ಯಾರದು?

ಯಾರದು! ಯಾರದು!! ಯಾರದು ಸೇನೆ?
ಯಾರಿಗೆ ಬಂದಿದೆ ಉಳಿಯದ ಬೇನೆ? ||
ಹಿಮಗಿರಿಗಳ ನಡು ಪರ್ವತಸಾನು
ತೆಪ್ಪಗೆ ಕುಳಿತಿಹನಲ್ಲಿಯೆ ಶಿವನು ||

ಬೆಂಕಿಯ ಕಣ್ಣನು ಅಡಗಿಸಿಕೊಂಡು
ಉಲುಹಿನ ಸುಳುಹನು ಮಡಗಿಸಿಕೊಂಡು ||
ಧ್ಯಾನದ ಮೌನದ ಆಳದ ತಳದಲಿ
ಸುಳಿವವರಾರೀ ರುದ್ರನ ಬಳಿಯಲಿ? ||

ಹುಚ್ಚಿನ ಬೆಚ್ಚಿನ ಹುಳುಗಳ ತಂಡೇ
ಇಲ್ಲಿಯು ನಡೆಸುತ್ತಿರುವುದು ಬಂಡೇ? ||
ಅಲ್ಲಿದೆ ಗಿರಿಜೆಯ ತವರಿನ ತೇಜ
ವಿದ್ಯುತ್ ಸಂಚಿತ ತವಸಿನ ಓಜ ||

ದುರ್‍ಗಾ ಮಾತೆಯ ಮಕ್ಕಳ ನಾಡು
ಭಾರತವೊಂದಿದೆ ಕ್ಷಿತಿಯಲ್ಲಿ ನೋಡು ||
ಷಣ್ಮುಖ ದಳಪತಿ ನವಿಲೇರಿದರೆ
ದಂಡಿನ ಹಿಂಡೇ ನೆರೆವುದು ಬೇರೆ ||

ಹಸಿವೆಯ ಹುಚ್ಚಿನ ಹೊಟ್ಟೆಯ ಕಿಚ್ಚಿಗೆ
ಕದನಕು ಕೃಷಿಹಿತವೆನಿಸಿದೆ ಹೆಚ್ಚಿಗೆ ||
ಹಗೆತನದಲಿ ನಾವ್ ಸಾವುದು ಬೇಡ
ಬದುಕುಳಿದರೆ ಗೆಳೆಗೆಳೆಯರು ನೋಡ ||

ಯಾಕೀ ಸಾವಿಗೆ ಬಲಿಯಾಗುವಿರಿ ?
ಚೀಣರೆ ತೋಲಗಿದರೇ ಬದುಕುವಿರಿ ||
*****

ಚೀನಾ ಆಕ್ರಮಣ ಸಂದರ್ಭದಲ್ಲಿ ರಚಿಸಿದ್ದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಠಾಯಿ ಕೊಡುವೆನು ಮಳೆಯಣ್ಣಾ
Next post ಅಂತೂ ಸಾಹಿತಿಯಾಗಿಬಿಟ್ರಲ್ಲಾ……!

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…