Home / ಕವನ / ಕವಿತೆ / ಕನ್ನಡಮ್ಮ

ಕನ್ನಡಮ್ಮ

ರಾಜ್ಯೋತ್ಸವ ಬಂದೇ ಬಿಡುತ್ತದೆ
ಚಳಿಗಾಲ ಕಾಲಿಕ್ಕುತ್ತಿದ್ದಂತೆಯೇ
ಮುದುರಿದ ಕನ್ನಡಮ್ಮನ ಶೃಂಗಾರ
ನಾಡು ನುಡಿಗಳ ಹೊಗಳಿಕೆ
ರಾಜಕೀಯದವುಗಳ ಉದ್ದುದ್ದ ಭಾಷಣ
ಸಾಹಿತಿಗಳ ಹೊಗಳು ಭಟ್ಟಂಗಿ ಕೆಲಸ
ಪ್ರಶಸ್ತಿಗಳ ಸುರಿಮಳೆ.
ನಾಡಿನ ಜನರೇ ಎದ್ದೇಳಿ ಎದ್ದೇಳಿ
ಬರೆಯುವ ಕವಿಗಳ
ಕಾವ್ಯಕನ್ನಿಕೆ ಇತ್ತಿತ್ತಲಾಗಿ
ಸುಸ್ತಾಗಿ ಜೋಲಿ ಹೋಗಿ ಬೀಳುತ್ತಿದ್ದಾಳೆ.
ಆಯಿತಲ್ಲ ಕನ್ನಡಮ್ಮನಿಗೆ
ನೂರಾರು ಸಾವಿರಾರು ವರುಷಗಳು
ಹಸಿವು ಬಡತನ ನಿರುದ್ಯೋಗ
ಕನ್ನಡಮ್ಮ ಸಿಕ್ಕು ಒದ್ದಾಡುತ್ತಿದ್ದಾಳೆ,
ನಾಲಿಗೆ ತೊದಲುತಿದೆ
ನೆರೆ ರಾಜ್ಯಗಳ ಭಾಷೆಯಲಿ
ವಿದೇಶಿಯರ ವಿಲಾಸಗಳಲಿ
ಪಬ್ – ಡಿಸ್ಕೋ ಸಂಸ್ಕೃತಿಗಳಲಿ
ಅಷ್ಟೇ ಅಲ್ಲ
ತನ್ನ ಸ್ವಾರ್ಥ ರಾಜಕೀಯ
ಮಕ್ಕಳ ಅಧಿಕಾರ ದಾಹ ಕಚ್ಚಾಟಗಳಲಿ
ಸಾಹಿತಿಗಳ ಇಬ್ಬಗೆಯ ನೀತಿಗಳಲಿ
ಸಮಾಜದ ಕಳಂಕ ಲಂಪಟರ
ಧೂರ್ತ ಅನಾಚಾರ
ಅತ್ಯಾಚಾರರ ಹತ್ಯಾಕಾಂಡಗಳಲಿ

ಅಮ್ಮ ಕನ್ನಡಮ್ಮ
ಸುಸ್ತಾಗುತ್ತಿದ್ದಾಳೆ.
ಪ್ರತಿ ವರ್ಷಗಳ ರಾಜ್ಯೋತ್ಸವಗಳಲಿ
ಕನ್ನಡಮ್ಮನ ಮಕ್ಕಳು
ಏರಿದ್ದೆಷ್ಟೇ ಇದ್ದರೂ
ಅಮ್ಮ ಮಾತ್ರ ಇನ್ನೂ ಇನ್ನೂ
ಪ್ರಪಾತದಾಳಕ್ಕೆ ಇಳಿಯುತ್ತಲೇ ಇದ್ದಾಳೆ
ಭರ್ರನೆ ಬಂದು ಝರ್ರನೆ ಇಳಿದು ಹೋಗುವ
ರಾಜ್ಯೋತ್ಸವ ರಾಜಕೀಯ
ಉತ್ಸವಗಳಾಗುತ್ತಿವೆ,
ಕನ್ನಡಮ್ಮನಿಗೆ ಕ್ಯಾನ್ಸರ ಬಂದರೇನು ಗತಿ!
ಬನ್ನಿ ಎಲ್ಲರೂ
ಕನ್ನಡಮ್ಮನಿಗೆ ಪ್ರೀತಿ ಕೊಡೋಣ
ಸುತ್ತುವರಿಯೋಣ, ಕಾಯೋಣ
ಉಳಿಸಿಕೊಳ್ಳೋಣ
ಅವಳ ಮುಖದ ಮೇಲಿನ
ಶಾಂತ ಸ್ವರೂಪದ
ಸಂತೋಷದ ಹೆಮ್ಮೆಯ
ನಗು ಕಾಣೋಣ
ಬನ್ನಿ ಎಲ್ಲರೂ, ಬನ್ನಿ ಎಲ್ಲರೂ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...