ಹೊಳೆದಾಟಿದ ಮೇಲೆ….

ನಾವು ಗೂಡಿನಲ್ಲಿ ಬೆಚ್ಚಗೆ ಕಾವು ಕೂಟ್ಟು ಬೆಳೆಸಿ
ಹೂಮಾಂಸ ಅರಳಿ ಹರಳೆಯಾಗಿ, ಹುಲ್ಲೆಸಳಾಗಿ ಇದ್ದಂಥವು
ಬರುಬರುತ್ತಾ ರೆಕ್ಕೆ ಪುಚ್ಚಗಳಾಗಿ ಜೊತೆಗೆ ಕೊಕ್ಕು ಉಗುರುಗಳೂ ಆಗಿ
ನಂತರ ಮುದಿಯಾದ ನಮ್ಮನ್ನೇ ಕುಕ್ಕಿ ಗಾಯಗೊಳಿಸಿ
ಈ ಗೂಡನೂಡೆದು ದೂಡಿ ಹಾರಿ ಹೋಗುತ್ತವೆ ಸ್ವಚ್ಛಂದ
ಹೊಳೆ ದಾಟಿದಂತೆ, ಬಿಡುಗಡೆಯಾದಂತೆ, ತೊಡರು ಹರಿದಂತೆ.
ಮುದಿಯಾದ ನಮ್ಮನ್ನು ಹದಕ್ಕೆ ಬರದ ನಮ್ಮ ಮರಿಗಳನ್ನು
ಬೀದಿಪಾಲು-ನಾಯಿಪಾಲು ಮಾಡಿ, ಹೊಸನಲ್ಲೆಯರೊಡನೆ
ಚಲ್ಲವಾಡುತ್ತ, ನಮ್ಮ ಹಣ್ಣೆಲೆತನವನ್ನು ಅಣಕಿಸಿ ಕಿಸಿಯುತ್ತ
ತಮ್ಮ ವೈಭವ ಭವನದ ಸುಖದಮಲಿನಲ್ಲಿ ನಾವು ಪೂರಾ ಕಾಣದಂತೆ
ಅವು ಮಬ್ಬೇರಿ ಹಾರಿದಾಗ

ಅಯ್ಯೋ ನೀತಿ ಅಳಿಯಿತು, ಕಾಲ ಕೆಟ್ಟಿತು, ಹೆಣ್ಣು ಕೆಡಿಸಿತು,
ಹೊನ್ನು ಭಿನ್ನ ಮಾಡಿತು, ತಾಯಿಗ್ಗಂಡರೆ, ಜಗಭಂಡರೇ
ಕೃತಘ್ನರೇ, ಕಡು ನಾರಕಿಗಳೇ ಎಂದು ಮುಂತಾಗಿ ನಾವು
ಹಳಿಯತೊಡಗಿದರೆ ನಮ್ಮ ಹಣೆಬರಹವನ್ನಷ್ಟೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸಿವು
Next post ಲಿಂಗಮ್ಮನ ವಚನಗಳು – ೮೫

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…