ಹೇಗೆ ತಾನೇ ಸಹಿಸಲಿ?

ಹೇಗೆ ತಾನೇ ಸಹಿಸಲಿ?
ಹೇಗೆ ತಾನೇ ಮರೆಯಲಿ||
ಆ ನಿನ್ನ ದೇಶಪ್ರೇಮದ ಕೆಚ್ಚದೆಯ ಕಿಚ್ಚ
ಸುಟ್ಟ ಆ ಕಡುವೈರಿಯ ಅಟ್ಟಹಾಸವ ||

ಅಂದು ನೀನು ಸೈನ್ಯ ಸೇರಿದ ದಿನ
ಊರೆಲ್ಲಾ ನಿನ್ನ ದೇಶಪ್ರೇಮ ಕಂಡು
ಸಂಭ್ರಮಿಸಿ ಕುಣಿದಾಡಿದಾಕ್ಷಣ|
ನಿನ್ನ ಶಾಲೆಗೆ ಕರೆಸಿ ಗೌರವಿಸಿದಾಕ್ಷಣ
ಯೋಧನುದಿಸಿದ ನಾಡೆಂದು
ಹಾಡಿ ಹರೆಸಿದಾ ದಿನ ||

ಇಂದು ಯುದ್ಧದಿ ಹೋರಾಡಿ
ಹತ್ತಾರು ಆ ವೈರಿಗಳ ಕೊಂದು
ವೀರ ಮರಣವಹೊಂದಿ
ಹುತಾತ್ಮನಾದ ಜೋದ ನಿನ್ನ
ಆಮರ ಜೀವವಂತವಾದ ನಿನ್ನ||

ದೇಶ ಇಂದು ರಾಷ್ಟ್ರ ಧ್ವಜವ
ನಿನ್ನೆದೆಯ ಮೇಲೆ ಸರ್ಮಪಿಸಿ
ನವಿಸುತ್ತಿದೆ ನಿನಗೆ ಅನಂತ ನಮನ|
ನಿನ್ನಿಂದ ಹೆಸರಾಯ್ತು ಊರು, ಶಾಲೆ
ಹೆತ್ತ ತಾಯಿ ತಂದೆಯರ ವಂಶೋತ್ಥಾನ
ನಿನ್ನಿಂದ ಸ್ಫೂರ್ತಿಸೆಲೆಯಾಗಿ
ನಮ್ಮ ಯುವಜನಕ್ಕಾಯ್ತು ಉತ್ತೇಜನ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರೆವಿನ ರೋಗಕ್ಕೆ ಒಂದು ದೇಶಿ ಔಷಧಿ
Next post ಸೂಜಿ-ಗಲ್ಲು

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…