Home / ಲೇಖನ / ಕೃಷಿ / ಭೂತಾಯಿ ರಕ್ಷಣೆ

ಭೂತಾಯಿ ರಕ್ಷಣೆ

ಬೆಳಗಾಗಿ ನಾನೆದ್ದು ಯಾರಾರ ನೆನೆಯಲಿ
ಎಳ್ಳು ಜೀರಿಗೆ ಬೆಳಿಯೋಳ-ಭೂಮಿ ತಾಯಿಯ
ಎದ್ದೊಂದ ಗಳಿಗೆ ನೆನೆದೇನ.

ಹಳ್ಳಿಯ ಮಹಿಳೆಯೊಬ್ಬಳು ಈ ಜಾನಪದ ಹಾಡಿನ ಮೂಲಕ ಭೂಮಿತಾಯಿಯ ಬಗ್ಗೆ ಅಭಿಮಾನದಿಂದ ನೆನೆದು ಹಾಡುತ್ತಾಳೆ. ಭಾರತ ಹಳ್ಳಿಗಳ ದೇಶವಾಗಿದೆ. ರೈತನೆ ಅನ್ನದಾತ. ನಮ್ಮೆಲ್ಲರನ್ನು ಸಲಹುವಳೆ ಭೂಮಿತಾಯಿ. ಅಂತಲೇ ಭುದೇವಿಯ ನೆನೆಯದೇ ವಿಧಿಯಿಲ್ಲ. ಬದುಕಿನುದ್ದಕ್ಕೂ ಭೂಮಿಯನ್ನೇ ನಂಬಿಕೊಂಡು ಬಾಳಿರುವ ರೈತ ಅವನ ಬೆವರಿನ ಫಲವೇ ನಮ್ಮ ಕೈಯೊಳಗಿನ ತುತ್ತು. ಆದರೆ ಇಂದು ಕಾಲ ಬದಲಾಗಿದೆ. ನಮ್ಮ ರಕ್ತದ ಕಣ ಕಣದಲ್ಲೂ ಭೂದೇವಿಯು ನೀಡಿದ ಆಹಾರದಂಶವಿದ್ದರೂ ಜಾಗತೀಕರಣದ ಅವಸರದಲ್ಲಿ ಭೂಮಿಯ ಫಲವತತ್ತೆ ಮತ್ತು ಅದರ ಮಹತ್ವ ನಾವು ಮರೆಯುತ್ತಿದ್ದೇವೆ.

ಇವತ್ತು ಹಳ್ಳಿ ಹಳ್ಳಿಗಳಲ್ಲೂ ಜಾಗತೀಕರಣದ ಬಿಸಿ ತಟ್ಟಿದೆ. ಎಲ್ಲರಿಗೂ ಹಣ ಸಂಪಾದನೆಯೇ ಗುರಿಯಾಗಿದೆ. ಟಿವಿಗಳು ನಮ್ಮ ಮನೆಗೆ ಲಗ್ಗೆ ಹಾಕಿದ ಮೇಲೆ ದುಡಿಮೆ, ಪರಿಶ್ರಮಗಳಿಗೆ ಗ್ರಹಣ ಹಿಡಿಯಿತ್ತಿದೆಯೋ ಎನಿಸದೆ ಇರದು. ಅಂತಲೇ ಸರ್‍ವಜ್ಞ ತನ್ನ ತ್ರಿಪದಿಗಳಲ್ಲಿ ಬೇಸಾಯಕ್ಕೆ ಮಹತ್ವ ಕೊಡುತ್ತಾನೆ.

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯ ಮೇಲು
ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ
ದಾಟವೇ ಕೆಡಗು ಸರ್‍ವಜ್ಞ

ಅನೇಕ ವಿದ್ಯೆಗಳಲ್ಲಿ ವ್ಯವಸಾಯವೇ ಶ್ರೇಷ್ಠ, ಅದು ಮೇಟಿ ವಿದ್ಯೆ. ಅದರಿಂದ ರಾಟಿ ನಡೆದು ದೇಶವೇ ಬೆಳಗುವುದು. ಇಲ್ಲದಿದ್ದರೆ ಇನ್ನಾವ ಆಟವೂ ಕೆಡಗು ಎನ್ನುವ ಕವಿಯ ಭಾವ ನಿಜಕ್ಕೂ ಮೆಚ್ಚುವಂಥದ್ದು. ಆದರೆ ಇಂದು ಬೇಸಾಯಕ್ಕೆ ಜನರು ನಿರ್‍ಲಕ್ಷ್ಯ ಮಾಡುತ್ತಿರುವುದು ದುರ್‍ದೈವದ ಸಂಗತಿ. ಇಂದಿನ ದಿನಗಳಲ್ಲಿ ರೈತನು ವ್ಯವಸಾಯ ಮಾಡಿ ಹೆಚ್ಚಿನ ಇಳುವರಿ ತೆಗೆಯುವ ನಿಟ್ಟಿನಲ್ಲಿ ರಾಸಾಯನಿಕ ಗೊಬ್ಬರ, ವಿಷಯುಕ್ತ ಔಷಧಗಳನ್ನು ಬೆಳೆಗಳಿಗೆ ನೀಡಿ ಹೆಚ್ಚಿನ ಬೆಳೆ ರಾಶಿಯ ನಿರೀಕ್ಷೆಯಲ್ಲಿ ಭೂಮಿಯನ್ನು ಬಂಜರುಗೊಳಿಸುತ್ತಿದ್ದಾನೆ. ಇದರಿಂದಾಗಿ ವಾತಾವರಣ ಕಲುಷಿತಗೊಳ್ಳುವುದಷ್ಟೇ ಅಲ್ಲದೆ ಬೆಳೆಗಳಲ್ಲಿ ವಿಷದಂಶವು ತುಂಬಿ ಜನರು ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಇಂದು ಇಂಥ ರಾಸಾಯನಿಕ ಪದಾರ್‍ಥಗಳಿಂದ ಮುಕ್ತಗೊಳ್ಳಲು ನಾವು ಸಾವಯವ ಕೃಷಿ ಮಾಡಬೇಕಿದೆ. ಈಗೀಗ ಜಗತ್ತಿನಲ್ಲಿ ಯಂತ್ರ, ವಾಹನಗಳ ಸಂಖ್ಯೆ ಜಾಸ್ತಿಯಾಗಿ ಇಂಧನ ಉಪಯೋಗದಿಂದ ವಾತಾವರಣ ಕೆಡುತಿದ್ದು ಜೈವಿಕ ಇಂಧನಕ್ಕೆ ಸಂಬಂಧಿಸಿದ ಗಿಡ-ಮರಗಳನ್ನು ನೆಟ್ಟು ದೇಶದ ಆರೋಗ್ಯ ಕಾಪಾಡಬೇಕಿದೆ.

ರೈತನು ದೇಶದ ಬೆನ್ನೆಲುಬು, ಅನ್ನದಾತನೆಂದು ಹೊಗಳಿದರೂ ಇಂದು ರೈತನಿಗೆ ಉಳಿಗಾಲವಿಲ್ಲವಾಗಿದೆ. ಬಿತ್ತಿದ ಬೀಜ ಮೊಳಕೆಯೊಡೆಯದಿದ್ದಾಗ ಮೊಳಕೆಯೊಡೆದರೂ ಬೆಳೆ ಬೆಳೆಯದಿದ್ದಾಗ ಬೆಳೆ ಬೆಳೆದರೂ ಧಾನ್ಯಕ್ಕೆ ಕೈತುಂಬ ಹಣ ಬರದೇ ಇದ್ದಾಗ ಅವನ ಬದುಕು ನಿತ್ಯ ಸಾಯುತ್ತಿದೆ. ಬದುಕನ್ನು ಎದುರಿಸಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಅಂತಲೇ ಇಂದು ಭೂಮಿತಾಯಿ ಅವನ ಮೇಲೆ ಮುನಿದಿದ್ದಾಳೆ, ಹೆಜ್ಜೆ ಹೆಜ್ಜೆಗೂ ರಕ್ಷಿಸುವ ಭೂತಾಯಿ ಫಲವತತ್ತೆ ಕಾಪಾಡುವುದು ನಮ್ಮೆಲ್ಲರ ಕರ್‍ತವ್ಯವಾಗಿದೆ. ಅಂತಲೇ ಇಂದು ಸರ್‍ಕಾರ ಮತ್ತು ಸಮಾಜ ಭೂತಾಯಿಯತ್ತ ವಾಲುತ್ತಿದೆ. ರೈತನಿಗೆ ಭೂಮಿಯ ಮಣ್ಣಿನ ಬಗ್ಗೆ ತಿಳುವಳಿಕೆ, ಬೀಜ, ಗೊಬ್ಬರ, ಸಾವಯವ ಕೃಷಿ ಸೊನ್ನೆ ಬಂಡವಾಳದಲ್ಲಿ ಭೂಮಿಯಲ್ಲಿ ಬೆಳೆ ಇಳುವರಿಗಳತ್ತ ನಾವು ದಾಪುಗಾಲು ಆರೋಗ್ಯಕರ ಲಕ್ಷಣವಾಗಿದೆ. ಹಾಕುತ್ತಿರುವುದು ಆರೋಗ್ಯಕರ ಲಕ್ಷಣವಾಗಿದೆ.

ಸ್ವಚ್ಛವಾದ ಪರಿಸರ, ನಿರಾಂತರವಾದ ಬಾಳಾಗಬೇಕಾದರೆ ಪರಿಸರ ಮಾಲಿನ್ಯ ತಡೆಗಟ್ಟಬೇಕಾದರೆ ಸಾವಯವ ಕೃಷಿ ಮಾಡಬೇಕಿದೆ. ಜೀವನ ಸಾರ್‍ಥಕಗೊಳಿಸಬೇಕಿದೆ. ಭೂಮಿಯ ರಕ್ಷಣೆ ನಮ್ಮೆಲ್ಲರ ಕರ್‍ತವ್ಯವಾಗಬೇಕು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...