Home / ಕವನ / ಕವಿತೆ / ಅಘನಾಶಿನಿ

ಅಘನಾಶಿನಿ

ಇಂದು ಅಘನಾಶಿನಿಯ ಬಗೆಗೆ ಮಾತಾಡುವೆ
ನನ್ನೊಲವಿನ ಅಘನಾಶಿನಿ ಆ ಊರು ನದಿ ಮತ್ತು ದಡ
ಇಲ್ಲಿ ನಾನು ಅವತರಿಸಿದೆ ನಿನ್ನ ಪ್ರೀತಿಯ ಅಘನಾಶಿನಿಗೆ
ಅದರ ಅಪಾರ ಜಲರಾಶಿಗೆ ನನಗೆ ಸ್ಪಷ್ಟ ಕೇಳಿಸುವ
ಆ ಜೀವದ ಮೂಲ ಚೈತನ್ಯದ ನಾಡಿ ಮಿಡಿತಕ್ಕೆ
ಇಲ್ಲಿ ಅಂಬಿಗರು ಹಾಕುವ ಹುಟ್ಟು ಆ ಹುಟ್ಟು
ಚಿಮ್ಮಿಸುವ ನೀರಿನ ಕಣಗಳ ಕುಣಿತ ಆಟಕ್ಕೆ
ಮೌನದಲ್ಲಿ ಭೋರ್ಗರೆಯುವ ಇಲ್ಲಿಯ ಅಲೆಗಳ ಕಲ್ಲುಬಡಿತಕ್ಕೆ
ಭರತಕ್ಕೆ ಇಳಿತಕ್ಕೆ
ನನ್ನ ಭಾವನೆಗಳನ್ನು ಕವಿತೆಗಳನ್ನು ಅಕ್ಷರ ಶಬ್ದಗಳನ್ನು
ಒಪ್ಪಿಸುವೆ ಪ್ರಿಯ ಅಘವಾಶಿನಿ

ಈ ನದಿಯನ್ನು ದಾಟಿ ಯಾರಾರೋ ಬರುವರು
ಅವರು ತಂದಿದ್ದರೆ ಸೈಕಲ್ಲನ್ನು
ಅಂಬಿಗರು ದಡಕ್ಕೆ ಹೊತ್ತು ತರುವರು ದೋಣಿ
ಅಲ್ಲಿಂದ ಇಲ್ಲಿಗೂ ಇಲ್ಲಿಂದ ಅಲ್ಲಿಗೂ
ಹೋಗುತ್ತಲಿರುವುದು

ಗಾಳಿ ಮಳೆಗೆ ಹಾಯಿ ಬಿಚ್ಚಿಕೊಳ್ಳುವುದು
ಅದರ ಸಹಸ್ರ ತೂತುಗಳಲ್ಲಿ ನನ್ನವರ ಬಡತನ
ನಿನ್ನ ಒಡಲಾಳದಲ್ಲಿ
ಯಾವಾವ ಜಾತಿಯ ಮೀನುಗಳು ಹುದುಗಿವೆ
ಇವರ ನಿರಕ್ಷರತೆ ದಾರಿದ್ರ್ಯ ಹಸಿವು ಸರಳ
ಹಾಗೂ ಕಠಿಣ
ಸರಾಯಿ ಘಮ್ಮೆಂದು ಮೂಗಿಗೆ ಬಡಿಯುವ ಬದುಕು
ಯಾವ ಕೈಯಲ್ಲಿ ಬರೆದೆ
ಇವರನ್ನು ದಡದಲ್ಲಿ ಕುಳ್ಳಿರಿಸಿ
ನೀನು ಯಾವಾವ ಲೋಕಕ್ಕೆ ನಡೆವೆ ನಿನ್ನ
ಗುಟ್ಟು ಬಗೆಯಲು ಕಾತರಿಸಿರುವೆ
ಉಪ್ಪು ನೀರಿನ ಒಳಗೂ ಸಿಹಿ
ತುಂಬಿ ತುಳುಕುವುದು ತದಡಿಯ ದಡಕ್ಕೊತ್ತಿ ನಿಂತ
ಲಾಂಚುಗಳು ರಾತ್ರಿಯ ಬೆಳಕಲ್ಲಿ
ದೋಣಿಗಳ ಕಂಡು ನಗಲಾರಂಭಿಸಿವೆ ತಾರೆಗಳು
ನೀರಲ್ಲಿ ಮುಖ ನೋಡಿ ರಾತ್ರಿಯ ಆಟಕ್ಕೆ
ಸಜ್ಜಾಗಿವೆ ತೇಲಿ ತೇಲಿ ಬರುತ್ತಿವೆ ನೆನಪುಗಳು
ಅಘನಾಶಿನಿ ಎಂದಾದರೊಂದು ದಿನ
ಈ ಕವಿತೆ ಪೂರ್ತಿ ಮಾಡುವೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...