Home / ಲೇಖನ / ಕೃಷಿ / ಹುಬ್ಬಳ್ಳಿಯ ಶಿವಾನಂದ ಮೂರ್ತಿ ಅವರಿಂದ ಹೊಸ ಮಾದರಿಯ ಸ್ಪ್ರೇಯರ್

ಹುಬ್ಬಳ್ಳಿಯ ಶಿವಾನಂದ ಮೂರ್ತಿ ಅವರಿಂದ ಹೊಸ ಮಾದರಿಯ ಸ್ಪ್ರೇಯರ್

ದಿನನಿತ್ಯ ವೈಜ್ಞಾನಿಕವಾಗಿ ಏನಾದರೊಂದು ಆವಿಷ್ಕಾರಗಳಾಗುತ್ತಲೇ ಇರುತ್ತವೆ. ಜೈವಿಕವಾಗಿ ಆರೋಗ್ಯದಲ್ಲಿ ಕೃಷಿರಂಗದಲ್ಲಿ ಹೀಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯಲಾಗುತ್ತದೆ. ಈ ಬಾರಿ ಹುಬ್ಬಳ್ಳಿಯ ಯುವ ಉತ್ಸಾಹಿ ಶಿವಾನಂದ ಮೂರ್ತಿ ಅವರು ಕೃಷಿ ಕ್ಷೇತ್ರಕ್ಕಾಗಿ ಹೊಸ ಮಾದರಿಯ ಸ್ಪ್ರೇಯರೊಂದನ್ನು ಸ್ವತಃ ತಯಾರಿಸಿದ್ದಾರೆ. ಈಗಿರುವ ಸ್ಪ್ರೇಯರ್‍ಗಳು ವಿಭಿನ್ನವಾಗಿ, ವೈಶಿಷ್ಟ್ಯವಾಗಿ ಮಾರುಕಟ್ಟೆಗೆ ಬಂದಿವೆ. ಈ ಸ್ಪ್ರೇಯರ್‌ನಿಂದ ಕಾರನ್ನು ಕಡಿಮೆ ನೀರಿನಿಂದ ತೊಳೆಯಲುಬಹುದು ಔಷಧಿಗಳನ್ನು ಸಿಂಪಡಿಸಬಹುದು. ನೆಲವನ್ನು ಸ್ವಚ್ಚಗೊಳಿಸಬಹುದು. ಹೀಗೆ ಬಹು ಉಪಯೋಗಿ ಯಂತ್ರ ಇದು. ಈ ಸ್ಪ್ರೇಯರ್‌ಗೆ ಒಮ್ಮೆಗಾಳಿ ತುಂಬಿಸಿ ಹೆಗಲಿಗೇರಿಸಿ ಸಿಂಪಡಿಸ ಹೊರಟರೆ ತುಂಬಿಸಿದ ದ್ರಾವಣ ಮುಗಿಯುವ ತನಕ ಗಾಳಿ ಹಾಕಬೇಕಿಲ್ಲ ಸ್ಪ್ರೇಯರ್ ಟ್ಯಾಂಕಿನಲ್ಲಿ ಗಾಳಿ ಒಳಹೋಗುವ ವಾಲ್ವ್ (ವಾಹನಗಳ ಟ್ಟೂಬ್ ವಾಲ್ವ ತರಹದ್ದು ಇದೆ. ಇದಕ್ಕೆ ಪೆಡಲ್‌ ಪಂಪ್‌ನಿಂದ ಗಾಳಿತುಂಬಿಬಿಡುವುದು ಗಾಳಿಯನ್ನು ೬೫.೭೦ ಗೇಜ್‌ನಷ್ಟು ತುಂಬಿದರೆ ಸಾಕು. ತುಂಬಿಸುವಾಗ ಹೆಚ್ಚಾದರೆ ಅದು ತನ್ನಿಂದ ತಾನೆ ಹೊರಹೋಗಲು ಆಟೋಮೆಟಿಕ್ ಸೆಫ್ಟಿ ವಾಲ್ವ ಇದೆ. ಇವೆರಡೂ ವ್ಯವಸ್ಥೆಗಳೂ ತೀರ ಸರಳವಾದವುಗಳು. ಮಾಮೂಲಿ ಟ್ರಾಕ್ಟರ್ ಟ್ಯೂಬ್‌ಗೆ ಏರ್‌ಇನ್ ಟೇಕ್‌ವಾಲ್ವನ್ನೆ ಬಳಸಲಾಗಿದೆ. ಎಲ್ಲ ಸುಲಭ ಸರಳ ವ್ಯವಸ್ಥೆಯಿಂದ ಕೂಡಿದ ಇದಕ್ಕೆ ಸ್ಪ್ರೇಮಾಡುವ ವಾಲ್ವ್‌ ಕೂಡಾ ಇದೇ ರೀತಿ ಇದೆ. ಸ್ಪ್ರೇಯಲ್ಲಿ ೩ ವಿಧದಲ್ಲಿ ಸಿಂಪರಣೆ ಮಾಡಲು ಅವಕಾಶವಿದೆ. ಮಿಸ್ಟ್ ಸ್ಪ್ರೇ ಸೇರಿದಂತೆ ಬೇರೆ ಬೇರೆ ಸಿಂಪರಣೆ ಸಾಧ್ಯವಿದೆ. ಸಣ್ಣಗಿಡಕ್ಕೆ ಸಣ್ಣ ತರದಲ್ಲೂ ದೊಡ್ಡ ಗಿಡಗಳಿಗೆ ದೊಡ್ಡದಾಗಿಯೂ ಬೇಕಾದಂತೆ ಸ್ಪ್ರೇ ಮಾಡುವ ವ್ಯವಸ್ಥೆಗಳಿದ್ದು ದ್ರಾವಣ ಅನವಶ್ಯಕವಾಗಿ ವ್ಯಯವಾಗುವುದಿಲ್ಲ. ಇದಕ್ಕಾಗಿ ಸ್ಪ್ರೇಯರ್ ಟ್ಯಾಂಕಿಯಲ್ಲಿ ಕಂಟ್ರೋಲ್ ವಾಲ್ವ್‌ ಇದೆ. ಸ್ಯಾಪ್‌ಸ್ಯಾಕ್ ಸ್ಪ್ರೇಯರ್ ಆಗಿಯೂ, ಗಟೋರ್ ಸ್ಪ್ರೇಯ‌ರಾಗಿಯೂ ಪವರ್ ಸ್ಪ್ರೇಯರ್ ಆಗಿಯೂ ಬ್ಯಾಟರಿ ಸ್ಪ್ರೇಯರ್ ಆಗಿಯೂ ಇದು ರೈತರಿಗೆ ಇದು ಅತ್ಯಂತ ಅನುಕೂಲಕರವಾಗಿದೆ.

ಸ್ಪ್ರೇಯರ್ ಟ್ಯಾಂಕಿಯನ್ನು ಅನುಕೂಲಕ್ಕಾಗಿ ಎರಡು ಬಗೆಯಲ್ಲಿ ತಯಾರಿಸಲಾಗಿದೆ. ೧೬ ಗೇಜಿದ ಗ್ಯಾಲ್ವ್‌ನೈಸ್ಡ್ ಕಬ್ಬಿಣದಲ್ಲಿ ಮಾಡಿದ ಟ್ಯಾಂಕಿ ಒಂದಾದರೆ ಇನ್ನೊಂದು ಸ್ಟೀಲಿನದು. ದ್ರಾವಣ ಯಾವುದೇ ರೀತಿಯ ರಾಸಾಯನಿಕ ಕ್ರಿಯೆಗೆ ಹಾಳಾಗದಿರುವಂತೆ ರಬ್ಬರ್‌ಕೋಟ್ ಗಾಲ್ವಾ ಮತ್ತು ಪ್ಲಾಸ್ಟಿಕ್‌ಗಳಿಂದ ಕೋಟ್ ಮಾಡಲಾಗಿದ್ದು ಯಾವುದೇ ರಾಸಾಯನಿಕ ಪರಿಣಾಮಕ್ಕೆ ಒಳಪಡಲಾರದು. ಶಿವಾ ಆಗ್ರಿ ಸ್ಪ್ರೇಯರ್ ಎಂಬ ಬ್ರ್ಯಾಂಡಿನಲ್ಲಿ ಇದನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...