Home / ಲೇಖನ / ವಿಜ್ಞಾನ / ಗಾಢಂಧಕ್ಕಾರದಲ್ಲಿಯೂ ಚಿತ್ರ (ಎವಾ ಫೋಟಾಗ್ರಫಿ)

ಗಾಢಂಧಕ್ಕಾರದಲ್ಲಿಯೂ ಚಿತ್ರ (ಎವಾ ಫೋಟಾಗ್ರಫಿ)

ಕಗ್ಗತಲಲ್ಲಿ ಯಾವ ಬೆಳಕಿನ ಸಹಾಯವಿಲ್ಲದೇ ಚಿತ್ರ ಕ್ಲಿಕ್ಕಿಸುವ ಶೋಧನೆಗಳಾಗಿವೆ. ಇಂಥಹ ಚಿತ್ರಗಳನ್ನು ತೆಗೆದು ಪ್ರದರ್ಶಿಸಿದ ಪ್ರಥಮ ಸಂಶೋಧಕ ಎಂದರೆ ಬೇರ್‍ಡೆ, ಅವನ ಸಹಾಯಕರು. ಈ ಕ್ಯಾಮರಾವು ವಿದ್ಯುತ್ ಶಕ್ತಿಯನ್ನು ಉಪಯೋಗಿಸದೇ ಗಾಢಂಧಾಕ್ಕಾರದಲ್ಲಿಯೂ ಸಹ ೨೦೦ ಗಜಗಳ ದೂರದಲ್ಲಿ ನಿಂತಿರುವ ಮನುಷ್ಯನ ಅಥವಾ ಒಂದು ಮೈಲು ದೂರದಲ್ಲಿ ಕತ್ತಲೆಯಲ್ಲಿರುವ ಮನೆಯ ಚಿತ್ರಗಳನ್ನು ಸೆರೆಹಿಡಿಯ ಬಲ್ಲಸಾಮರ್ಥ್ಯ ಹೊಂದಿದೆ. ಇ.ವಿ.ಎ. ಸಾಧನದ ಕಾರ್ಯ ವಿಧಾನವು ಸಾಮಾನ್ಯ ಕ್ಯಾಮರಾದಂತೆಯೆ ಬೆಳಕಿನ ಬದಲು ವಸ್ತುವಿನಿಂದ ಹೊರಚಿಮ್ಮುವ ಕಿರಣಗಳನ್ನು ಸೆರೆಹಿಡಿದು ತೆಳುವಾದ ತೈಲದಿಂದ ಲೇಪಿತವಾಗಿರುವ ಮೆಲ್ಮೈ ಆ ವಸ್ತುವಿನ ಚಿತ್ರಣವನ್ನುಂಟುಮಾಡುತ್ತದೆ. ತೈಲ ಲೇಪಿತ ಪಟದ ಮೇಲೆ ಇನ್ಫ್ರಾರೆಡ್‌ಕಿರಣಗಳು ತಾಗಿದ ಭಾಗದಲ್ಲಿ ಅವುಗಳ ಶಾಖದ ತೀಷ್ಟತೆಯಿಂದಾಗಿ ತೈಲವು ಕರಗಿ ಆವಿಯಾಗಿ ಹೋಗುತ್ತದೆ. ವಸ್ತುವಿನ ವಿವಿಧ ಭಾಗಗಳಿಂದ ವಿವಿಧ ತೀಕ್ಷ್ಣತೆಯ ಕಿರಣಗಳು ತೈಲ ಫಲಕದ ಮೇಲೆ ಬಿದ್ದಾಗ ಆಯಾ ಭಾಗಗಳ ಪ್ರತಿರೂಪವು ಕಪ್ಪು ಬಿಳುಪಾಗಿ ಚಿತ್ರಿಸಲಾಗುತ್ತದೆ. ಇನ್ನೂ ಸ್ಪಷ್ಟವಾದ ಚಿತ್ರವನ್ನು ಇ.ವಿ.ಎ. ಸಾಧನದೊಂದಿಗೆ ಅಳವಡಿಸಿರುವ ಸಾಧಾರಣ ಕ್ಯಾಮರಾದಿಂದ ಪಡೆಯಬಹುದು.

ಎವಾಪೊರಾಗ್ರಫಿ ಒಂದು ಸಣ್ಣಪೆಟ್ಟಿಗೆಯಿಂದ ಮಾಡಲ್ಪಟ್ಟಿದೆ. ಇದರ ಒಂದು ಬದಿಗೆ ಗಾಜಿನ ಕಿಟಕಿ ಇದೆ. ಇದಕ್ಕೆ ಎದುರಾಗಿ ಎಣ್ಣೆಯಿಂದ ಲೇಪಿತವಾದ ಒಂದು ಪಟಲವಿರುತ್ತದೆ. ಇವೆರಡಕ್ಕೂ ನಡುವೆ ಇನ್ಫ್ರಾರೆಡ್ ಕಿರಣಗಳನ್ನು ಸೇರಬಲ್ಲ ಕೆಲವು ಸೂಕ್ಷ್ಮ ಉಪಕರಣಗಳಿರುತ್ತವೆ. ಸಾಮಾನ್ಯ ಬೆಳಕಿನ ಕಿರಣಗಳು ಈ ಕ್ಯಾಮರಾದ ಮೇಲೆ ಯಾವ ಪರಿಣಾಮವನ್ನು ಉಂಟುಮಾಡುವುದಿಲ್ಲ.

ಉಪಯೋಗಗಳು : E.V.A. ಕ್ಯಾಮರಾದ ಸಹಾಯದಿಂದ ಯುದ್ಧ ಕಾಲದಲ್ಲಿ ಶತ್ರುಗಳಿಗೆ ಗೊತ್ತಾಗದಂತೆ ಅವರ ಸೈನ್ಯದ ಚಿತ್ರಗಳನ್ನು ತೆಗೆಯಬಹುದಾಗಿದೆ. ಶತ್ರುಗಳ ಗುಪ್ತ ಕಾರ್ಯ ಸ್ಥಾನಗಳ ಛಾಯಾಚಿತ್ರಗಳನ್ನು ಗಾಢಾಂದಕ್ಕಾರದಲ್ಲಿಯೂ ಸೆರೆಹಿಡಿಯಬಹುದಾಗಿದೆ. ಭೂಗರ್ಭದಲ್ಲಿಡಗಿರುವ ಕಾರ್ಖಾನೆಗಳೂ ಸಹ ಬೆಕ್ಕಿನ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗುವದೇ ಇಲ್ಲ. ಕೈಗಾರಿಕಾರಂಗದಲ್ಲಿಯೂ ಇದರ ಉಪಯೋಗ ಇಲ್ಲದಿಲ್ಲ. ಯಂತ್ರಗಳು ಕೆಲಸ ಮಾಡುತ್ತಿರುವಾಗಲೇ ಅವುಗಳನ್ನು E.V.A.ಕ್ಯಾಮರಾಗಳಿಂದ ವಿಕ್ಷೀಸಿ ಯಾವ ಭಾಗಗಳನ್ನು ಬದಲಿಸಿ ಮುಂದೊದಗಬಹುದಾಗಿದ್ದ ಅಪಾಯವನ್ನು ತಪ್ಪಿಸಬಹುದು ಎಂದು ತಿಳಿಸುತ್ತದೆ. ರಾತ್ರಿಯ ಗಾಢಾಂಧಕಾರದಲ್ಲಿ ನೀರಿನಲ್ಲಿ ಮುಳುಗಿ ಹೋದ ಮನುಷ್ಯ ಅಥವಾ ಇತರ ಉಪಯುಕ್ತ ವಸ್ತುಗಳು ಇರುವ ಸ್ಥಳವನ್ನು ಗುರುತಿಸಲು E.V.A.ಸಾಧನದಿಂದ ಸಾಧ್ಯವಾಗುತ್ತದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...