ಅಸಂಖ್ಯಾತ ಕೀಟಗಳ ಭಾಧೆಯಿಂದಾಗಿ ರೈತ ಬೆಳೆದ ಬೆಳೆಗಳು ನಾಶಗೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳಿವೆ. ಸಾಲಮಾಡಿ ಉತ್ತು ಬಿತ್ತಿದ ರೈತನಿಗೆ ಈ ಕೀಟಗಳ ಭಾಧೆಯಿಂದ ಬೆಳೆಗಳೆಲ್ಲ ಅಸ್ತಿ ಪಂಜರವಾಗಿ ಉತ್ಪನ್ನ ಶೂನ್ಯವಾಗಿ ಬಿಡುತ್ತದೆ. ಬೌಮಿಸಿಯ ಟಬಾಕಿ ಎನ್ನುವ ವೈಜ್ಞಾನಿಕ ಹೆಸರಿನ ಪ್ರಾಣಿ ಒಂದು ಅಪಾಯಕಾರಿ ಕೀಟವಾಗಿದೆ. ಇದೊಂದು ಬಿಳಿಯಬಣ್ಣದ ನೊಣವಾಗಿದ್ದು ಸು. ೬೦೦ ಬಗೆಯ ಕೃಷಿ ಬೆಳೆಗಳಿಗೆ ಮಾರಕವಾಗಿದೆ. ಜೆಮಿಸಿಯಾ ನೊಣಗಳಲ್ಲಿ ಇರುವ ಬಿ ಜೈಯೋಟೈಪ್, ಎನ್ನುವ ಜಾತಿಯಂತೂ ಕೃಷಿಬೆಳೆಗೆ ಪರಮ ಶತೃವಾಗಿದೆ. ಈ ಜಾತಿಯ ನೊಣಗಳು ೫ ಪಟ್ಟು ಹೆಚ್ಚು ವೇಗವಾಗಿ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ. ಸು. ೬೦ ಬಗೆಯ ರೋಗಕಾರಕ ವೈರಸ್ಗಳನ್ನು ಗಿಡದಿಂದ ಗಿಡಕ್ಕೆ ಪ್ರಸಾರ ಮಾಡುತ್ತ ಹೋಗುತ್ತವೆ. ಈ ಕೃಷಿ ಪೀಡೆಯ ವಿರುದ್ದ ಸೂಕ್ತಮದ್ದಿನ ತಯಾರಿಕೆಗಾಗಿ ವಿಜ್ಞಾನಿಗಳು ಬಹುಕಾಲದಿಂದ ಸಂಶೋಧನೆ ನಡೆಯಿಸಿ ಯಶಸ್ವಿಯಾಗಿದ್ದಾರೆ. ಒಂದು ಪುಟ್ಟ ಗಾತ್ರದ ಗಿಡವೊಂದು ಬೆಮಿಸಿಯಾ ಕೀಟಗಳನ್ನು ಯಶಸ್ವಿಯಾಗಿ ನಿಯಂತ್ರಿಸುವುದು, ಪತ್ತೆಯಾಗಿದೆ. ಹಳದಿ ಬಣ್ಣದ ಹೂಗಳನ್ನು ಬೀರುವ ಈ ಸಸ್ಯದ ವೈಜ್ಞಾನಿಕ ಹೆಸರು “ಕ್ಯಾಲ್ಸಿಯೋಲೇರಿಯಾ ಆಂಡಿನಾ” ಈ ಗಿಡದಲ್ಲಿರುವ ಎರಡು ಬಗೆಯ ರಾಸಾಯನಿಕಗಳು ಬೆಮಿಸಿಯಾ ನೊಣಗಳ ಪೈಕಿ ಹೆಚ್ಚು ಅಪಾಯಕಾರಿಯಾದ ಬಿ ಬಯೋಟೈಟ್, ನೊಣಗಳನ್ನು ಹತೋಟಿಯಲ್ಲಿಡುತ್ತದೆ. ಕ್ಯಾಲ್ಸಿಯೋಲೇರಿಯಾ ಸಸ್ಯದಲ್ಲಿ ಇರುವ ರಾಸಾಯನಿಕಗಳು ಬೆಸಿಮಿಯಾ ನೊಣಗಳನ್ನು ಅಲ್ಲದೇ ಗಿಡಹೇನು ಮತ್ತು ಇನ್ನಿತರೆ ಕೃಷಿ ಪೀಡೆಗಳನ್ನು ಸಹ ನಾಶಪಡಿಸುವುದಾಗಿ ತಿಳಿದು ಬಂದಿದೆ. ಮಹತ್ವದ ಸಂಗತಿ ಎಂದರೆ ಗಿಡದ ಸಾರವನ್ನು ನಿಯಂತ್ರಿಸುವುದಾಗಿ ತಿಳಿದು ಬಂದಿದೆ. ಈ ಕೀಟಗಳು ಈಗ ಆಧುನಿಕ ಕೀಟನಾಶಕಗಳ ವಿರುದ್ಧ ಪ್ರತಿರೋಧ ಶಕ್ತಿಯನ್ನು ಬೆಳಸಿಕೊಂಡು ಕೃಷಿ ವಿಜ್ಞಾನಿಗಳಿಗೆ ತಲೆನೋವು ತಂದಿದ್ದವು.
ಅಂತರಾಷ್ಟ್ರೀಯ ಮಟ್ಟದ ಸಂಶೋಧಕರ ತಂಡವೊಂದು ನಾಲ್ಕು ನೂರಕ್ಕೂ ಹೆಚ್ಚು ಬಗೆಯ ಗಿಡಗಳನ್ನು ಕೀಟನಾಶಕ ಗುಣಗಳಿಗಾಗಿ ಸಂಗ್ರಹಿಸಿ ಸಮಗ್ರವಾಗಿ ಅಧ್ಯಯನ ನಡೆಸುತ್ತಿರುವಾಗ ಈ ಗಿಡದ ಕುರಿತು ತಿಳಿದು ಬಂತು. ಚಿಲಿ ವಿಶ್ವವಿದ್ಯಾಲಯದ ಹರ್ಮನ್ ನೈಲೇ ಯರ್ ಎಂಬ ವಿಜ್ಞಾನಿ ಈ ಸಸ್ಯ ಸಂಗ್ರಹಣಾ ಕಾರ್ಯವನ್ನು ಮಾಡಿದ್ದರು. ಕ್ಯಾಲ್ಸಿಯೋಲೇರಿಯಾ ಗಿಡಗಳ ಕೀಟ ನಾಶಕ ಸಾಮರ್ಥ್ಯ ಹೆಚ್ಚಿಸಿದ್ದಾಗಿದೆ.
*****



















