Home / ಲೇಖನ / ಇತರೆ / ಬೆಳಗದಿರುವುದೇ

ಬೆಳಗದಿರುವುದೇ

ಪ್ರಿಯ ಸಖಿ,
ನನ್ನಿಂದೇನು ಸಾಧ್ಯ ? “ನಾನು ಅತ್ಯಂತ ನಿಕೃಷ್ಟ ಜೀವಿ” ‘ನನ್ನಿಂದ ಯಾರಿಗೂ ಏನೂ ಪ್ರಯೋಜನವಿಲ್ಲ’ ಎಂದು ಹಲುಬುವ ನಿರಾಶಾವಾದಿಗಳನ್ನು ನಮ್ಮ ಸುತ್ತಮುತ್ತ ಕಾಣುತ್ತಲೇ ಇರುತ್ತೇವೆ. ಇಂತಹವರನ್ನು ಕಂಡೇ ಇರಬೇಕು ಕವಿ ಎಸ್. ವಿ. ಪರಮೇಶ್ವರಭಟ್ಟರು ತಮ್ಮ ಕವನವೊಂದರಲ್ಲಿ ಹೀಗೆ ಹೇಳಿದ್ದಾರೆ.
ವಿಶ್ವವ್ಯಾಪಿ ತಮದ
ಮುಂದೆ ತನ್ನ ದೀಪವೆ?
ತನ್ನ ದಿಟ್ಪವೊಂದರಿಂದೆ
ಕತ್ತಲಳಿವದೇ?
ಎನುವ ಶಂಕೆ ಚುಕ್ಕಿಗೇಕೆ?
ಏಕೆ ಹೆದರಿಕೆ?
ಬೆಳಗಲೆಂದು ಹುಟ್ಟಿದಂದು
ಬೆಳಗದಿರುವುದೇ?
ಎಷ್ಟೊಂದು ಸ್ಫೂರ್ತಿದಾಯಕ ಕವನದ ಸಾಲುಗಳಲ್ಲವೇ ಸಖಿ? ದೊಡ್ಡ ಆಕಾಶದಲ್ಲಿ ಪುಟ್ಟ ತಾರೆಯೊಂದು ಇಷ್ಟೊಂದು ಕತ್ತಲಿನಲ್ಲಿ ತನ್ನ ಬೆಳಕು ಯಾವ ಮೂಲೆಗೆ? ತನ್ನ ದೀಪವೊಂದರಿಂದಲೇ ಕತ್ತಲು ಅಳಿಯುವುದೇ? ಎಂದು ಹೆದರುತ್ತದೆ. ಆದರೆ ಕತ್ತಲು ಎಷ್ಟೇ ಇರಲಿ ಬೆಳಗಲೆಂದೇ ಅದು ಹುಟ್ಟಿರುವದು.

ಹಾಗೇ ಮನುಷ್ಯನೂ ಕೂಡ ಪ್ರತಿಯೊಬ್ಬನಿಗೂ ಅವನವನದೇ ಆದ ವಿಶಿಷ್ಟತೆ, ಬೆಳಕು ಇದ್ದೇ ಇರುತ್ತದೆ. ಅದನ್ನವನು ಕಂಡುಕೊಂಡು ಬಾಳಬೇಕು. ಬೆಳಕು ನೀಡಬೇಕು. ಪ್ರತಿಯೊಬ್ಬ ಜೀವಿಯೂ ಇಲ್ಲಿ ಜನ್ಮ ತಳೆದು ಬಂದ ಮೇಲೆ ಅವನವನ ಕರ್ತವ್ಯವನ್ನು ಅವನು ನಿಭಾಯಿಸಲೇಬೇಕು. ಕಷ್ಟವೆಂದು ಸುಮ್ಮನೆ ಕೂರುವಂತಿಲ್ಲ. ‘ತನ್ನಿಂದ ಏನೂ ಸಾಧ್ಯವಿಲ್ಲ’ ಎಂಬ ನಿರಭಿಮಾನವೂ ಬೇಡ. ಹಾಗೇ ‘ತನ್ನಿಂದಲೇ ಪ್ರಪಂಚವೆಲ್ಲಾ ಎಂಬ ದುರಭಿಮಾನವೂ ಬೇಡ. ತನ್ನಿಂದ ಏನಾದರೂ ಸಾಧಿಸಲು ಸಾಧ್ಯ ಎಂದು ವ್ಯಕ್ತಿ ಮನಸ್ಸು ಮಾಡಿದನೆಂದರೆ ಅರ್ಧ ಕೆಲಸ ಆದಂತೆಯೇ ಎನ್ನುತ್ತಾರೆ ಹಿರಿಯರು. ಅದಕ್ಕೆಂದೇ
ಕವಿ ಶೇಕ್ಸ್‍ಪಿಯರ್ ಹೀಗೆ ಹೇಳುತ್ತಾನೆ. ‘Where there is will there is a way’ ಎಲ್ಲಿ ಗುರಿ ಇದೆಯೋ ಅಲ್ಲಿ ದಾರಿಯೂ ಇದ್ದೇ ಇದೆ ಎಂದು.

ಪ್ರಿಯ ಸಖಿ, ಸೂರ್ಯನಂತೆ ಜಗವನ್ನೇ ಬೆಳಗಬಲ್ಲೆನೆಂಬ ಹುಂಬತನವಿಲ್ಲದಿದ್ದರೂ ಚುಕ್ಕಿಯಾಗಿಯೇ ಬೆಳಗಿ ನನ್ನ ಸುತ್ತಮುತ್ತಲಾದರೂ ಸರಿ ಬೆಳಕು ನೀಡುವೆನೆಂಬ ಆತ್ಮವಿಶ್ವಾಸ, ಆಶಾವಾದ, ನಂಬಿಕೆ ನಮ್ಮದಾದರೆ ಅಷ್ಟೇ ಸಾಕು. ದಾರಿ ಹೇಗೋ ತಾನೇ ತೆರೆದುಕೊಳ್ಳುತ್ತಾ ಸಾಗುತ್ತದೆ ! ನೀನೇನೆನ್ನುತ್ತೀ ಸಖಿ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...