ಮಲ್ಲೀಗಿ ಹೂವಾಗಿ ನೆಲ್ಲೀಯ ಗೊನಿಯಾಗಿ

ಮಲ್ಲೀಗಿ ಹೂವಾಗಿ ನೆಲ್ಲೀಯ ಗೊನಿಯಾಗಿ
ತುರುಬೀನ ಗಿಣಿಯಾಗಿ ಹಾಡ್ಯಾನೆ
ಹುಳವಿಲ್ಲ ಪಕಳ್ಯಾಗ ಹುಳಿಯಿಲ್ಲ ಕವಳ್ಯಾಗ
ಹುಳುಹುಳು ಹುಡಿಗೀಯ ನೋಡ್ಯಾನೆ ||೧||

ಆ ಗಂಡ ಈ ಗಂಡ ಯಾಗಂಡ ಯಾತಕ್ಕ
ಈ ಮಿಂಡ ಹುಚಮುಂಡ ಬಂದಾನೆ
ಕತ್ಲಾಗ ಕರಿಬೆಕ್ಕು ಕಣ್ಕಿಸಿದು ಕಂಡಾಂಗ
ಕೊತವಾಲ ಕರಿಹೆಣ್ಣು ಎಳದಾನೆ ||೨||

ಹೂದೋಟ ಹುಡುಗಾಗಿ ಕುಂಟಾಟ ಕುರುಬಾಗಿ
ಹುಡುಗೀಯ ಜಡಿಬಿಚ್ಚಿ ಬಾಚ್ಯಾನೆ
ಹಿಕ್ಕುಗಟ್ಟಿದ ಕೂದ್ಲಾ ಹೆಕ್ಕೆಕ್ಕಿ ಹಿಕ್ಯಾನೆ
ಬೊಗಬೊಗಸಿ ಹೇನ್ಕಂಡು ನಕ್ಕಾನೆ ||೩||

ಜರತಾರಿ ಚಲುವಯ್ಯ ಮುರತಾಪ ಮುರಿಗೆಯ್ಯ
ಮುದಕೇರ ಹುಡಿಗೇರ ಮಾಡ್ಯಾನೆ
ಮರೆಮಾಚು ಗೊತ್ತಿಲ್ಲ ನಾಚೀಗಿ ಕಲಿತಿಲ್ಲ
ದಾರ್‍ಯಾಗ ಉಟಸೀರಿ ಉಚ್ಯಾನೆ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ?
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೨

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…