Home / ಕವನ / ಕವಿತೆ / ನನ್‌ ಲಚ್ಮಿ

ನನ್‌ ಲಚ್ಮಿ

ಹಾಗೇ ನೋಡ್ತಾ ನೋಡ್ತಾ ಹೋದ್ರೆ
ನನ್ ಲಚ್ಮೀನೆ ಒಳ್ಳ್ಯೋಳು |
ಘಟ್ಟ್ಯಾಗೇನೊ ಮಾತಾಡ್ತಾಳೆ
ಆದ್ರೂನೂವೆ ಒಳ್ಳ್ಯೋಳು ||

ಅವ್ಳೂ ಬಂದು ಸಿದ್ದೇ ಎಡ್ವಿ
ಹದ್ನಾರ್ ವರ್ಷ ಹಾರ್ಹೋಯ್ತು |
ಸೇತ್ವೇ ಕೆಳ್ಗೆ ಕಲ್ಮಣ್ ಮುಚ್ಚಿ
ಹೊನ್ನೀರ್ ಕಾಲ್ವೆ ತುಂಬ್ಹೋಯ್ತು||

ತುಂಬಿದ್ ಕಾಲ್ವೆ ತೋಟಿಕ್ ನುಗ್ಗಿ
ಚಿನ್ನದ್ ಸೊಪ್ನಾ ಸುರ್ದಿತ್ತು |
ಬೇಲೀ ಸುತ್ತಾ ಹೂವಿನ್ ಸುಗ್ಗಿ
ಜೀವದ್ ಕಣ್ಣೇ ತೆರ್ದಿತ್ತು ||

ಹಳ್ಳ್ಯೋಳೂಂತಾ ಅನ್ನೋರನ್ಲಿ
ಒಳ್ಳೇ ಹೆಂಡ್ತಿ ನನ್ ಲಚ್ಮಿ|
ಬೆಳ್‌ಬೆಳ್‌ಗಿದ್ದೋರ್‌ ಬೆಳ್ಕೊಂಡ್‌ಬರ್ಲಿ
ಪಚ್ಚೇ ಬಳ್ಳಿ ನನ್ ಲಚ್ಮಿ ||

ತೊಟ್ಲೂ ಬಟ್ಲೂ ತಂದೋರ್ಯಾರು
ಅವ್ಳೇ ತಾನೆ ನನ್ ಲಚ್ಮಿ|
ಬಿಸ್ಲಲ್ ಮಳೇಲ್ ನಕ್ಕೋರ್ಯಾರು
ನೊಂದೋರ್ಯಾರು ನನ್ ಲಚ್ಮಿ||

ಹನ್ನೊಂದ್‌ ಘಂಟೇಗನ್ನಾ ಹಾಕಿ
ಕಾಪಾಡೋಳೇ ನನ್ ಲಚ್ಮಿ|
ಮಕ್ಕಳ್ನೆಲ್ಲಾ ತೂಗಿ ಸಾಕಿ
ಬೆಳ್ಸೋ ದೇವ್ರೆ ನನ್ ಲಚ್ಮಿ ||

ಜೊತೇಲ್‌ಬಂದು ಮರೇಲ್‌ನಿಂತು
ನನ್ನೇ ನೋಡ್ತಾಳ್ ನನ್‌ಲಚ್ಮಿ|
ಮೋಡದ್‌ಮರೇಲ್ ಮುಂಗಾರ್‌ಮಿಂಚು
ಹಾಡಿನ್ ತುಂಬಾ ನನ್ ಲಚ್ಮಿ ||
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...