Home / ಕವನ / ಕೋಲಾಟ / ದಂಡ ಬಂತವ್ವಾ ದಂಡ

ದಂಡ ಬಂತವ್ವಾ ದಂಡ

ದಂಡ ಬಂತವ್ವ ದಂಡ ಸೊಲ್ಲಾಪುರದ ದಂಡ|
ದಂಡ ನೋಡಿ ಬರತ ಹಡದವ್ವಾ| ಕೋಲೆನ್ನ ಕೋಲ||

ಹುಟ್ಟಿದ ಮಗಳವ್ವ ಕಟ್ಟಿ ಕಲ್ಲ ಇಳದಿಲ್ಲ|
ಭ್ಯಾಡ ನನ ಮಗಳ ಹೊರಿಯಾಕ| ಕೋ||

ಭ್ಯಾಡ ಭ್ಯಾಡಂದರ ಭಿರಿಭಿರಿ ಹೋಗ್ಯಾಳ|
ಹೋಗಿ ಅಗಸ್ಯಾಗ ನಿಂತಾಳ| ಕೋ||

ಢೇರ್ಯಾದ ಮ್ಯಾಲಕಿಽಯ ಬೆಳಕ| ಕೋ||

ಮುಗಲಿಲ್ಲ ಮಾಡಿಲ್ಲ ಮಿಂಚ ಗದ್ದರಣಿಲ್ಲ|
ಇದು ಯಾತದ ಬೆಳಕ ಕರಣೀಕ| ಕೋ||

ಒಬ್ಬರ ಹೋಗಂದ್ರ ಇಬ್ಬರ ಹೋಗಿದಾರ|
ಓಡ್ಹೋಗಿ ಅಕಿನ ಹಿಡದಾರ| ಕೋ||

ಇಪ್ಪತ್ತು ವರುಷದ ತುಪ್ಪುಂಡ ಕೂದಲ|
ನಾರಿ ನಿನಗಾಗಿ ಕಾಯ್ದಿದಾಳೇನ| ಕೋ||

ಹನ್ನೆರಡು ವರುಷದ ಎಣ್ಣುಂಡ ಕೂದಲ|
ಮಿತ್ರಿ ನಿನಗಾಗಿ ಕಾಯ್ದಿದಾಳೇನ| ಕೋ||

ನಾರಿ ನಿನಗಾಗಿ ಕಾಯ್ದಿದಾಳೇನ ಸೊಲ್ಲಪುರದ|
ದಂಡೀಗಿ ಧಾರಿ ಎರೆದೀದನೇನ| ಕೋ||

ಆಂಗಳದಾಗಿನ ತನುವ ಶಾವಂತಿಗ್ಹೂವ|
ಹೂ ಬಾಡಿದಾಗೊಮ್ಮ ನೆನೆಯವ್ವ| ಕೋ||

ಕುಂಬಿಽಯ ಮ್ಯಾಲಿಽನ ದುಂಡ ಶಾವಂತಿಗ್ಹೂವ|
ಹೂ ಬಾಡಿದಾಗೊಮ್ಮ ನೆನೆಯವ್ವ| ಕೋ||
*****

ಪಟ್ಟಣದ ದಾರಿಯ ಮೇಲಿರುವ ಒಂದು ಊರ ಬಳಿಯಲ್ಲಿ ದಂಡು ಬಂದಿಳದಾಗ ಒಬ್ಬ ಹೆಣ್ಣುಮಗಳು ನೋಡಲಿಕ್ಕೆಂದು ಹೋಗಿ ಡೇರೇದ ಹತ್ತಿರ ನಿಂತಿದ್ದಳು. ಒಳಗೆ ಕುಳಿತ ಅಧಿಕಾರಿಯು ಅವಳ ರೂಪಕ್ಕೆ ಮರುಳಾಗಿ ಅವಳನ್ನು ಹಿಡಿದು ತರುವುದಕ್ಕೆ ಜವಾನರನ್ನು ಕಳಿಸುತ್ತಾನೆ(೧-೫). ಈ ಸುದ್ದಿಯನ್ನು ಕೇಳಿ ಅವಳ ತಾಯಿಯು ಓಡಿಬಂದು ದುಃಖಮಾಡುತ್ತಾಳೆ (೬-೮). ಆಗ ಮಗಳು ತಾಯಿಗೆ ತನ್ನ ಸುಖದುಃಖದ ಬಗ್ಗೆ ಕುರುಹುಗಳನ್ನು ಹೇಳುತ್ತಾಳೆ (೯-೧೦).

ಹೀಗೆ ಕುರುಹು ಹೇಳುವ ಪದ್ಧತಿಯು ಬಹುಪ್ರಾಚೀನ ಕಾಲದ್ದು. ಘಟೋತ್ಕಚನು ತಾನು ಸತ್ತರೆ ಮನೆಯ ಮುಂದಿನ ಸಪ್ತತಾಳ ವೃಕ್ಷಗಳು ನೆಲಕ್ಕುರುಳುವವೆಂದು ತನ್ನ ತಾಯಿಗೆ ಕುರುಹನ್ನು ಹೇಳಿ ಯುದ್ಧಕ್ಕೆ ಹೋದ ಸಂಗತಿ ಸುಪ್ರಸಿದ್ಧವಿದೆಯಲ್ಲವೇ?

ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.

ಶಬ್ಧಪ್ರಯೋಗಗಳು:- ಢೇರೆ=ತಂಬೂ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...