ಯಾರದು?

ಯಾರದು! ಯಾರದು!! ಯಾರದು ಸೇನೆ?
ಯಾರಿಗೆ ಬಂದಿದೆ ಉಳಿಯದ ಬೇನೆ? ||
ಹಿಮಗಿರಿಗಳ ನಡು ಪರ್ವತಸಾನು
ತೆಪ್ಪಗೆ ಕುಳಿತಿಹನಲ್ಲಿಯೆ ಶಿವನು ||

ಬೆಂಕಿಯ ಕಣ್ಣನು ಅಡಗಿಸಿಕೊಂಡು
ಉಲುಹಿನ ಸುಳುಹನು ಮಡಗಿಸಿಕೊಂಡು ||
ಧ್ಯಾನದ ಮೌನದ ಆಳದ ತಳದಲಿ
ಸುಳಿವವರಾರೀ ರುದ್ರನ ಬಳಿಯಲಿ? ||

ಹುಚ್ಚಿನ ಬೆಚ್ಚಿನ ಹುಳುಗಳ ತಂಡೇ
ಇಲ್ಲಿಯು ನಡೆಸುತ್ತಿರುವುದು ಬಂಡೇ? ||
ಅಲ್ಲಿದೆ ಗಿರಿಜೆಯ ತವರಿನ ತೇಜ
ವಿದ್ಯುತ್ ಸಂಚಿತ ತವಸಿನ ಓಜ ||

ದುರ್‍ಗಾ ಮಾತೆಯ ಮಕ್ಕಳ ನಾಡು
ಭಾರತವೊಂದಿದೆ ಕ್ಷಿತಿಯಲ್ಲಿ ನೋಡು ||
ಷಣ್ಮುಖ ದಳಪತಿ ನವಿಲೇರಿದರೆ
ದಂಡಿನ ಹಿಂಡೇ ನೆರೆವುದು ಬೇರೆ ||

ಹಸಿವೆಯ ಹುಚ್ಚಿನ ಹೊಟ್ಟೆಯ ಕಿಚ್ಚಿಗೆ
ಕದನಕು ಕೃಷಿಹಿತವೆನಿಸಿದೆ ಹೆಚ್ಚಿಗೆ ||
ಹಗೆತನದಲಿ ನಾವ್ ಸಾವುದು ಬೇಡ
ಬದುಕುಳಿದರೆ ಗೆಳೆಗೆಳೆಯರು ನೋಡ ||

ಯಾಕೀ ಸಾವಿಗೆ ಬಲಿಯಾಗುವಿರಿ ?
ಚೀಣರೆ ತೋಲಗಿದರೇ ಬದುಕುವಿರಿ ||
*****

ಚೀನಾ ಆಕ್ರಮಣ ಸಂದರ್ಭದಲ್ಲಿ ರಚಿಸಿದ್ದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಠಾಯಿ ಕೊಡುವೆನು ಮಳೆಯಣ್ಣಾ
Next post ಅಂತೂ ಸಾಹಿತಿಯಾಗಿಬಿಟ್ರಲ್ಲಾ……!

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…