ಸೂಜಿ-ಗಲ್ಲು

ಬೆಂಗಳೂರಲ್ಲಿ ಬಸ್ಸು ಹತ್ತಿದರೆ
ಊರು ಸೇರುವುದೇ ಒಂದು ಬದುಕು.

ಬರ್ರೆಂದು ಬೀಸುತ್ತ ಬರುವ ಸೊಕ್ಕಿದ ಲಾರಿಗಳು
ಪಕ್ಕೆಲುಬು ಮುರಿದು ಬಿಕ್ಕುತ್ತ ಕೂರುತ್ತವೆ.
ನೆಲದ ಮೇಲಿನ ಹಕ್ಕಿಯಾಗುವ ಕಾರುಗಳು
ಹಾಡು ಹರಿದು ಚಿಂದಿಯಾಗಿ ಚೀರುತ್ತವೆ.

ಸಾಯಬೇಕೆನ್ನುವ ಸೇಡಿನಲ್ಲಿ
ಕಣ್ಣುಮುಚ್ಚಾಲೆಯಾಡುವ ರೊಚ್ಚಿನಲ್ಲಿ
ನೆತ್ತರು ಬರೆದ ಬರಹ ಓದಲಾರದೆ
ಕಣ್ಣು ಮುಚ್ಚುತ್ತೇನೆ.

ಇದ್ದಕ್ಕಿದ್ದಂತೆ ಬ್ರೇಕು ಬುಸುಗುಟ್ಟಿದಾಗ
ಥಟ್ಟನೆ ಕಣ್ತೆರೆದು ಪಕ್ಕಕ್ಕೆ ನೋಡುತ್ತೇನೆ-
ಅಲ್ಲಿ ಜೊತೆಗೆ ಬರಲಾಗದೆ ಹಿಂದಕ್ಕೆ ಓಡುವ ಹೊಲಗಳು
ಹೊಲಗಳಲ್ಲಿ ಹಿಂದೆ ಮುಂದೆ ನೋಡದೆ ಎದ್ದ ಹುತ್ತಗಳು!

ಹೊಲದಲ್ಲಿ ಬೆಳೆದ ಈ ಹುತ್ತಗಳಲ್ಲಿ
ಹೂವು ಅರಳಬಾರದೆ ಎಂದುಕೊಳ್ಳುತ್ತೇನೆ
ಆದರೆ ಹಾವು ಬುಸ್ಸೆನ್ನುತ್ತದೆ.

ನಿತ್ಯ ಅದೇ ಗೋಳು ಅದೇ ಬಾಳು
ಫ್ಯೂಡಲ್ ಲಾರಿಗಳು ಕ್ಯಾಪಿಟಲ್ ಕಾರುಗಳು
ಹಿಗ್ಗಾಮುಗ್ಗ ನುಗ್ಗುವ ಕನಸುಗಳು
ನುಚ್ಚುನೂರಾದ ಬಿಡಿಭಾಗಗಳು
ಛಂದಸ್ಸಿನಲ್ಲಿ ಛಿದ್ರವಾದ ಮಾತ್ರೆ ಗಣಗಳು
ಗೊಣಗುತ್ತವೆ; ಒಣಗುತ್ತವೆ ನೂರಾರು ಬಣ್ಣಗಳು.
ಆಗ ನೀರಿಗೆ ಬಿದ್ದ ಸುಣ್ಣವಾಗುತ್ತೇನೆ-
ಹೇಳಿ ಬಂಧುಗಳೇ
ಮತ್ತೆ ಬರಬೇಕೆ ಇಲ್ಲಿಗೆ?
ತಿನ್ನುವ ತುತ್ತು ಅನ್ನಕ್ಕೂ ಕನ್ನ ಹಾಕುವ
ಬಾಳಿನ ಬಗ್ಗೆ ಕನಸುತ್ತ;
ಸಾವಿನ ಲೆಕ್ಕ ಬರೆಯುವ ಬುಕ್ಕಿನಲ್ಲಿ
ಬೆಳ್ಳಿ ಚುಕ್ಕಿಗಳನ್ನು ಬಿಡಿಸುತ್ತ;
ಸೃಷ್ಟಿಬೀಜದ ಬಸುರಿ ಹೊಲಗಳಲ್ಲಿ
ಲಯದ ಭಯ ಬುಸುಗುಡುವ ಹುತ್ತ ಕಾಣುತ್ತ-

ಹೇಳಿ ಬಂಧುಗಳೇ ಹೇಳಿ
ಮತ್ತೆ ಬರಬೇಕೆ ಇಲ್ಲಿಗೆ?
ಬಿಟ್ಟರೂ ಬಿಡದ ಈ ನನ್ನ ಸೂಜಿ-ಗಲ್ಲಿಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗೆ ತಾನೇ ಸಹಿಸಲಿ?
Next post ಭಗ್ನ ಪ್ರೇಮಿಗಳು

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys