ಪ್ರತಿಮೆ

ಕಂಬನಿಯ ಕಪ್ಪು ಸಮುದ್ರದ ಆಚೆ ಅಗೋ
ಉಪ್ಪು ಹರಳುಗಟ್ಟಲಾರಂಭಿಸಿದೆ
ಪ್ರಾಣಾಯಾಮಕ್ಕೆ ಬಿಗಿ ಹಿಡಿದ ಉಸಿರು
ಈಚೆ ಕಡೆಯಿಂದ ಹೊರ ಜಿಗಿದಿದೆ
ಸ್ಥಿತಪ್ರಜ್ಞೆ ಕಲ್ಲುಬಂಡೆಯ ಕೊರಕು
ಹೂ ಬಿಡಲು ಎದ್ದಿರುವ ಜೀವಕ್ಕೆ
ತಾಯಾಗಿದೆ
ಅವಕಾಶದ ಅವಗೃಹೀತ ಖಾಲಿ ಜಾಗಕ್ಕೆ
ಉಲ್ಕೆಯೊಂದು ಮೇಲೇರಿದೆ

ಮಳೆಗಾಲದ ಕೆಸರಿನ ತುಷಾರ
ಸಿಂಚನ ಗೈದು ಓ-
ಡಿದೆ ವಾಹನ
ಕೊಳಕಾದ ಬಟ್ಟೆಯೊಳಗೆ
ಕೆಂಪಾಗಿ ಕುಪಿಸಿದೆ ಜೀವ

ಚಳಿಯ ಒತ್ತರ ತಾಳಲಾರದೆ ದಮ್ಮು
ಉತ್ತರಾಯಣಕ್ಕೆ ದಿನ ಎಣಿಸಿದೆ
ಸ್ವರ್ಗದ ಬಾಗಿಲು ತೆರಯುವ ಅಮೂರ್ತ ಮುಹೂರ್ತಕ್ಕೆ
ಜೀವ ಜೀವದಲ್ಲಿ ಸ್ವರ ಸಂಚಾರ ಸ್ವರ ಸಂ
ಚಾರ

ನಾನು ಭೌತ ವಿಜ್ಞಾನದ ಹುಡುಗ
ಅಳೆದೇಬಿಡುವೆ ಅದರ
ಕಂಪನ ವಿಸ್ತಾರ
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಳಗ ಖೇಲ ಬಲ ಮುರಿದೆದ್ದಿತು
Next post ಧ್ಯಾನ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys