Home / ಲೇಖನ / ಕೃಷಿ / ಹುಬ್ಬಳ್ಳಿಯ ಶಿವಾನಂದ ಮೂರ್ತಿ ಅವರಿಂದ ಹೊಸ ಮಾದರಿಯ ಸ್ಪ್ರೇಯರ್

ಹುಬ್ಬಳ್ಳಿಯ ಶಿವಾನಂದ ಮೂರ್ತಿ ಅವರಿಂದ ಹೊಸ ಮಾದರಿಯ ಸ್ಪ್ರೇಯರ್

ದಿನನಿತ್ಯ ವೈಜ್ಞಾನಿಕವಾಗಿ ಏನಾದರೊಂದು ಆವಿಷ್ಕಾರಗಳಾಗುತ್ತಲೇ ಇರುತ್ತವೆ. ಜೈವಿಕವಾಗಿ ಆರೋಗ್ಯದಲ್ಲಿ ಕೃಷಿರಂಗದಲ್ಲಿ ಹೀಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯಲಾಗುತ್ತದೆ. ಈ ಬಾರಿ ಹುಬ್ಬಳ್ಳಿಯ ಯುವ ಉತ್ಸಾಹಿ ಶಿವಾನಂದ ಮೂರ್ತಿ ಅವರು ಕೃಷಿ ಕ್ಷೇತ್ರಕ್ಕಾಗಿ ಹೊಸ ಮಾದರಿಯ ಸ್ಪ್ರೇಯರೊಂದನ್ನು ಸ್ವತಃ ತಯಾರಿಸಿದ್ದಾರೆ. ಈಗಿರುವ ಸ್ಪ್ರೇಯರ್‍ಗಳು ವಿಭಿನ್ನವಾಗಿ, ವೈಶಿಷ್ಟ್ಯವಾಗಿ ಮಾರುಕಟ್ಟೆಗೆ ಬಂದಿವೆ. ಈ ಸ್ಪ್ರೇಯರ್‌ನಿಂದ ಕಾರನ್ನು ಕಡಿಮೆ ನೀರಿನಿಂದ ತೊಳೆಯಲುಬಹುದು ಔಷಧಿಗಳನ್ನು ಸಿಂಪಡಿಸಬಹುದು. ನೆಲವನ್ನು ಸ್ವಚ್ಚಗೊಳಿಸಬಹುದು. ಹೀಗೆ ಬಹು ಉಪಯೋಗಿ ಯಂತ್ರ ಇದು. ಈ ಸ್ಪ್ರೇಯರ್‌ಗೆ ಒಮ್ಮೆಗಾಳಿ ತುಂಬಿಸಿ ಹೆಗಲಿಗೇರಿಸಿ ಸಿಂಪಡಿಸ ಹೊರಟರೆ ತುಂಬಿಸಿದ ದ್ರಾವಣ ಮುಗಿಯುವ ತನಕ ಗಾಳಿ ಹಾಕಬೇಕಿಲ್ಲ ಸ್ಪ್ರೇಯರ್ ಟ್ಯಾಂಕಿನಲ್ಲಿ ಗಾಳಿ ಒಳಹೋಗುವ ವಾಲ್ವ್ (ವಾಹನಗಳ ಟ್ಟೂಬ್ ವಾಲ್ವ ತರಹದ್ದು ಇದೆ. ಇದಕ್ಕೆ ಪೆಡಲ್‌ ಪಂಪ್‌ನಿಂದ ಗಾಳಿತುಂಬಿಬಿಡುವುದು ಗಾಳಿಯನ್ನು ೬೫.೭೦ ಗೇಜ್‌ನಷ್ಟು ತುಂಬಿದರೆ ಸಾಕು. ತುಂಬಿಸುವಾಗ ಹೆಚ್ಚಾದರೆ ಅದು ತನ್ನಿಂದ ತಾನೆ ಹೊರಹೋಗಲು ಆಟೋಮೆಟಿಕ್ ಸೆಫ್ಟಿ ವಾಲ್ವ ಇದೆ. ಇವೆರಡೂ ವ್ಯವಸ್ಥೆಗಳೂ ತೀರ ಸರಳವಾದವುಗಳು. ಮಾಮೂಲಿ ಟ್ರಾಕ್ಟರ್ ಟ್ಯೂಬ್‌ಗೆ ಏರ್‌ಇನ್ ಟೇಕ್‌ವಾಲ್ವನ್ನೆ ಬಳಸಲಾಗಿದೆ. ಎಲ್ಲ ಸುಲಭ ಸರಳ ವ್ಯವಸ್ಥೆಯಿಂದ ಕೂಡಿದ ಇದಕ್ಕೆ ಸ್ಪ್ರೇಮಾಡುವ ವಾಲ್ವ್‌ ಕೂಡಾ ಇದೇ ರೀತಿ ಇದೆ. ಸ್ಪ್ರೇಯಲ್ಲಿ ೩ ವಿಧದಲ್ಲಿ ಸಿಂಪರಣೆ ಮಾಡಲು ಅವಕಾಶವಿದೆ. ಮಿಸ್ಟ್ ಸ್ಪ್ರೇ ಸೇರಿದಂತೆ ಬೇರೆ ಬೇರೆ ಸಿಂಪರಣೆ ಸಾಧ್ಯವಿದೆ. ಸಣ್ಣಗಿಡಕ್ಕೆ ಸಣ್ಣ ತರದಲ್ಲೂ ದೊಡ್ಡ ಗಿಡಗಳಿಗೆ ದೊಡ್ಡದಾಗಿಯೂ ಬೇಕಾದಂತೆ ಸ್ಪ್ರೇ ಮಾಡುವ ವ್ಯವಸ್ಥೆಗಳಿದ್ದು ದ್ರಾವಣ ಅನವಶ್ಯಕವಾಗಿ ವ್ಯಯವಾಗುವುದಿಲ್ಲ. ಇದಕ್ಕಾಗಿ ಸ್ಪ್ರೇಯರ್ ಟ್ಯಾಂಕಿಯಲ್ಲಿ ಕಂಟ್ರೋಲ್ ವಾಲ್ವ್‌ ಇದೆ. ಸ್ಯಾಪ್‌ಸ್ಯಾಕ್ ಸ್ಪ್ರೇಯರ್ ಆಗಿಯೂ, ಗಟೋರ್ ಸ್ಪ್ರೇಯ‌ರಾಗಿಯೂ ಪವರ್ ಸ್ಪ್ರೇಯರ್ ಆಗಿಯೂ ಬ್ಯಾಟರಿ ಸ್ಪ್ರೇಯರ್ ಆಗಿಯೂ ಇದು ರೈತರಿಗೆ ಇದು ಅತ್ಯಂತ ಅನುಕೂಲಕರವಾಗಿದೆ.

ಸ್ಪ್ರೇಯರ್ ಟ್ಯಾಂಕಿಯನ್ನು ಅನುಕೂಲಕ್ಕಾಗಿ ಎರಡು ಬಗೆಯಲ್ಲಿ ತಯಾರಿಸಲಾಗಿದೆ. ೧೬ ಗೇಜಿದ ಗ್ಯಾಲ್ವ್‌ನೈಸ್ಡ್ ಕಬ್ಬಿಣದಲ್ಲಿ ಮಾಡಿದ ಟ್ಯಾಂಕಿ ಒಂದಾದರೆ ಇನ್ನೊಂದು ಸ್ಟೀಲಿನದು. ದ್ರಾವಣ ಯಾವುದೇ ರೀತಿಯ ರಾಸಾಯನಿಕ ಕ್ರಿಯೆಗೆ ಹಾಳಾಗದಿರುವಂತೆ ರಬ್ಬರ್‌ಕೋಟ್ ಗಾಲ್ವಾ ಮತ್ತು ಪ್ಲಾಸ್ಟಿಕ್‌ಗಳಿಂದ ಕೋಟ್ ಮಾಡಲಾಗಿದ್ದು ಯಾವುದೇ ರಾಸಾಯನಿಕ ಪರಿಣಾಮಕ್ಕೆ ಒಳಪಡಲಾರದು. ಶಿವಾ ಆಗ್ರಿ ಸ್ಪ್ರೇಯರ್ ಎಂಬ ಬ್ರ್ಯಾಂಡಿನಲ್ಲಿ ಇದನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...