Home / ಕವನ / ಕವಿತೆ / ಹೋರಾಡುತ್ತೇನೆ ಶಬ್ದಗಳಿಂದ

ಹೋರಾಡುತ್ತೇನೆ ಶಬ್ದಗಳಿಂದ

ವ್ಯವಸ್ಥೆಯ ಒಳಗಿನಿಂದ
ಒಂದೊಂದೇ ಪ್ರಶ್ನೆಗಳೇಳುತ್ತವೆ
ರಾಜಕೀಯದ ಬಣ್ಣ ಬಯಲಾಗುತ್ತದೆ
ಶಸ್ತ್ರಾಸ್ತ್ರ ಕೆಳಗಿಟ್ಟ ಅವರು
ಶಾಂತಿ ಮಂತ್ರಗಳ ಜಪಿಸುತ್ತಿದ್ದಾರೆ ನೋಡು!

ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲಿ
ಕೆಂಪು ಬಣ್ಣಕ್ಕೆ ಅನೇಕ ಛಾಯೆಗಳಿವೆ ತಾನೇ?
ಶಾಂತಿ ಒಪ್ಪಂದ ಆಗಿದೆ ಅವರೊಂದಿಗೆ
ಶಸ್ತ್ರಾಸ್ತ್ರ ಕೆಳಗಿಟ್ಟು ಶಾಂತವಾಗಿದ್ದಾರೆ
ಹಗ್ಗದ ಮೇಲಿನ ನಡಿಗೆ ನಡೆಯುತ್ತಿದ್ದಾರೆ ನೋಡು!

ಪೋಲೀಸು ರಾಜ್ಯದಲ್ಲಿ ಸೈನ್ಯದ ಸಮಾವೇಶ
ಸಂಸ್ಕೃತಿಯ ಹೆಸರಿನಲಿ ಸಭೆ ಸಮಾರಂಭಗಳು
ಘೋಷಣೆಗಳು ಮೊಳಗುತ್ತಿವೆ ನೋಡು!
ಧರ್ಮ, ಜನಾಂಗಗಳ ಪ್ರಶ್ನೆ, ಓಟಿನ ಲೆಕ್ಕಾಚಾರ
ರೈತ, ಕಾರ್ಮಿಕರ ಸವಾಲು ನೆಲಕಚ್ಚಿವೆ ನೋಡು!

ಚಿವುಟಿ ಹಾಕಿದ ಕನಸುಗಳ ಸಮಾಧಿ
ಸಮತೆಯ ಮಣ್ಣಲ್ಲಿ ಚಿಗುರೊಡೆದು
ಮತ್ತೆ ಮತ್ತೆ ಪ್ರಶ್ನಿಸುತ್ತಿವೆ ನೋಡು!
ರೈತರ ಆತ್ಮ ಹತ್ಯೆಗಳಿಗೆ ಕೊನೆಯೆಂದು?
ಕಾರ್ಮಿಕರ ತುತ್ತಿಗೆ ಲಾಕೌಟ್ ನಿಲ್ಲುವದೆಂದು?
ದುಡಿಯುವ ಕೈಗಳು ನೇಣಿಗೆ ಶರಣಾಗಿ
ಊರ ಹೊರಗಿನ ಮರಗಳಿಗೆ ಹೆಣಗಳು
ಕೇಳುವವರಿಲ್ಲದೆ ನೇತಾಡುತ್ತಿವೆ ನೋಡು!

ಹೊತ್ತು ನಿಂತಿದ್ದಾಳೆ ಧರಿತ್ರಿ
ಹೆಗಲ ಮೇಲೆ ಹೆಣಭಾರದ ಹೊರೆ ನೋಡು
ಅಸಹಾಯಕ ಮಕ್ಕಳ, ಮುದುಕರ
ಜವಾಬ್ದಾರಿ, ಖಾಲಿ ತುತ್ತಿನ ಚೀಲ ತುಂಬಲು
ಅಗ್ಗದ ಕೂಲಿಯಾಗಿದ್ದಕ್ಕೆ ಯಾರು ಹೊಣೆ ಹೇಳು?
ಸಹನೆ ಮೀರುವ ಹೊತ್ತಲ್ಲೂ ಹೇಳುತ್ತಿದ್ದಾಳೆ
ಬಂದೂಕು ಬೇಡ ಹೋರಾಡಲು ಶಬ್ದಗಳಿವೆಯಲ್ಲ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...