ಸಹಕರಿಸಿ ಪ್ಲೀಜ್

ಕಾತರದಿ ಪುಸ್ತಕ ಹಿಡಿದ ಮಗು
ಸ್ಪಷ್ಟಿಕರಣಕೆ ಬಂದು ತಂತು ನಗು
ಕೇಳಿತು ಅಪ್ಪ ಇದರರ್ಥ ಹೇಳು
ಸಿಡುಕಿ ಹೇಳಿದ ನಿಂದೇನೋ ಗೋಳು?

ಆ ಮಗು ಅಮ್ಮನ ಬಳಿ ಸಾರಿತು
ಬಾಯಿ ತೆರೆವ ಮೊದಲೇ ಸಿಟ್ಟಿನಲಿ
ಅವನತ್ತ ನೋಡದೆ ಗುಡುಗಿದಳಾಕೆ
ನನಗೆ ಒಟ್ಟಿದೆ ಕೆಲಸ ಎಂದು ದೂಕಿದಳು

ಅಣ್ಣ ಅಕ್ಕರ ಬಳಿಗೆ ಹೋದನು ಸಮಸ್ಯೆ ಹೊತ್ತು
ನಮದೇ ಸಾಕಾಗಿದೆ ಬಂದ ಇವನೊಬ್ಬ ಕತ್ತೆ
ಎಂದು ಛೇಡಿಸಿ ಹೊರಗಟ್ಟಿದರು
ತಮ್ಮಯ ಕೆಲಸದಲಿ ಮುಳುಗಿದರು

ಅಜ್ಜ ಅಜ್ಜಿಯ ಹತ್ತಿರ ಹೋದರೆ
ಎಂದರು ಕೊಡಬೇಡಪ ನಮಗೆ ತೊಂದರೆ
ಆರಾಮ ಇಲ್ಲ ಕಣ್ಣು ಕಾಣಲ್ಲ
ನಿನ್ನ ಉಸಾಬರಿ ನಮಗೆ ಬೇಕಿಲ್ಲ

ಇಂಥ ಅಸಹಕಾರ ಕುಟುಂಬದೊಂದಿಗೆ
ಹೇಳಿ ಮಗು ಏಗುವುದು ಹೇಗೆ?
ಮಾಡುವ ಕೆಲಸವ ಕ್ಷಣ ಬದಿಗಿಟ್ಟು
ಬಗೆಹರಿಸಿ ಸಮಸ್ಯೆ ಮನಸುಗೊಟ್ಟು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಟ್ಟನ ತೋಟ
Next post ‘ಮೋಹ ಮತ್ತು ಸಾವು’ ಇವುಗಳ ಪ್ರತಿಬಿಂಬ-ಟಾಲ್ ಸ್ಟಾಯ್‌ರ `Anna Karenina’

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys