ಮಿಠಾಯಿ ಕೊಡುವೆನು ಮಳೆಯಣ್ಣಾ

ಬಾರೊ ಬಾರೊ ಮುಗಿಲಿನ ಗೆಳೆಯಾ
ಮಿಠಾಯಿ ಕೊಡುವೆನು ಮಳೆಯಣ್ಣಾ ||

ಅಗಲದ ಮುಗಿಲಲಿ ಹಗಲಿನ ಹೆಗಲಲಿ
ಹಲಿಗೆಯ ಬಾರಿಸಿ ಬಾರಣ್ಣಾ
ಸುಣ್ಣಾ ಬಣ್ಣಾ ಹಣ್ಣಾ ಕೊಡುವೆನು
ಕಳ್ಳೇ ಮಳ್ಳೇ ಕುಣಿಯಣ್ಣಾ

ನೆಲ ನೆಲ ಕಾಯಿತು ಕುಲಿಮೆಯು ಸಿಡಿಯಿತು
ಬೆಂಕಿ ಬಿತ್ತೋ ಮಳೆಯಣ್ಣಾ
ಗೂಡಲಿ ಗುಬ್ಬಿಗೆ ಹನಿಗುಟುಕಿಲ್ಲಾ
ಮರಿಗಳು ಅತ್ತವು ನನ್ನಣ್ಣಾ

ಬಾಬಾ ಭರದಿಂ ತಾತಾ ಕರದಿಂ
ಆಣಿಯ ಕಲ್ಗಳ ತೂರಣ್ಣಾ
ಗುಡುಗುಡು ಗುಡುಗಿಂ ಸಂಚಿಂ ಮಿಂಚಿಂ
ಅತ್ತರ ವಾಸನಿ ಚಿಮ್ಮಣ್ಣಾ

ಮುಗಿಲಿಗೆ ಹಿಡಿಹಿಡಿ ಮಳೆ ಮಳೆ ಚತ್ತರಿ
ಸುತ್ತಲು ಬಿತ್ತಲು ಬೀಳಣ್ಣಾ
ಒಳಗೋ ಹೊರಗೋ ಬೆಳಗೋ ಬೆಳಗೋ
ಬೆಳ್ಳಿಯ ಸಾಗರ ಸುರಿಯಣ್ಣಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿತೆಗೆಲ್ಲಿದೆ ಅರ್ಥ ?
Next post ಯಾರದು?

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…