ಯಾವ ಕ್ಷಣದಲಿ ಯಾರೋ

ಯಾವ ಕ್ಷಣದಲಿ ಯಾರೋ

ಯಾರೂ ಅರಿಯದ ಊರಲಿ ಕರೆದು
ಮಾತಾಡಿಸಿದವರು ಯಾರೋ
ಬಾಯಾರಿದ ವೇಳೆಯಲಿ
ನೀರೂಡಿಸಿದವರು ಯಾರೋ
ಯಾವ ಕ್ಷಣದಲಿ ಯಾರೋ

ನಡೆ ತಪ್ಪಿ ಬಿದ್ದಾಗ
ಹಿಡಿದೆತ್ತಿದವರು ಯಾರೋ
ಬೇಸರದಿ ಅಲೆಯುತಿದ್ದಾಗ
ಕೆಲಸ ನೀಡಿದವರು ಯಾರೋ

ಪ್ರೀತಿಗಾಗಿ ಪರಿತಪಿಸುತ್ತಿದ್ದಾಗ
ಪ್ರೀತಿ ತೋರಿದವರು ಯಾರೋ
ನೀತಿಗೆಟ್ಟು ವರ್‍ತಿಸುತಿದ್ದಾಗ
ತಿಳಿಹೇಳಿದವರು ಯಾರೋ

ಮನಃಕ್ಲೇಶದಲಿ ಬೇಯುತಿದ್ದಾಗ
ತಂಪರೆದವರು ಯಾರೋ
ಕುಡುಕನೊ ಕೆಡುಕನೊ ಎಂದು ಕೇಳದೆಯೆ
ಹಸ್ತ ನೀಡಿದವರು ಯಾರೋ

ಯಾವ ಕ್ಷಣದಲಿ ಯಾವ ದೇವರೊ
ದೇವರೊ ದಿಂಡಿರೂ ಕೇವಲ ಮನುಜರೊ
ಲೋಕ ಕಲ್ಯಾಣ ಕಾರಣರೊ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಬ್ಬಳ್ಳಿಯ ಶಿವಾನಂದ ಮೂರ್ತಿ ಅವರಿಂದ ಹೊಸ ಮಾದರಿಯ ಸ್ಪ್ರೇಯರ್
Next post ಹೋರಾಡುತ್ತೇನೆ ಶಬ್ದಗಳಿಂದ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…