ಹೋರಾಡುತ್ತೇನೆ ಶಬ್ದಗಳಿಂದ

ವ್ಯವಸ್ಥೆಯ ಒಳಗಿನಿಂದ
ಒಂದೊಂದೇ ಪ್ರಶ್ನೆಗಳೇಳುತ್ತವೆ
ರಾಜಕೀಯದ ಬಣ್ಣ ಬಯಲಾಗುತ್ತದೆ
ಶಸ್ತ್ರಾಸ್ತ್ರ ಕೆಳಗಿಟ್ಟ ಅವರು
ಶಾಂತಿ ಮಂತ್ರಗಳ ಜಪಿಸುತ್ತಿದ್ದಾರೆ ನೋಡು!

ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲಿ
ಕೆಂಪು ಬಣ್ಣಕ್ಕೆ ಅನೇಕ ಛಾಯೆಗಳಿವೆ ತಾನೇ?
ಶಾಂತಿ ಒಪ್ಪಂದ ಆಗಿದೆ ಅವರೊಂದಿಗೆ
ಶಸ್ತ್ರಾಸ್ತ್ರ ಕೆಳಗಿಟ್ಟು ಶಾಂತವಾಗಿದ್ದಾರೆ
ಹಗ್ಗದ ಮೇಲಿನ ನಡಿಗೆ ನಡೆಯುತ್ತಿದ್ದಾರೆ ನೋಡು!

ಪೋಲೀಸು ರಾಜ್ಯದಲ್ಲಿ ಸೈನ್ಯದ ಸಮಾವೇಶ
ಸಂಸ್ಕೃತಿಯ ಹೆಸರಿನಲಿ ಸಭೆ ಸಮಾರಂಭಗಳು
ಘೋಷಣೆಗಳು ಮೊಳಗುತ್ತಿವೆ ನೋಡು!
ಧರ್ಮ, ಜನಾಂಗಗಳ ಪ್ರಶ್ನೆ, ಓಟಿನ ಲೆಕ್ಕಾಚಾರ
ರೈತ, ಕಾರ್ಮಿಕರ ಸವಾಲು ನೆಲಕಚ್ಚಿವೆ ನೋಡು!

ಚಿವುಟಿ ಹಾಕಿದ ಕನಸುಗಳ ಸಮಾಧಿ
ಸಮತೆಯ ಮಣ್ಣಲ್ಲಿ ಚಿಗುರೊಡೆದು
ಮತ್ತೆ ಮತ್ತೆ ಪ್ರಶ್ನಿಸುತ್ತಿವೆ ನೋಡು!
ರೈತರ ಆತ್ಮ ಹತ್ಯೆಗಳಿಗೆ ಕೊನೆಯೆಂದು?
ಕಾರ್ಮಿಕರ ತುತ್ತಿಗೆ ಲಾಕೌಟ್ ನಿಲ್ಲುವದೆಂದು?
ದುಡಿಯುವ ಕೈಗಳು ನೇಣಿಗೆ ಶರಣಾಗಿ
ಊರ ಹೊರಗಿನ ಮರಗಳಿಗೆ ಹೆಣಗಳು
ಕೇಳುವವರಿಲ್ಲದೆ ನೇತಾಡುತ್ತಿವೆ ನೋಡು!

ಹೊತ್ತು ನಿಂತಿದ್ದಾಳೆ ಧರಿತ್ರಿ
ಹೆಗಲ ಮೇಲೆ ಹೆಣಭಾರದ ಹೊರೆ ನೋಡು
ಅಸಹಾಯಕ ಮಕ್ಕಳ, ಮುದುಕರ
ಜವಾಬ್ದಾರಿ, ಖಾಲಿ ತುತ್ತಿನ ಚೀಲ ತುಂಬಲು
ಅಗ್ಗದ ಕೂಲಿಯಾಗಿದ್ದಕ್ಕೆ ಯಾರು ಹೊಣೆ ಹೇಳು?
ಸಹನೆ ಮೀರುವ ಹೊತ್ತಲ್ಲೂ ಹೇಳುತ್ತಿದ್ದಾಳೆ
ಬಂದೂಕು ಬೇಡ ಹೋರಾಡಲು ಶಬ್ದಗಳಿವೆಯಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವ ಕ್ಷಣದಲಿ ಯಾರೋ
Next post ಮೋಡ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…