Home / ಕವನ / ಕವಿತೆ / ನನ್ ಚಿನ್ನ

ನನ್ ಚಿನ್ನ

“ಗಂಡಯ್ಯ, ಗಂಡಯ್ಯ, ಬಿಡು ನಿನ್ನ ಚಿಂತೇಯ?
ಪರದಾಟ ಸಾಕಿನ್ನು, ಮಹರಾಯ!
ನಾ ನಿನ್ನ ಕೈಹಿಡಿದ ಹೆಂಡತಿಯೆ ಆಗಿರಲಿ,-
ನಿನ್ನ ಮನೆಯಾಳಲ್ಲ ಸ್ವಾಮಿ !”

ಎರಡರಲಿ ಒಂದೇನೊ ಆಳಾಗಿ ಇರಬೇಕು,
ನನ್ನ ಚಿನ್ನಾ, ಓ ನನ್ನ ಚಿನ್ನಾ!
ಆ ಆಳು ಗಂಡಿರಲೆ? ಹೆಣ್ಣಿರಲೆ?-ಹೇಳಿಬಿಡು,
ನನ್ನ ಕೈಹಿಡಿದ ರನ್ನಾ!

“ಗಂಡಯ್ಯ, ಇನ್ನೂ ಇಹುದೆ ಈ ಹಳೆ ಬಿಂಕ
ಅರಸುತನ, ಆಳಬಾಳೆಂಬ?
ನಾ ನಿನ್ನ ತೊರೆದೇನು! ಹಿಡಿ ನಿನ್ನ ಕಡೆ ಸುಂಕ;
ಕೈಮುಗಿದೆ ;-ಇರಲಿ ಆ ಜಂಬ!”

ನೀ ತೊರೆಯೆ ನಾ ಕೆಟ್ಟೆ, ನೀರಿರದ ಗೋಕಟ್ಟೆ,
ನನ್ನ ಚಿನ್ನಾ, ಓ ನನ್ನ ಚಿನ್ನಾ!
ಬರುವುದೆಲ್ಲಾ ಬರಲಿ, ಗಂಡು ನಾನಂಜುವೆನೆ,
ನನ್ನ ಕೈಹಿಡಿದ ರನ್ನಾ?

“ಅಯ್ಯೋ! ನನ್ನೆದೆ ಮುತ್ತೆ ನೀನೊಡೆದು ಹೋಗುವೆಯ?-
ಮಿತ್ತು ಹತ್ತಿರವಾಯ್ತೆ ನನಗೆ?
ಮಣ್ಣಿನಲಿ ಕುಳಿ ತೆಗೆದು ನೀನೆನ್ನನಿಡುವಾಗ,
ಗಂಡಯ್ಯ, ಒದಗೀತೆ ಸಹನೆ!”

ದೇವರಲಿ ನನಗಿವೆ ಅಪಾರ ನಂಬಿಕೆ ಭಕ್ತಿ,
ನನ್ನ ಚಿನ್ನಾ, ಓ ನನ್ನ ಚಿನ್ನಾ!
ಒದಗೀತು ನನಗಂಥ ಅಳಲ ದಾಟುವ ಶಕ್ತಿ
ನನ್ನ ಕೈಹಿಡಿದ ರನ್ನಾ

“ಅಂತಾದರಳಿವಿನ ಮಹಾ ಮೌನದೊಳಗಿಂದ
ನಾ ನಿನ್ನ ಶಾಂತಿಯನು ಕಾಡ ಬಹೆನು;
ನಿದ್ದೆಯಲಿ ಮುಳುಗಿರುವ ನಿನ್ನ ಹಾಸಿನ ಸುತ್ತ
ಬೊಮ್ಮರಕ್ಕಸಗಳನು ಕುಣಿಸ ಬಹೆನು.”

ನಾನಾಗ ನಿನ್ನಂಥ ಸತಿಯ ಕೈಹಿಡಿಯುವೆನು
ನನ್ನ ಚಿನ್ನಾ ಓ ನನ್ನ ಚಿನ್ನಾ!
ಅವಳ ಕಣ್ಣಿಗೆ ಹೆದರಿ ನರಕವೇ ಓಡುವುದು
ನನ್ನ ಚಿನ್ನಾ, ಓ ನನ್ನ ಚಿನ್ನಾ!
-Robert Burns: My Spouse Nancy
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...