Home / ಲೇಖನ / ನಗೆ ಹನಿ / ನಗೆ ಡಂಗುರ – ೯೯

ನಗೆ ಡಂಗುರ – ೯೯

ಪಕ್ಕದ ಮನೆಯಲ್ಲಿ ಗಲಾಟೆಯೋ ಗಲಾಟೆ ಅದೇನು ಜಗಳವೋ ಮಾತುಕತೆಯೋ ಒಂದು ಗೊತ್ತಾಗುವಂತಿಲ್ಲ. ಶಾಮಣ್ಣನವರಿಗೆ ನಿದ್ರೆ ಭಂಗವಾಯಿತು. ಈ ಗಲಾಟೆಯನ್ನು ತಪ್ಪಿಸುವುದು ಹೇಗೆ ಎಂದು ಚಿಂತಿಸುತ್ತಾ ಒಂದು ಉಪಾಯ ಹುಡುಕಿದರು. ಎದ್ದವರೇ ಸೀದಾ ಒಂದು ದೊಡ್ಡ ಚೀಲವನ್ನು ಹಿಡಿದು ಪಕ್ಕದ ಮನೆ ಬಾಗಿಲು ಬಡಿದರು. ಒಳಗಿನಿಂದ ಒಬ್ಬ ಆಸಾಮಿ ಬಂದು “ಏನು ಬೇಕಿತ್ತು?” ಎಂದು ಕೇಳಿದ. “ನನಗೆ ಒಂದು ಕೇಜಿ ಫಿಶ್ ಬೇಕು. ಫ್ರೆಶ್ಶಾಗಿರೋದನ್ನು ಈ ಚೀಲದಲ್ಲಿ ತುಂಬಿಕೊಡು. ಹಣ ನಾನು ಕೊಡುತ್ತೇನೆ.” ಎಂದರು. ಆಸಾಮಿಗೆ ಕೆಟ್ಟ ಕೋಪಬಂದು, “ರೀ ಸ್ವಾಮಿ, ಇದೇನು ಫಿಶ್ ಮಾರ್ಕೆಟ್ ಕೆಟ್ಟು ಹೋಯಿತಾ, ನಿಮಗೆ ಫಿಶ್ ಕೊಡಲು?”
ಕೇಳಿದ. ಅಷ್ಟರಲ್ಲೇ ಒಳಗಿನಿಂದ ನಾಲ್ಕಾರು ಜನ ತಮ್ಮ ಗಲಾಟೆ ನಿಲ್ಲಿಸಿ ಬಾಗಿಲ ಬಳಿಗೆ ಬಂದರು. ಶಾಮಣ್ಣನವರು ಶಾಂತವಾಗಿ “ಹೌದಾ, ಇದು ಫಿಶ್ ಮಾರ್ಕೆಟ್ ಅಲ್ಲಾ, ಅಲ್ಲವೆ? ನನಗೆ ಹೊಳೆಯಲೇ ಇಲ್ಲ. ಅದೂ ಬೋರ್ಡು ಸಹ ತಾವು ಹಾಕಿಸಿಲ್ಲ. ಈ ಗಲಾಟೆಯನ್ನು ಕೇಳಿ ಇದು ಫಿಶ್ ಮಾರ್ಕೆಟ್ಟೇ ಹೌದು, ಬೋರ್ಡು ಬರೆಯುವುದಕ್ಕೆ ಕಳುಹಿಸಿರಬೇಕು ಎಂದುಕೊಂಡೆ. ಕ್ಷಮಿಸಿರಿ.” ಎಂದರು. ಅಂದಿನ ರಾತ್ರಿಯಿಂದಲೇ ಫಿಶ್ ಮಾರ್ಕೆಟ್ನಂತಹ ಗಲಾಟೆ ನಿಂತು ಎಲ್ಲರೂ ಗಪ್‌ಚಿಪ್ ಆಗಿ ಉಳಿದರು!
***

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...