Home / ಲೇಖನ / ವಿಜ್ಞಾನ / ಗಾಢಂಧಕ್ಕಾರದಲ್ಲಿಯೂ ಚಿತ್ರ (ಎವಾ ಫೋಟಾಗ್ರಫಿ)

ಗಾಢಂಧಕ್ಕಾರದಲ್ಲಿಯೂ ಚಿತ್ರ (ಎವಾ ಫೋಟಾಗ್ರಫಿ)

ಕಗ್ಗತಲಲ್ಲಿ ಯಾವ ಬೆಳಕಿನ ಸಹಾಯವಿಲ್ಲದೇ ಚಿತ್ರ ಕ್ಲಿಕ್ಕಿಸುವ ಶೋಧನೆಗಳಾಗಿವೆ. ಇಂಥಹ ಚಿತ್ರಗಳನ್ನು ತೆಗೆದು ಪ್ರದರ್ಶಿಸಿದ ಪ್ರಥಮ ಸಂಶೋಧಕ ಎಂದರೆ ಬೇರ್‍ಡೆ, ಅವನ ಸಹಾಯಕರು. ಈ ಕ್ಯಾಮರಾವು ವಿದ್ಯುತ್ ಶಕ್ತಿಯನ್ನು ಉಪಯೋಗಿಸದೇ ಗಾಢಂಧಾಕ್ಕಾರದಲ್ಲಿಯೂ ಸಹ ೨೦೦ ಗಜಗಳ ದೂರದಲ್ಲಿ ನಿಂತಿರುವ ಮನುಷ್ಯನ ಅಥವಾ ಒಂದು ಮೈಲು ದೂರದಲ್ಲಿ ಕತ್ತಲೆಯಲ್ಲಿರುವ ಮನೆಯ ಚಿತ್ರಗಳನ್ನು ಸೆರೆಹಿಡಿಯ ಬಲ್ಲಸಾಮರ್ಥ್ಯ ಹೊಂದಿದೆ. ಇ.ವಿ.ಎ. ಸಾಧನದ ಕಾರ್ಯ ವಿಧಾನವು ಸಾಮಾನ್ಯ ಕ್ಯಾಮರಾದಂತೆಯೆ ಬೆಳಕಿನ ಬದಲು ವಸ್ತುವಿನಿಂದ ಹೊರಚಿಮ್ಮುವ ಕಿರಣಗಳನ್ನು ಸೆರೆಹಿಡಿದು ತೆಳುವಾದ ತೈಲದಿಂದ ಲೇಪಿತವಾಗಿರುವ ಮೆಲ್ಮೈ ಆ ವಸ್ತುವಿನ ಚಿತ್ರಣವನ್ನುಂಟುಮಾಡುತ್ತದೆ. ತೈಲ ಲೇಪಿತ ಪಟದ ಮೇಲೆ ಇನ್ಫ್ರಾರೆಡ್‌ಕಿರಣಗಳು ತಾಗಿದ ಭಾಗದಲ್ಲಿ ಅವುಗಳ ಶಾಖದ ತೀಷ್ಟತೆಯಿಂದಾಗಿ ತೈಲವು ಕರಗಿ ಆವಿಯಾಗಿ ಹೋಗುತ್ತದೆ. ವಸ್ತುವಿನ ವಿವಿಧ ಭಾಗಗಳಿಂದ ವಿವಿಧ ತೀಕ್ಷ್ಣತೆಯ ಕಿರಣಗಳು ತೈಲ ಫಲಕದ ಮೇಲೆ ಬಿದ್ದಾಗ ಆಯಾ ಭಾಗಗಳ ಪ್ರತಿರೂಪವು ಕಪ್ಪು ಬಿಳುಪಾಗಿ ಚಿತ್ರಿಸಲಾಗುತ್ತದೆ. ಇನ್ನೂ ಸ್ಪಷ್ಟವಾದ ಚಿತ್ರವನ್ನು ಇ.ವಿ.ಎ. ಸಾಧನದೊಂದಿಗೆ ಅಳವಡಿಸಿರುವ ಸಾಧಾರಣ ಕ್ಯಾಮರಾದಿಂದ ಪಡೆಯಬಹುದು.

ಎವಾಪೊರಾಗ್ರಫಿ ಒಂದು ಸಣ್ಣಪೆಟ್ಟಿಗೆಯಿಂದ ಮಾಡಲ್ಪಟ್ಟಿದೆ. ಇದರ ಒಂದು ಬದಿಗೆ ಗಾಜಿನ ಕಿಟಕಿ ಇದೆ. ಇದಕ್ಕೆ ಎದುರಾಗಿ ಎಣ್ಣೆಯಿಂದ ಲೇಪಿತವಾದ ಒಂದು ಪಟಲವಿರುತ್ತದೆ. ಇವೆರಡಕ್ಕೂ ನಡುವೆ ಇನ್ಫ್ರಾರೆಡ್ ಕಿರಣಗಳನ್ನು ಸೇರಬಲ್ಲ ಕೆಲವು ಸೂಕ್ಷ್ಮ ಉಪಕರಣಗಳಿರುತ್ತವೆ. ಸಾಮಾನ್ಯ ಬೆಳಕಿನ ಕಿರಣಗಳು ಈ ಕ್ಯಾಮರಾದ ಮೇಲೆ ಯಾವ ಪರಿಣಾಮವನ್ನು ಉಂಟುಮಾಡುವುದಿಲ್ಲ.

ಉಪಯೋಗಗಳು : E.V.A. ಕ್ಯಾಮರಾದ ಸಹಾಯದಿಂದ ಯುದ್ಧ ಕಾಲದಲ್ಲಿ ಶತ್ರುಗಳಿಗೆ ಗೊತ್ತಾಗದಂತೆ ಅವರ ಸೈನ್ಯದ ಚಿತ್ರಗಳನ್ನು ತೆಗೆಯಬಹುದಾಗಿದೆ. ಶತ್ರುಗಳ ಗುಪ್ತ ಕಾರ್ಯ ಸ್ಥಾನಗಳ ಛಾಯಾಚಿತ್ರಗಳನ್ನು ಗಾಢಾಂದಕ್ಕಾರದಲ್ಲಿಯೂ ಸೆರೆಹಿಡಿಯಬಹುದಾಗಿದೆ. ಭೂಗರ್ಭದಲ್ಲಿಡಗಿರುವ ಕಾರ್ಖಾನೆಗಳೂ ಸಹ ಬೆಕ್ಕಿನ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗುವದೇ ಇಲ್ಲ. ಕೈಗಾರಿಕಾರಂಗದಲ್ಲಿಯೂ ಇದರ ಉಪಯೋಗ ಇಲ್ಲದಿಲ್ಲ. ಯಂತ್ರಗಳು ಕೆಲಸ ಮಾಡುತ್ತಿರುವಾಗಲೇ ಅವುಗಳನ್ನು E.V.A.ಕ್ಯಾಮರಾಗಳಿಂದ ವಿಕ್ಷೀಸಿ ಯಾವ ಭಾಗಗಳನ್ನು ಬದಲಿಸಿ ಮುಂದೊದಗಬಹುದಾಗಿದ್ದ ಅಪಾಯವನ್ನು ತಪ್ಪಿಸಬಹುದು ಎಂದು ತಿಳಿಸುತ್ತದೆ. ರಾತ್ರಿಯ ಗಾಢಾಂಧಕಾರದಲ್ಲಿ ನೀರಿನಲ್ಲಿ ಮುಳುಗಿ ಹೋದ ಮನುಷ್ಯ ಅಥವಾ ಇತರ ಉಪಯುಕ್ತ ವಸ್ತುಗಳು ಇರುವ ಸ್ಥಳವನ್ನು ಗುರುತಿಸಲು E.V.A.ಸಾಧನದಿಂದ ಸಾಧ್ಯವಾಗುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...