Home / ಕವನ / ಕವಿತೆ / ಅಘನಾಶಿನಿ

ಅಘನಾಶಿನಿ

ಇಂದು ಅಘನಾಶಿನಿಯ ಬಗೆಗೆ ಮಾತಾಡುವೆ
ನನ್ನೊಲವಿನ ಅಘನಾಶಿನಿ ಆ ಊರು ನದಿ ಮತ್ತು ದಡ
ಇಲ್ಲಿ ನಾನು ಅವತರಿಸಿದೆ ನಿನ್ನ ಪ್ರೀತಿಯ ಅಘನಾಶಿನಿಗೆ
ಅದರ ಅಪಾರ ಜಲರಾಶಿಗೆ ನನಗೆ ಸ್ಪಷ್ಟ ಕೇಳಿಸುವ
ಆ ಜೀವದ ಮೂಲ ಚೈತನ್ಯದ ನಾಡಿ ಮಿಡಿತಕ್ಕೆ
ಇಲ್ಲಿ ಅಂಬಿಗರು ಹಾಕುವ ಹುಟ್ಟು ಆ ಹುಟ್ಟು
ಚಿಮ್ಮಿಸುವ ನೀರಿನ ಕಣಗಳ ಕುಣಿತ ಆಟಕ್ಕೆ
ಮೌನದಲ್ಲಿ ಭೋರ್ಗರೆಯುವ ಇಲ್ಲಿಯ ಅಲೆಗಳ ಕಲ್ಲುಬಡಿತಕ್ಕೆ
ಭರತಕ್ಕೆ ಇಳಿತಕ್ಕೆ
ನನ್ನ ಭಾವನೆಗಳನ್ನು ಕವಿತೆಗಳನ್ನು ಅಕ್ಷರ ಶಬ್ದಗಳನ್ನು
ಒಪ್ಪಿಸುವೆ ಪ್ರಿಯ ಅಘವಾಶಿನಿ

ಈ ನದಿಯನ್ನು ದಾಟಿ ಯಾರಾರೋ ಬರುವರು
ಅವರು ತಂದಿದ್ದರೆ ಸೈಕಲ್ಲನ್ನು
ಅಂಬಿಗರು ದಡಕ್ಕೆ ಹೊತ್ತು ತರುವರು ದೋಣಿ
ಅಲ್ಲಿಂದ ಇಲ್ಲಿಗೂ ಇಲ್ಲಿಂದ ಅಲ್ಲಿಗೂ
ಹೋಗುತ್ತಲಿರುವುದು

ಗಾಳಿ ಮಳೆಗೆ ಹಾಯಿ ಬಿಚ್ಚಿಕೊಳ್ಳುವುದು
ಅದರ ಸಹಸ್ರ ತೂತುಗಳಲ್ಲಿ ನನ್ನವರ ಬಡತನ
ನಿನ್ನ ಒಡಲಾಳದಲ್ಲಿ
ಯಾವಾವ ಜಾತಿಯ ಮೀನುಗಳು ಹುದುಗಿವೆ
ಇವರ ನಿರಕ್ಷರತೆ ದಾರಿದ್ರ್ಯ ಹಸಿವು ಸರಳ
ಹಾಗೂ ಕಠಿಣ
ಸರಾಯಿ ಘಮ್ಮೆಂದು ಮೂಗಿಗೆ ಬಡಿಯುವ ಬದುಕು
ಯಾವ ಕೈಯಲ್ಲಿ ಬರೆದೆ
ಇವರನ್ನು ದಡದಲ್ಲಿ ಕುಳ್ಳಿರಿಸಿ
ನೀನು ಯಾವಾವ ಲೋಕಕ್ಕೆ ನಡೆವೆ ನಿನ್ನ
ಗುಟ್ಟು ಬಗೆಯಲು ಕಾತರಿಸಿರುವೆ
ಉಪ್ಪು ನೀರಿನ ಒಳಗೂ ಸಿಹಿ
ತುಂಬಿ ತುಳುಕುವುದು ತದಡಿಯ ದಡಕ್ಕೊತ್ತಿ ನಿಂತ
ಲಾಂಚುಗಳು ರಾತ್ರಿಯ ಬೆಳಕಲ್ಲಿ
ದೋಣಿಗಳ ಕಂಡು ನಗಲಾರಂಭಿಸಿವೆ ತಾರೆಗಳು
ನೀರಲ್ಲಿ ಮುಖ ನೋಡಿ ರಾತ್ರಿಯ ಆಟಕ್ಕೆ
ಸಜ್ಜಾಗಿವೆ ತೇಲಿ ತೇಲಿ ಬರುತ್ತಿವೆ ನೆನಪುಗಳು
ಅಘನಾಶಿನಿ ಎಂದಾದರೊಂದು ದಿನ
ಈ ಕವಿತೆ ಪೂರ್ತಿ ಮಾಡುವೆ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...