Home / ಬಾಲ ಚಿಲುಮೆ / ಕವಿತೆ / ಅಜ್ಜಿ ನಂಗೆ ಇಷ್ಟ

ಅಜ್ಜಿ ನಂಗೆ ಇಷ್ಟ

ಅಪ್ಪ ಅಮ್ಮ ಎಲ್ಲಾರ್‍ಗಿಂತ
ಅಜ್ಜಿ ನಂಗೆ ಇಷ್ಟ
ಅಜ್ಜಿಗೂನು ಅಷ್ಟೆ ನಾನು
ಇಲ್ದೆ ಹೋದ್ರೆ ಕಷ್ಟ.

ಗಲ್ಲ ಹಿಂಡಿ ಮುದ್ದು ಮಾಡಿ
ಚುಕ್ಕು ಬಡಿದು ತೊಡೇಲಿ,
ನಿದ್ದೆ ಬರ್‍ಲೇ ಬಿಡ್ತಾಳಜ್ಜಿ
ಕಥೆ ಹೇಳ್ತಾ ಕಡೇಲಿ!

ನನ್ ಗೊಂಬೇಗೂ ಸ್ನಾನ ಮಾಡ್ಸಿ
ಬಟ್ಟ ತೊಡಿಸಿ, ಮಲಗ್ಸಿ,
‘ಏನ್ ಚಂದಾನೋ ನಿನ್ಮಗು’ ಅಂತ
ಅಜ್ಜಿ ನಗ್ತಾಳೆ ಖುಷೀಲಿ!

ಬಲೇ ಚೂಟಿ, ಭಾಳ ಘಾಟಿ
ನಿನ್ ಕಂದ ಅಂತ್ಹೇಳ್ತಾಳೆ,
ನಿನ್ ಥರಾನೇ ಇದೂನೂ ಅಂತ
ಅದಕ್ಕೂ ಕೆನ್ನೆ ಸವರ್‍ತಾಳೆ.

ದಿನಾ ಅಜ್ಜಿ ತೀರ್‍ಕೊಂಡಿರೋ
ಅಜ್ಜನ್ ಕಥೆ ಹೇಳ್ತಾಳೆ,
ಹೇಳ್ತಾ ಹೇಳ್ತಾ ಕಣ್ಣಲ್ ನೀರು
ಯಾಕೆ ಅಜ್ಜಿ ಅಳ್ತಾಳೆ?

ಅಮ್ಮ ಬಯ್ದೆ, ಅಪ್ಪ ಹೊಡದ್ರೆ
ಅಜ್ಜಿ ರೇಗಿ ಕೂಗ್ತಾಳೆ;
‘ಇಂಥ ಮುದ್ಮಗು ಸಿಕ್ಕಿತೇನ್ರೋ’
ಅಜ್ಜನ್ಹಂಗೇ ಅಂತಾಳೆ!

ನಾನ್ ಯಾವತ್ತೂ ಅಜ್ಜೀನ್ ಮಾತ್ರ
ಬಿಟ್‌ಕೊಡೊಲ್ಲ ಯಾರ್‍ಗೂನೂ.
ಅಜ್ಜೀನ್ ನಾನೇ ಮದ್ವೆ ಆಗಿ
ಕಥೆ ಕೇಳ್ತೀನ್ ದಿನಾನೂ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...