Home / ಲೇಖನ / ಕೃಷಿ / ಕಳೆಗಿಡಿಗಳಿಂದ ಗೊಬ್ಬರ

ಕಳೆಗಿಡಿಗಳಿಂದ ಗೊಬ್ಬರ

ಯಾವುದೇ ಬೆಳೆಗಳ ನಡುನಡುವೆ ಕಸದಂತಹ ಕಳೆಗಿಡಗಳು ಬೆಳೆದು ಬಿತ್ತಿದ ಸಸಿಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಭೂಮಿಯಲ್ಲಿಯ ಸಾರವನ್ನೆಲ್ಲ ಹೀರಿಮೂಲ ಸಸಿಗಳಿಗೆ ಆಹಾರ ಮತ್ತು ನೀರು ಪೂರೈಕೆಯಾಗದಂತೆ ಈ ಕಳೆ ಕಸವೇ ಹೀರಿಕೊಳ್ಳುತ್ತದೆ. ಅದರಲ್ಲೂ ‘ಯುಪಟೋರಿಯಮ್’ ಕಳೆ ಸಸ್ಯಮಾತ್ರ ಹವೆಯ ವ್ಯೆಪರಿತ್ಯದಲ್ಲೂ ಬೆಳೆಯುತ್ತದೆ. ಆರುವರೆ ಸಾವಿರ ಎತ್ತರದ ಪ್ರದೇಶಗಳವರೆಗೆ ಹುಲುಸಾಗಿ ಬೆಳೆಯುವ ಈ ಕಳೆಗಿಡವು ಭೂಸಾರವನ್ನೆಲ್ಲ ಹೀರುವುದರಿಂದ ಅಕ್ಕಪಕ್ಕದಲ್ಲಿ ಬೇರೆ ಸಸ್ಯಗಳು ಬೆಳೆಯದಂತೆ ಮಾಡುತ್ತದೆ. ಜತೆಗೆ ಅರಣ್ಯನಾಶಕ್ಕೂ ಕಾರಣವಾಗುವ ಈ ಕಳೆಗಿಡವನ್ನು ನಿಯಂತ್ರಿಸಲು ಅರಣ್ಯವಿಜ್ಞಾನಿಗಳು ಶ್ರಮಿಸುತ್ತಾರೆ.

ಇತ್ತೀಚೆಗೆ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಯು ಒಂದು ಸರಳವಾದ ವಿಧಾನವನ್ನು ಕಂಡುಹಿಡಿದು ಈ ಯುಪಟೋರಿಯಂ, ಗಿಡಗಳಿಂದ ‘ಕಾಂಪೋಸ್ಟ್’ವನ್ನಾಗಿ ಪರಿವರ್ತಿಸುವಲ್ಲಿ ಸಫಲರಾಗಿದ್ದಾರೆ. ಈ ಯುಪಟೋರಿಯಂ, ಗಿಡಗಳನ್ನು ಒಂದೆಡೆ ಸಂಗ್ರಹಿಸಿ ಸಣ್ಣಸಣ್ಣ ಚೂರುಗಳನ್ನಾಗಿ ಕತ್ತರಿಸಿ ವಿಶೇಷ ರೀತಿಯ ವಿನ್ಯಾಸದಲ್ಲಿ ಕೊಠಿಡಿಗಳಲ್ಲಿ ತುಂಬುತ್ತಾರೆ. ಈ ಕೊಠಿಡಿಗಳ ಛಾವಣಿಯನ್ನು ಫೈಬರ್ ಗ್ಲಾಸಿನಿಂದ ಹೊದಿಸಿರುತ್ತಾರೆ. ಈ ಫೈಬರ್ ಗ್ಲಾಸ್ ಹೊದಿಕೆಯನ್ನು ಬಳೆಸುವುದರಿಂದ ಕೊಠಿಡಿಯೊಳಗೆ ಬಿಸಿಲಿನ ಮುಖಾಂತರ ಪ್ರವೇಶಿಸಿದ ಉಷ್ಣತೆಯು ಮತ್ತೆ ಹೊರಬಲಾರದೇ ಅಲ್ಲಿಯೇ ಉಳಿಯುತ್ತದೆ. ಕತ್ತರಿಸಿದ ಕಳೆಗಿಡಗಳ ತುಂಡುಗಳನ್ನು ಸೇರಿಸಿಟ್ಟಿದ್ದರಿಂದ ತೇವವು ಆರುವುದಿಲ್ಲ ಅದರಂತೆ ಮೊದಲು ಆಗಾಗ ನೀರನ್ನು ಹಾಕುತ್ತಾರೆ. ಬಿಸಿಲಿನ ಉಷ್ಣತೆಯನ್ನು ಇಷ್ಟಪಡುವ ಎಷ್ಟೋ ಬಗೆಯ ಸೂಕ್ಷ್ಮ ಜೀವಿಗಳು ಕಳೆಗಿಡಗಳ ತುಂಬ ಭಾರಿ ಪ್ರಮಾಣದಲ್ಲಿ ತುಂಬಿಕೊಂಡು ಗಿಡಿಗಳ ತುಂಡುಗಳನ್ನು ವಿಭಜನೆ ಮಾಡತೊಡಗುತ್ತವೆ. ಇದರಿಂದ ಗಿಡವು ಅತಿ ಶೀಘ್ರವಾಗಿ ಕೊಳೆಯಲು ಪ್ರಾರಂಭವಾಗುತ್ತದೆ. ಗಿಡ ಸಂಪೂರ್ಣವಾಗಿ ಕೊಳೆತಾಗ ಗೊಬ್ಬರ ಸಿದ್ಧವಾಗುತ್ತದೆ. ಗಿಡದಲ್ಲಿದ್ದ ಪೋಷಕಾಂಶಗಳಲ್ಲಿ ವ್ಯರ್ಥಗೊಳ್ಳದೇ ಗೊಬ್ಬರವಾಗುಳಿಯುತ್ತದೆ. ನಂತರ ಈ ಕೊಳೆತ ಗೊಬ್ಬರಗಳನ್ನು ಒಣಗಿಸಿ ಸಂಗ್ರಹಿಸಿ ಪ್ಯಾಕಿಂಗ್ ಮಾಡಿ ಮಾರಲಾಗುತ್ತದೆ.

ಈ ಗೊಬ್ಬರವು ಬಹಳ ಹಗುರವಾಗಿದ್ದು, ಉತ್ಕೃಷ್ಟ ಗುಣಮಟ್ಟವನ್ನು ಹೊಂದಿರುತ್ತದೆ. ಇದನ್ನು ತರಕಾರಿ, ಹಣ್ಣು ಹಂಪಲು ಮುಂತಾದ ಎಲ್ಲ ಕೃಷಿಗೂ ಇದನ್ನು ಬಳೆಸಬಹುದು. ಅರಣ್ಯಗಳಿಗೆ ಹಾನಿಕಾರಕವಾದ ಈ ‘ಯುಪಟೊರಿಯಂ’ ಕಳೆಗಿಡವು ಇದೀಗ ಅರಣ್ಯ ಅಭಿವೃದ್ಧಿ ಮಾಡುವಲ್ಲಿ ಸಹಕಾರಿಯಾಗಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...