ಬೆಳಗದಿರುವುದೇ

ಪ್ರಿಯ ಸಖಿ,
ನನ್ನಿಂದೇನು ಸಾಧ್ಯ ? “ನಾನು ಅತ್ಯಂತ ನಿಕೃಷ್ಟ ಜೀವಿ” ‘ನನ್ನಿಂದ ಯಾರಿಗೂ ಏನೂ ಪ್ರಯೋಜನವಿಲ್ಲ’ ಎಂದು ಹಲುಬುವ ನಿರಾಶಾವಾದಿಗಳನ್ನು ನಮ್ಮ ಸುತ್ತಮುತ್ತ ಕಾಣುತ್ತಲೇ ಇರುತ್ತೇವೆ. ಇಂತಹವರನ್ನು ಕಂಡೇ ಇರಬೇಕು ಕವಿ ಎಸ್. ವಿ. ಪರಮೇಶ್ವರಭಟ್ಟರು ತಮ್ಮ ಕವನವೊಂದರಲ್ಲಿ ಹೀಗೆ ಹೇಳಿದ್ದಾರೆ.
ವಿಶ್ವವ್ಯಾಪಿ ತಮದ
ಮುಂದೆ ತನ್ನ ದೀಪವೆ?
ತನ್ನ ದಿಟ್ಪವೊಂದರಿಂದೆ
ಕತ್ತಲಳಿವದೇ?
ಎನುವ ಶಂಕೆ ಚುಕ್ಕಿಗೇಕೆ?
ಏಕೆ ಹೆದರಿಕೆ?
ಬೆಳಗಲೆಂದು ಹುಟ್ಟಿದಂದು
ಬೆಳಗದಿರುವುದೇ?
ಎಷ್ಟೊಂದು ಸ್ಫೂರ್ತಿದಾಯಕ ಕವನದ ಸಾಲುಗಳಲ್ಲವೇ ಸಖಿ? ದೊಡ್ಡ ಆಕಾಶದಲ್ಲಿ ಪುಟ್ಟ ತಾರೆಯೊಂದು ಇಷ್ಟೊಂದು ಕತ್ತಲಿನಲ್ಲಿ ತನ್ನ ಬೆಳಕು ಯಾವ ಮೂಲೆಗೆ? ತನ್ನ ದೀಪವೊಂದರಿಂದಲೇ ಕತ್ತಲು ಅಳಿಯುವುದೇ? ಎಂದು ಹೆದರುತ್ತದೆ. ಆದರೆ ಕತ್ತಲು ಎಷ್ಟೇ ಇರಲಿ ಬೆಳಗಲೆಂದೇ ಅದು ಹುಟ್ಟಿರುವದು.

ಹಾಗೇ ಮನುಷ್ಯನೂ ಕೂಡ ಪ್ರತಿಯೊಬ್ಬನಿಗೂ ಅವನವನದೇ ಆದ ವಿಶಿಷ್ಟತೆ, ಬೆಳಕು ಇದ್ದೇ ಇರುತ್ತದೆ. ಅದನ್ನವನು ಕಂಡುಕೊಂಡು ಬಾಳಬೇಕು. ಬೆಳಕು ನೀಡಬೇಕು. ಪ್ರತಿಯೊಬ್ಬ ಜೀವಿಯೂ ಇಲ್ಲಿ ಜನ್ಮ ತಳೆದು ಬಂದ ಮೇಲೆ ಅವನವನ ಕರ್ತವ್ಯವನ್ನು ಅವನು ನಿಭಾಯಿಸಲೇಬೇಕು. ಕಷ್ಟವೆಂದು ಸುಮ್ಮನೆ ಕೂರುವಂತಿಲ್ಲ. ‘ತನ್ನಿಂದ ಏನೂ ಸಾಧ್ಯವಿಲ್ಲ’ ಎಂಬ ನಿರಭಿಮಾನವೂ ಬೇಡ. ಹಾಗೇ ‘ತನ್ನಿಂದಲೇ ಪ್ರಪಂಚವೆಲ್ಲಾ ಎಂಬ ದುರಭಿಮಾನವೂ ಬೇಡ. ತನ್ನಿಂದ ಏನಾದರೂ ಸಾಧಿಸಲು ಸಾಧ್ಯ ಎಂದು ವ್ಯಕ್ತಿ ಮನಸ್ಸು ಮಾಡಿದನೆಂದರೆ ಅರ್ಧ ಕೆಲಸ ಆದಂತೆಯೇ ಎನ್ನುತ್ತಾರೆ ಹಿರಿಯರು. ಅದಕ್ಕೆಂದೇ
ಕವಿ ಶೇಕ್ಸ್‍ಪಿಯರ್ ಹೀಗೆ ಹೇಳುತ್ತಾನೆ. ‘Where there is will there is a way’ ಎಲ್ಲಿ ಗುರಿ ಇದೆಯೋ ಅಲ್ಲಿ ದಾರಿಯೂ ಇದ್ದೇ ಇದೆ ಎಂದು.

ಪ್ರಿಯ ಸಖಿ, ಸೂರ್ಯನಂತೆ ಜಗವನ್ನೇ ಬೆಳಗಬಲ್ಲೆನೆಂಬ ಹುಂಬತನವಿಲ್ಲದಿದ್ದರೂ ಚುಕ್ಕಿಯಾಗಿಯೇ ಬೆಳಗಿ ನನ್ನ ಸುತ್ತಮುತ್ತಲಾದರೂ ಸರಿ ಬೆಳಕು ನೀಡುವೆನೆಂಬ ಆತ್ಮವಿಶ್ವಾಸ, ಆಶಾವಾದ, ನಂಬಿಕೆ ನಮ್ಮದಾದರೆ ಅಷ್ಟೇ ಸಾಕು. ದಾರಿ ಹೇಗೋ ತಾನೇ ತೆರೆದುಕೊಳ್ಳುತ್ತಾ ಸಾಗುತ್ತದೆ ! ನೀನೇನೆನ್ನುತ್ತೀ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಜ್ಜಿ ನಂಗೆ ಇಷ್ಟ
Next post ಸೌಂದರ್ಯಕ್ಕೆ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys