Home / ಕವನ / ಕವಿತೆ / ನಿನ್ನೊಳಗನಿಣುಕಿದವರೆಷ್ಟು ಮಂದಿ

ನಿನ್ನೊಳಗನಿಣುಕಿದವರೆಷ್ಟು ಮಂದಿ

ಅಮ್ಮಾ!
ನಿನ್ನ ಕಥೆಯ ಕೀರ್ತಿಸುತ ನಿಂತವರು ಬಹಳ,
ನಿನ್ನ ಮೈಯಂದವ ಅಂದಗೆಡುವಷ್ಟು ಹಾಡಿ ಹೊಗಳಿದವರು ಬಹಳ,
ಕಲ್ಪನೆಯ ಕುಂಚದಲಿ ಬಣ್ಣಿಸಿದವರು ಬಹಳ
ನಿನ್ನ ಗುಡಿಯ ಸಾಲು ಸಾಲಭಂಜಿಕೆಗಳ, ಮದನಿಕೆಗಳ
ಕುಸುರಿಗೆಲಸಗಳ ನೋಡಿ ಮರುಳಾಗಿ
ಬಾಯ್ತೆರೆದು ಅಲ್ಲೇ ಕುಳಿತವರು ಬಹಳ
ನಿನ್ನ ಸಮೀಪಿಸಿದವರು ನಿನ್ನೊಡವೆ ತೊಡುವೆಗಳ
ಬೆಡಗಿಗೆ ದಡಬಡಿಸಿ ದಂಗಾಗಿ, ನಿನ್ನ ಮೈಕಾಂತಿಗೆ ಕಣ್ಕುಕ್ಕಿ
ಆ ಚೆಲುಬಲೆಯಲ್ಲಿ ಸಿಲುಕಿ ಒದ್ದಾಡಿದವರು ಬಹಳ,
ನಿನ್ನ ಮಾತನಾಲಿಸಿದವರು, ಅದರಿಂಪು ಸೊಂಪಿಗೆ
ಒಗಟು ಜಿಗುಟುಗಳಿಗೆ, ಕಿವಿಯಗಲಿಸಿ ಬೆಪ್ಪಾದವರು ಬಹಳ,
ನಿನ್ನೊಂದೊಂದು ಬೆರಳ ಸನ್ನೆಗಳಿಗೆ ತಮತಮಗೆ ಕಂಡಂತೆ
ಅರ್ಥಗಳ ಹಚ್ಚಿ ಅನರ್ಥವುಂಡವರು ಬಹಳ
ನಿನ್ನ ಮನೆಯಿಂದಾಯ್ದ ಆಣಿಮುತ್ತೆಂದು
ಹಗಲೆಲ್ಲ ಬಾಯಲುರುಳಾಡಿಸಿ ಸವೆಸಿದವರು ಬಹಳ
ನಿನ್ನ ಹೊತ್ತಿಗೆಗಳ ಹೊತ್ತು ಮೆರೆಸಿ ತಾವು ಮೆರೆದವರು ಬಹಳ
ನಿನ್ನೆದೆ ಮಾತನಾಲಿಸುವ ಭ್ರಮೆಯಿಂದ ಮಾಯೆಲೀಲೆಗಳಲಿ
ಮುಳುಗಿದವರು ಬಹಳ

ನಿನ್ನ ಹೃದಯವ ಮುಟ್ಟಿದವರೆಷ್ಟು ಮಂದಿ ತಾಯಿ?
ನಿನ್ನೊಳಮರ್ಮವ ಅರಿತವರೆಷ್ಟು ಮಂದಿ?
ನಿನ್ನ ನಡೆಯ ನಡೆದವರೆಷ್ಟು?
ನಿನ್ನ ಮಾತಿನ ಜ್ಯೋತಿಯಿಂದ ತಮ್ಮ
ಅಂತರಂಗ ಬಹಿರಂಗಗಳ ಬೆಳಗಿದವರೆಷ್ಟು ಮಂದಿ?
ನಿನ್ನೊಳಗಿನೊಳಗೆ ಇಣುಕಿದವರೆಷ್ಟು ಮಂದಿ?
ನಿನ್ನಲಿ ಲೀನವಾಗಿ ನಿನಗೆ ತಮ್ಮನೊಪ್ಪಿಸಿಕೊಂಡವರೆಷ್ಟು ಮಂದಿ
ತಾಯಿ?
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...