Home / ಕವನ / ಕವಿತೆ / ಜೀವದ ಒಳಗುಟ್ಟು

ಜೀವದ ಒಳಗುಟ್ಟು

ಕರ್ಮದ ಬಾಳಿಗೆ ಮಣ್ಣಿಟ್ಟು
ನೋಡಿದೆ ಜೀವದ ಒಳಗುಟ್ಟು!

ಧರ್ಮಕೆ ಕಸಿಯನು ನಾ ಮಾಡಿ
ತಿಂದೆನೊ ಪಾಪದ ಹಣ್ಣು ಇಡಿ;

ಮೂಡಲ ಸೂರ್ಯನು ಅಲ್ಲಿರನು
ಮನುಜನು ಬುದ್ದಿಯ ತಾಳಿರನು!

ಗಂಟೆಯ ಮುಳ್ಳದು ತಿರುಗಾಡಿ
ಲೋಕಕೆ ಕಲಿಪುದು ಬಲುಮೋಡಿ.

ಸುತ್ತಲು ಮಂಜಿನ ನೆನೆಹನಿ
ಕಣ್ಣಲಿ ಪಾಡಿನ ಮಂಕು ಹನಿ!

ಹೊಂಡವೆ ನೀರಿನ ಸದ್ಯನೆಲೆ,
ಲೋಕ ದಾರಿದ್ರ್‍ಯದ ಕಟ್ಟುಬಲೆ;

ಜೀವನ ಜಿದ್ದಿನ ಜೀಕಲಿನ
ಆಶ್ರಯವಾಗಿದೆ-ಅದೆ ಮಲಿನ!

ಪಾಪಿಯ ನಗುವಿನ ಕಹಿ ಗೆಲುವು
ಯಾರ ಹೃದಯಕೆ ಎಸೆದುಗುಳು?

ಪುಷ್ಪದ ಎಸಳಿನ ಆ ಸೊಗವು
ಮೋಹಿನಿ ತೋರಿದ ಆ ಸೊಬಗು-

ಅಂಗೈ ತೋರಿದ ಭಾಗ್ಯವದು
ಎಲ್ಲಿವರೆಗದು- ಅದೆ ನೆನವು!

ಸೂಜಿಯು ಹೊರುವುದು ದಾರವನು
ಇರುವೆಯು ಹೊರುವುದು ಕಾಳನ್ನು,

ಮರಗಳು ಹೊರುವುವು ಹಣ್ಣನ್ನು
ಮಾನವ ಹೊರುವನು ಪಾಪವನು!

ನಾಯಿಗೆ ನಾಯ್ಗಳು ವೈರಿಗಳು,
ಜನಗಳು ಜನಕೆ ಮೊನೆಮುಳ್ಳು!

ರಕ್ತದ ದಾಹವೆ ಹೃದಯದಲು,
ಕಾಮಿಯ ವಾಣಿಯ ಉಸುರಿನಲು;

ಸತ್ತರು ಮರೆಯರು ಲೋಭವನು,
ಮತ್ಸರ ಬಾಳಿನ ದರ್ಪವನು,

ಮೀನಿಗೆ ಮೀನೇ ಸವಿಯೂಟ
ಸೋದರ ವಧೆಯೇ ನರನಾಟ!

ವಿದ್ಯೆಯು ದ್ರೋಹಿಯ ಮಂಕಾಟ,
ಬಡವನ ವಂಚಿಪ ಹುಸಿಮಾಟ!

ತಿನ್ನುವ ಕಾಳದು ಕರುಳಿನಲಿ
ಉರಳ್ವದು ಮೋಹದ ರಾಟೆಯಲಿ.

ಅದರಿಂ ಸೂರ್ಯನು ಚಂದ್ರನನು
ವಂಚಿಪ ಬಾಳಿನ ತಿರುಳನ್ನು,

ನೋಡುತ ಪೋಗ್ವುದೆ-ಈ ಮಾಯ,
ಮಾಯ ಪ್ರಪಂಚದ ಅಧಿಮಾಯ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...