Home / ಲೇಖನ / ಕೃಷಿ / ಕಳೆಗಿಡಿಗಳಿಂದ ಗೊಬ್ಬರ

ಕಳೆಗಿಡಿಗಳಿಂದ ಗೊಬ್ಬರ

ಯಾವುದೇ ಬೆಳೆಗಳ ನಡುನಡುವೆ ಕಸದಂತಹ ಕಳೆಗಿಡಗಳು ಬೆಳೆದು ಬಿತ್ತಿದ ಸಸಿಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಭೂಮಿಯಲ್ಲಿಯ ಸಾರವನ್ನೆಲ್ಲ ಹೀರಿಮೂಲ ಸಸಿಗಳಿಗೆ ಆಹಾರ ಮತ್ತು ನೀರು ಪೂರೈಕೆಯಾಗದಂತೆ ಈ ಕಳೆ ಕಸವೇ ಹೀರಿಕೊಳ್ಳುತ್ತದೆ. ಅದರಲ್ಲೂ ‘ಯುಪಟೋರಿಯಮ್’ ಕಳೆ ಸಸ್ಯಮಾತ್ರ ಹವೆಯ ವ್ಯೆಪರಿತ್ಯದಲ್ಲೂ ಬೆಳೆಯುತ್ತದೆ. ಆರುವರೆ ಸಾವಿರ ಎತ್ತರದ ಪ್ರದೇಶಗಳವರೆಗೆ ಹುಲುಸಾಗಿ ಬೆಳೆಯುವ ಈ ಕಳೆಗಿಡವು ಭೂಸಾರವನ್ನೆಲ್ಲ ಹೀರುವುದರಿಂದ ಅಕ್ಕಪಕ್ಕದಲ್ಲಿ ಬೇರೆ ಸಸ್ಯಗಳು ಬೆಳೆಯದಂತೆ ಮಾಡುತ್ತದೆ. ಜತೆಗೆ ಅರಣ್ಯನಾಶಕ್ಕೂ ಕಾರಣವಾಗುವ ಈ ಕಳೆಗಿಡವನ್ನು ನಿಯಂತ್ರಿಸಲು ಅರಣ್ಯವಿಜ್ಞಾನಿಗಳು ಶ್ರಮಿಸುತ್ತಾರೆ.

ಇತ್ತೀಚೆಗೆ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಯು ಒಂದು ಸರಳವಾದ ವಿಧಾನವನ್ನು ಕಂಡುಹಿಡಿದು ಈ ಯುಪಟೋರಿಯಂ, ಗಿಡಗಳಿಂದ ‘ಕಾಂಪೋಸ್ಟ್’ವನ್ನಾಗಿ ಪರಿವರ್ತಿಸುವಲ್ಲಿ ಸಫಲರಾಗಿದ್ದಾರೆ. ಈ ಯುಪಟೋರಿಯಂ, ಗಿಡಗಳನ್ನು ಒಂದೆಡೆ ಸಂಗ್ರಹಿಸಿ ಸಣ್ಣಸಣ್ಣ ಚೂರುಗಳನ್ನಾಗಿ ಕತ್ತರಿಸಿ ವಿಶೇಷ ರೀತಿಯ ವಿನ್ಯಾಸದಲ್ಲಿ ಕೊಠಿಡಿಗಳಲ್ಲಿ ತುಂಬುತ್ತಾರೆ. ಈ ಕೊಠಿಡಿಗಳ ಛಾವಣಿಯನ್ನು ಫೈಬರ್ ಗ್ಲಾಸಿನಿಂದ ಹೊದಿಸಿರುತ್ತಾರೆ. ಈ ಫೈಬರ್ ಗ್ಲಾಸ್ ಹೊದಿಕೆಯನ್ನು ಬಳೆಸುವುದರಿಂದ ಕೊಠಿಡಿಯೊಳಗೆ ಬಿಸಿಲಿನ ಮುಖಾಂತರ ಪ್ರವೇಶಿಸಿದ ಉಷ್ಣತೆಯು ಮತ್ತೆ ಹೊರಬಲಾರದೇ ಅಲ್ಲಿಯೇ ಉಳಿಯುತ್ತದೆ. ಕತ್ತರಿಸಿದ ಕಳೆಗಿಡಗಳ ತುಂಡುಗಳನ್ನು ಸೇರಿಸಿಟ್ಟಿದ್ದರಿಂದ ತೇವವು ಆರುವುದಿಲ್ಲ ಅದರಂತೆ ಮೊದಲು ಆಗಾಗ ನೀರನ್ನು ಹಾಕುತ್ತಾರೆ. ಬಿಸಿಲಿನ ಉಷ್ಣತೆಯನ್ನು ಇಷ್ಟಪಡುವ ಎಷ್ಟೋ ಬಗೆಯ ಸೂಕ್ಷ್ಮ ಜೀವಿಗಳು ಕಳೆಗಿಡಗಳ ತುಂಬ ಭಾರಿ ಪ್ರಮಾಣದಲ್ಲಿ ತುಂಬಿಕೊಂಡು ಗಿಡಿಗಳ ತುಂಡುಗಳನ್ನು ವಿಭಜನೆ ಮಾಡತೊಡಗುತ್ತವೆ. ಇದರಿಂದ ಗಿಡವು ಅತಿ ಶೀಘ್ರವಾಗಿ ಕೊಳೆಯಲು ಪ್ರಾರಂಭವಾಗುತ್ತದೆ. ಗಿಡ ಸಂಪೂರ್ಣವಾಗಿ ಕೊಳೆತಾಗ ಗೊಬ್ಬರ ಸಿದ್ಧವಾಗುತ್ತದೆ. ಗಿಡದಲ್ಲಿದ್ದ ಪೋಷಕಾಂಶಗಳಲ್ಲಿ ವ್ಯರ್ಥಗೊಳ್ಳದೇ ಗೊಬ್ಬರವಾಗುಳಿಯುತ್ತದೆ. ನಂತರ ಈ ಕೊಳೆತ ಗೊಬ್ಬರಗಳನ್ನು ಒಣಗಿಸಿ ಸಂಗ್ರಹಿಸಿ ಪ್ಯಾಕಿಂಗ್ ಮಾಡಿ ಮಾರಲಾಗುತ್ತದೆ.

ಈ ಗೊಬ್ಬರವು ಬಹಳ ಹಗುರವಾಗಿದ್ದು, ಉತ್ಕೃಷ್ಟ ಗುಣಮಟ್ಟವನ್ನು ಹೊಂದಿರುತ್ತದೆ. ಇದನ್ನು ತರಕಾರಿ, ಹಣ್ಣು ಹಂಪಲು ಮುಂತಾದ ಎಲ್ಲ ಕೃಷಿಗೂ ಇದನ್ನು ಬಳೆಸಬಹುದು. ಅರಣ್ಯಗಳಿಗೆ ಹಾನಿಕಾರಕವಾದ ಈ ‘ಯುಪಟೊರಿಯಂ’ ಕಳೆಗಿಡವು ಇದೀಗ ಅರಣ್ಯ ಅಭಿವೃದ್ಧಿ ಮಾಡುವಲ್ಲಿ ಸಹಕಾರಿಯಾಗಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...