Home / ಕವನ / ಕವಿತೆ / ಕನ್ನಡಮ್ಮ

ಕನ್ನಡಮ್ಮ

ರಾಜ್ಯೋತ್ಸವ ಬಂದೇ ಬಿಡುತ್ತದೆ
ಚಳಿಗಾಲ ಕಾಲಿಕ್ಕುತ್ತಿದ್ದಂತೆಯೇ
ಮುದುರಿದ ಕನ್ನಡಮ್ಮನ ಶೃಂಗಾರ
ನಾಡು ನುಡಿಗಳ ಹೊಗಳಿಕೆ
ರಾಜಕೀಯದವುಗಳ ಉದ್ದುದ್ದ ಭಾಷಣ
ಸಾಹಿತಿಗಳ ಹೊಗಳು ಭಟ್ಟಂಗಿ ಕೆಲಸ
ಪ್ರಶಸ್ತಿಗಳ ಸುರಿಮಳೆ.
ನಾಡಿನ ಜನರೇ ಎದ್ದೇಳಿ ಎದ್ದೇಳಿ
ಬರೆಯುವ ಕವಿಗಳ
ಕಾವ್ಯಕನ್ನಿಕೆ ಇತ್ತಿತ್ತಲಾಗಿ
ಸುಸ್ತಾಗಿ ಜೋಲಿ ಹೋಗಿ ಬೀಳುತ್ತಿದ್ದಾಳೆ.
ಆಯಿತಲ್ಲ ಕನ್ನಡಮ್ಮನಿಗೆ
ನೂರಾರು ಸಾವಿರಾರು ವರುಷಗಳು
ಹಸಿವು ಬಡತನ ನಿರುದ್ಯೋಗ
ಕನ್ನಡಮ್ಮ ಸಿಕ್ಕು ಒದ್ದಾಡುತ್ತಿದ್ದಾಳೆ,
ನಾಲಿಗೆ ತೊದಲುತಿದೆ
ನೆರೆ ರಾಜ್ಯಗಳ ಭಾಷೆಯಲಿ
ವಿದೇಶಿಯರ ವಿಲಾಸಗಳಲಿ
ಪಬ್ – ಡಿಸ್ಕೋ ಸಂಸ್ಕೃತಿಗಳಲಿ
ಅಷ್ಟೇ ಅಲ್ಲ
ತನ್ನ ಸ್ವಾರ್ಥ ರಾಜಕೀಯ
ಮಕ್ಕಳ ಅಧಿಕಾರ ದಾಹ ಕಚ್ಚಾಟಗಳಲಿ
ಸಾಹಿತಿಗಳ ಇಬ್ಬಗೆಯ ನೀತಿಗಳಲಿ
ಸಮಾಜದ ಕಳಂಕ ಲಂಪಟರ
ಧೂರ್ತ ಅನಾಚಾರ
ಅತ್ಯಾಚಾರರ ಹತ್ಯಾಕಾಂಡಗಳಲಿ

ಅಮ್ಮ ಕನ್ನಡಮ್ಮ
ಸುಸ್ತಾಗುತ್ತಿದ್ದಾಳೆ.
ಪ್ರತಿ ವರ್ಷಗಳ ರಾಜ್ಯೋತ್ಸವಗಳಲಿ
ಕನ್ನಡಮ್ಮನ ಮಕ್ಕಳು
ಏರಿದ್ದೆಷ್ಟೇ ಇದ್ದರೂ
ಅಮ್ಮ ಮಾತ್ರ ಇನ್ನೂ ಇನ್ನೂ
ಪ್ರಪಾತದಾಳಕ್ಕೆ ಇಳಿಯುತ್ತಲೇ ಇದ್ದಾಳೆ
ಭರ್ರನೆ ಬಂದು ಝರ್ರನೆ ಇಳಿದು ಹೋಗುವ
ರಾಜ್ಯೋತ್ಸವ ರಾಜಕೀಯ
ಉತ್ಸವಗಳಾಗುತ್ತಿವೆ,
ಕನ್ನಡಮ್ಮನಿಗೆ ಕ್ಯಾನ್ಸರ ಬಂದರೇನು ಗತಿ!
ಬನ್ನಿ ಎಲ್ಲರೂ
ಕನ್ನಡಮ್ಮನಿಗೆ ಪ್ರೀತಿ ಕೊಡೋಣ
ಸುತ್ತುವರಿಯೋಣ, ಕಾಯೋಣ
ಉಳಿಸಿಕೊಳ್ಳೋಣ
ಅವಳ ಮುಖದ ಮೇಲಿನ
ಶಾಂತ ಸ್ವರೂಪದ
ಸಂತೋಷದ ಹೆಮ್ಮೆಯ
ನಗು ಕಾಣೋಣ
ಬನ್ನಿ ಎಲ್ಲರೂ, ಬನ್ನಿ ಎಲ್ಲರೂ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...