Home / ಲೇಖನ / ಕೃಷಿ / ಕಳೆಗಿಡಿಗಳಿಂದ ಗೊಬ್ಬರ

ಕಳೆಗಿಡಿಗಳಿಂದ ಗೊಬ್ಬರ

ಯಾವುದೇ ಬೆಳೆಗಳ ನಡುನಡುವೆ ಕಸದಂತಹ ಕಳೆಗಿಡಗಳು ಬೆಳೆದು ಬಿತ್ತಿದ ಸಸಿಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಭೂಮಿಯಲ್ಲಿಯ ಸಾರವನ್ನೆಲ್ಲ ಹೀರಿಮೂಲ ಸಸಿಗಳಿಗೆ ಆಹಾರ ಮತ್ತು ನೀರು ಪೂರೈಕೆಯಾಗದಂತೆ ಈ ಕಳೆ ಕಸವೇ ಹೀರಿಕೊಳ್ಳುತ್ತದೆ. ಅದರಲ್ಲೂ ‘ಯುಪಟೋರಿಯಮ್’ ಕಳೆ ಸಸ್ಯಮಾತ್ರ ಹವೆಯ ವ್ಯೆಪರಿತ್ಯದಲ್ಲೂ ಬೆಳೆಯುತ್ತದೆ. ಆರುವರೆ ಸಾವಿರ ಎತ್ತರದ ಪ್ರದೇಶಗಳವರೆಗೆ ಹುಲುಸಾಗಿ ಬೆಳೆಯುವ ಈ ಕಳೆಗಿಡವು ಭೂಸಾರವನ್ನೆಲ್ಲ ಹೀರುವುದರಿಂದ ಅಕ್ಕಪಕ್ಕದಲ್ಲಿ ಬೇರೆ ಸಸ್ಯಗಳು ಬೆಳೆಯದಂತೆ ಮಾಡುತ್ತದೆ. ಜತೆಗೆ ಅರಣ್ಯನಾಶಕ್ಕೂ ಕಾರಣವಾಗುವ ಈ ಕಳೆಗಿಡವನ್ನು ನಿಯಂತ್ರಿಸಲು ಅರಣ್ಯವಿಜ್ಞಾನಿಗಳು ಶ್ರಮಿಸುತ್ತಾರೆ.

ಇತ್ತೀಚೆಗೆ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಯು ಒಂದು ಸರಳವಾದ ವಿಧಾನವನ್ನು ಕಂಡುಹಿಡಿದು ಈ ಯುಪಟೋರಿಯಂ, ಗಿಡಗಳಿಂದ ‘ಕಾಂಪೋಸ್ಟ್’ವನ್ನಾಗಿ ಪರಿವರ್ತಿಸುವಲ್ಲಿ ಸಫಲರಾಗಿದ್ದಾರೆ. ಈ ಯುಪಟೋರಿಯಂ, ಗಿಡಗಳನ್ನು ಒಂದೆಡೆ ಸಂಗ್ರಹಿಸಿ ಸಣ್ಣಸಣ್ಣ ಚೂರುಗಳನ್ನಾಗಿ ಕತ್ತರಿಸಿ ವಿಶೇಷ ರೀತಿಯ ವಿನ್ಯಾಸದಲ್ಲಿ ಕೊಠಿಡಿಗಳಲ್ಲಿ ತುಂಬುತ್ತಾರೆ. ಈ ಕೊಠಿಡಿಗಳ ಛಾವಣಿಯನ್ನು ಫೈಬರ್ ಗ್ಲಾಸಿನಿಂದ ಹೊದಿಸಿರುತ್ತಾರೆ. ಈ ಫೈಬರ್ ಗ್ಲಾಸ್ ಹೊದಿಕೆಯನ್ನು ಬಳೆಸುವುದರಿಂದ ಕೊಠಿಡಿಯೊಳಗೆ ಬಿಸಿಲಿನ ಮುಖಾಂತರ ಪ್ರವೇಶಿಸಿದ ಉಷ್ಣತೆಯು ಮತ್ತೆ ಹೊರಬಲಾರದೇ ಅಲ್ಲಿಯೇ ಉಳಿಯುತ್ತದೆ. ಕತ್ತರಿಸಿದ ಕಳೆಗಿಡಗಳ ತುಂಡುಗಳನ್ನು ಸೇರಿಸಿಟ್ಟಿದ್ದರಿಂದ ತೇವವು ಆರುವುದಿಲ್ಲ ಅದರಂತೆ ಮೊದಲು ಆಗಾಗ ನೀರನ್ನು ಹಾಕುತ್ತಾರೆ. ಬಿಸಿಲಿನ ಉಷ್ಣತೆಯನ್ನು ಇಷ್ಟಪಡುವ ಎಷ್ಟೋ ಬಗೆಯ ಸೂಕ್ಷ್ಮ ಜೀವಿಗಳು ಕಳೆಗಿಡಗಳ ತುಂಬ ಭಾರಿ ಪ್ರಮಾಣದಲ್ಲಿ ತುಂಬಿಕೊಂಡು ಗಿಡಿಗಳ ತುಂಡುಗಳನ್ನು ವಿಭಜನೆ ಮಾಡತೊಡಗುತ್ತವೆ. ಇದರಿಂದ ಗಿಡವು ಅತಿ ಶೀಘ್ರವಾಗಿ ಕೊಳೆಯಲು ಪ್ರಾರಂಭವಾಗುತ್ತದೆ. ಗಿಡ ಸಂಪೂರ್ಣವಾಗಿ ಕೊಳೆತಾಗ ಗೊಬ್ಬರ ಸಿದ್ಧವಾಗುತ್ತದೆ. ಗಿಡದಲ್ಲಿದ್ದ ಪೋಷಕಾಂಶಗಳಲ್ಲಿ ವ್ಯರ್ಥಗೊಳ್ಳದೇ ಗೊಬ್ಬರವಾಗುಳಿಯುತ್ತದೆ. ನಂತರ ಈ ಕೊಳೆತ ಗೊಬ್ಬರಗಳನ್ನು ಒಣಗಿಸಿ ಸಂಗ್ರಹಿಸಿ ಪ್ಯಾಕಿಂಗ್ ಮಾಡಿ ಮಾರಲಾಗುತ್ತದೆ.

ಈ ಗೊಬ್ಬರವು ಬಹಳ ಹಗುರವಾಗಿದ್ದು, ಉತ್ಕೃಷ್ಟ ಗುಣಮಟ್ಟವನ್ನು ಹೊಂದಿರುತ್ತದೆ. ಇದನ್ನು ತರಕಾರಿ, ಹಣ್ಣು ಹಂಪಲು ಮುಂತಾದ ಎಲ್ಲ ಕೃಷಿಗೂ ಇದನ್ನು ಬಳೆಸಬಹುದು. ಅರಣ್ಯಗಳಿಗೆ ಹಾನಿಕಾರಕವಾದ ಈ ‘ಯುಪಟೊರಿಯಂ’ ಕಳೆಗಿಡವು ಇದೀಗ ಅರಣ್ಯ ಅಭಿವೃದ್ಧಿ ಮಾಡುವಲ್ಲಿ ಸಹಕಾರಿಯಾಗಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...