Home / ಕವನ / ಕೋಲಾಟ / ದಂಡ ಬಂತವ್ವಾ ದಂಡ

ದಂಡ ಬಂತವ್ವಾ ದಂಡ

ದಂಡ ಬಂತವ್ವ ದಂಡ ಸೊಲ್ಲಾಪುರದ ದಂಡ|
ದಂಡ ನೋಡಿ ಬರತ ಹಡದವ್ವಾ| ಕೋಲೆನ್ನ ಕೋಲ||

ಹುಟ್ಟಿದ ಮಗಳವ್ವ ಕಟ್ಟಿ ಕಲ್ಲ ಇಳದಿಲ್ಲ|
ಭ್ಯಾಡ ನನ ಮಗಳ ಹೊರಿಯಾಕ| ಕೋ||

ಭ್ಯಾಡ ಭ್ಯಾಡಂದರ ಭಿರಿಭಿರಿ ಹೋಗ್ಯಾಳ|
ಹೋಗಿ ಅಗಸ್ಯಾಗ ನಿಂತಾಳ| ಕೋ||

ಢೇರ್ಯಾದ ಮ್ಯಾಲಕಿಽಯ ಬೆಳಕ| ಕೋ||

ಮುಗಲಿಲ್ಲ ಮಾಡಿಲ್ಲ ಮಿಂಚ ಗದ್ದರಣಿಲ್ಲ|
ಇದು ಯಾತದ ಬೆಳಕ ಕರಣೀಕ| ಕೋ||

ಒಬ್ಬರ ಹೋಗಂದ್ರ ಇಬ್ಬರ ಹೋಗಿದಾರ|
ಓಡ್ಹೋಗಿ ಅಕಿನ ಹಿಡದಾರ| ಕೋ||

ಇಪ್ಪತ್ತು ವರುಷದ ತುಪ್ಪುಂಡ ಕೂದಲ|
ನಾರಿ ನಿನಗಾಗಿ ಕಾಯ್ದಿದಾಳೇನ| ಕೋ||

ಹನ್ನೆರಡು ವರುಷದ ಎಣ್ಣುಂಡ ಕೂದಲ|
ಮಿತ್ರಿ ನಿನಗಾಗಿ ಕಾಯ್ದಿದಾಳೇನ| ಕೋ||

ನಾರಿ ನಿನಗಾಗಿ ಕಾಯ್ದಿದಾಳೇನ ಸೊಲ್ಲಪುರದ|
ದಂಡೀಗಿ ಧಾರಿ ಎರೆದೀದನೇನ| ಕೋ||

ಆಂಗಳದಾಗಿನ ತನುವ ಶಾವಂತಿಗ್ಹೂವ|
ಹೂ ಬಾಡಿದಾಗೊಮ್ಮ ನೆನೆಯವ್ವ| ಕೋ||

ಕುಂಬಿಽಯ ಮ್ಯಾಲಿಽನ ದುಂಡ ಶಾವಂತಿಗ್ಹೂವ|
ಹೂ ಬಾಡಿದಾಗೊಮ್ಮ ನೆನೆಯವ್ವ| ಕೋ||
*****

ಪಟ್ಟಣದ ದಾರಿಯ ಮೇಲಿರುವ ಒಂದು ಊರ ಬಳಿಯಲ್ಲಿ ದಂಡು ಬಂದಿಳದಾಗ ಒಬ್ಬ ಹೆಣ್ಣುಮಗಳು ನೋಡಲಿಕ್ಕೆಂದು ಹೋಗಿ ಡೇರೇದ ಹತ್ತಿರ ನಿಂತಿದ್ದಳು. ಒಳಗೆ ಕುಳಿತ ಅಧಿಕಾರಿಯು ಅವಳ ರೂಪಕ್ಕೆ ಮರುಳಾಗಿ ಅವಳನ್ನು ಹಿಡಿದು ತರುವುದಕ್ಕೆ ಜವಾನರನ್ನು ಕಳಿಸುತ್ತಾನೆ(೧-೫). ಈ ಸುದ್ದಿಯನ್ನು ಕೇಳಿ ಅವಳ ತಾಯಿಯು ಓಡಿಬಂದು ದುಃಖಮಾಡುತ್ತಾಳೆ (೬-೮). ಆಗ ಮಗಳು ತಾಯಿಗೆ ತನ್ನ ಸುಖದುಃಖದ ಬಗ್ಗೆ ಕುರುಹುಗಳನ್ನು ಹೇಳುತ್ತಾಳೆ (೯-೧೦).

ಹೀಗೆ ಕುರುಹು ಹೇಳುವ ಪದ್ಧತಿಯು ಬಹುಪ್ರಾಚೀನ ಕಾಲದ್ದು. ಘಟೋತ್ಕಚನು ತಾನು ಸತ್ತರೆ ಮನೆಯ ಮುಂದಿನ ಸಪ್ತತಾಳ ವೃಕ್ಷಗಳು ನೆಲಕ್ಕುರುಳುವವೆಂದು ತನ್ನ ತಾಯಿಗೆ ಕುರುಹನ್ನು ಹೇಳಿ ಯುದ್ಧಕ್ಕೆ ಹೋದ ಸಂಗತಿ ಸುಪ್ರಸಿದ್ಧವಿದೆಯಲ್ಲವೇ?

ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.

ಶಬ್ಧಪ್ರಯೋಗಗಳು:- ಢೇರೆ=ತಂಬೂ.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...