ಹೋರಾಡುತ್ತೇನೆ ಶಬ್ದಗಳಿಂದ

ವ್ಯವಸ್ಥೆಯ ಒಳಗಿನಿಂದ
ಒಂದೊಂದೇ ಪ್ರಶ್ನೆಗಳೇಳುತ್ತವೆ
ರಾಜಕೀಯದ ಬಣ್ಣ ಬಯಲಾಗುತ್ತದೆ
ಶಸ್ತ್ರಾಸ್ತ್ರ ಕೆಳಗಿಟ್ಟ ಅವರು
ಶಾಂತಿ ಮಂತ್ರಗಳ ಜಪಿಸುತ್ತಿದ್ದಾರೆ ನೋಡು!

ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲಿ
ಕೆಂಪು ಬಣ್ಣಕ್ಕೆ ಅನೇಕ ಛಾಯೆಗಳಿವೆ ತಾನೇ?
ಶಾಂತಿ ಒಪ್ಪಂದ ಆಗಿದೆ ಅವರೊಂದಿಗೆ
ಶಸ್ತ್ರಾಸ್ತ್ರ ಕೆಳಗಿಟ್ಟು ಶಾಂತವಾಗಿದ್ದಾರೆ
ಹಗ್ಗದ ಮೇಲಿನ ನಡಿಗೆ ನಡೆಯುತ್ತಿದ್ದಾರೆ ನೋಡು!

ಪೋಲೀಸು ರಾಜ್ಯದಲ್ಲಿ ಸೈನ್ಯದ ಸಮಾವೇಶ
ಸಂಸ್ಕೃತಿಯ ಹೆಸರಿನಲಿ ಸಭೆ ಸಮಾರಂಭಗಳು
ಘೋಷಣೆಗಳು ಮೊಳಗುತ್ತಿವೆ ನೋಡು!
ಧರ್ಮ, ಜನಾಂಗಗಳ ಪ್ರಶ್ನೆ, ಓಟಿನ ಲೆಕ್ಕಾಚಾರ
ರೈತ, ಕಾರ್ಮಿಕರ ಸವಾಲು ನೆಲಕಚ್ಚಿವೆ ನೋಡು!

ಚಿವುಟಿ ಹಾಕಿದ ಕನಸುಗಳ ಸಮಾಧಿ
ಸಮತೆಯ ಮಣ್ಣಲ್ಲಿ ಚಿಗುರೊಡೆದು
ಮತ್ತೆ ಮತ್ತೆ ಪ್ರಶ್ನಿಸುತ್ತಿವೆ ನೋಡು!
ರೈತರ ಆತ್ಮ ಹತ್ಯೆಗಳಿಗೆ ಕೊನೆಯೆಂದು?
ಕಾರ್ಮಿಕರ ತುತ್ತಿಗೆ ಲಾಕೌಟ್ ನಿಲ್ಲುವದೆಂದು?
ದುಡಿಯುವ ಕೈಗಳು ನೇಣಿಗೆ ಶರಣಾಗಿ
ಊರ ಹೊರಗಿನ ಮರಗಳಿಗೆ ಹೆಣಗಳು
ಕೇಳುವವರಿಲ್ಲದೆ ನೇತಾಡುತ್ತಿವೆ ನೋಡು!

ಹೊತ್ತು ನಿಂತಿದ್ದಾಳೆ ಧರಿತ್ರಿ
ಹೆಗಲ ಮೇಲೆ ಹೆಣಭಾರದ ಹೊರೆ ನೋಡು
ಅಸಹಾಯಕ ಮಕ್ಕಳ, ಮುದುಕರ
ಜವಾಬ್ದಾರಿ, ಖಾಲಿ ತುತ್ತಿನ ಚೀಲ ತುಂಬಲು
ಅಗ್ಗದ ಕೂಲಿಯಾಗಿದ್ದಕ್ಕೆ ಯಾರು ಹೊಣೆ ಹೇಳು?
ಸಹನೆ ಮೀರುವ ಹೊತ್ತಲ್ಲೂ ಹೇಳುತ್ತಿದ್ದಾಳೆ
ಬಂದೂಕು ಬೇಡ ಹೋರಾಡಲು ಶಬ್ದಗಳಿವೆಯಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವ ಕ್ಷಣದಲಿ ಯಾರೋ
Next post ಮೋಡ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…