮರಣಶಕ್ತಿ ಅಭಿವೃದ್ದಿಯೊಂದಿಗೆ ಅವಶ್ಯಕ ದೇಹ ಪೋಷಕಾಂಶಗಳನ್ನು ಹೂಂದಿದೆ ಮತ್ತು ಇದು ಸ್ವದೇಶಿ ಔಷಧಿಯಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೇಳೆ ಗಡು ನಿಯಮವದೇನು ಆತ್ಮ ಶೋಧನೆಗೆ ?
Next post ಹೇಗೆ ತಾನೇ ಸಹಿಸಲಿ?

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…