ಇನ್ನೂ ಅರ್ಥಾಗಲಿಲ್ಲೇನ್ನಿನ್ಗೆ
ನಾಕಕ್ಸರಾ ಬಾಯಾಗಿಟಗಂಡು
ನಾಕ ಪುಸ್ತಕಾ ತಲೆಯಾಗಿಟ್ಟುಗಂಡು
ನಾಕ ಕಾಸ ಕೈಯಾಗಿಟಗಂಡು
ಯಾಕ ಮೆರೀತಿಯಲೇ
ಬಾಯಾಗೇ ಅಂತ್ರಕ್ಕೇಣೀ ಹಾಕ್ತೀ
ಸಮತಾ, ಸೋದರತಾ, ಗಾಂಧಿ ತಾತಾ
ಅಂತಾ ಬಂಗಾರದೊಳ್ಳೊಳ್ಳೆ ನಾಣ್ಣಿಗಳನ್ನ
ಒದರಿ ಒದರೀ ಒಡಕು ಬೋಕಿ ಮಾಡಿಬಿಟ್ಟಿ
ಗುಂಪು ಸೇರ್ಸಿ ಶಂಖಾ ಊದ್ತಿ
ಕೇಳಾವರ್ನ ನೋಡಾವರ್ನ
ಕುರೀಗಳನ ಮಾಡೀಯೇನ್ಲೆ
ನಿನ್ನ ತಲೀ ದೊಡ್ಡದಿರುಭೌದು
ಲೇ ಕೈ ಕಾಲ್ಸಣ್ಯಾ
ಆದರೆ ದುಡಿಯೋದು ತೋಳು
ನೆನಪಿರ್ಲಿ
ಅನ್ನಾ ಮೊದಲು ಹೋಗಬೇಕು ಹೊಟ್ಟಿಗೆ
ಅಲ್ಲಿಂದ ಜೀರ್ಣಾಗಿ ರಕ್ತಾಗಿ
ಹರೀಬೇಕೆಲ್ಲಾ ಕಡೀಗೆ
ತಲಿಗು ಕೂಡಾ
ನಾ ಮಾತಾಡದೇ ಇರಭೌದು
ಆದರೆ ಒಮ್ಮೆಲೇ ಮಾಡಿ ತೋರಿಸ್ತೀನಿ
ಎಚ್ಚರಾ
*****
Related Post
ಸಣ್ಣ ಕತೆ
-
ಮೌನವು ಮುದ್ದಿಗಾಗಿ!
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…
-
ಜುಡಾಸ್
"ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…
-
ಮತ್ತೆ ಬಂದ ವಸಂತ
ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…
-
ಪ್ರೇಮನಗರಿಯಲ್ಲಿ ಮದುವೆ
ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…