ಹೊಳೆದಾಟಿದ ಮೇಲೆ….

ನಾವು ಗೂಡಿನಲ್ಲಿ ಬೆಚ್ಚಗೆ ಕಾವು ಕೂಟ್ಟು ಬೆಳೆಸಿ
ಹೂಮಾಂಸ ಅರಳಿ ಹರಳೆಯಾಗಿ, ಹುಲ್ಲೆಸಳಾಗಿ ಇದ್ದಂಥವು
ಬರುಬರುತ್ತಾ ರೆಕ್ಕೆ ಪುಚ್ಚಗಳಾಗಿ ಜೊತೆಗೆ ಕೊಕ್ಕು ಉಗುರುಗಳೂ ಆಗಿ
ನಂತರ ಮುದಿಯಾದ ನಮ್ಮನ್ನೇ ಕುಕ್ಕಿ ಗಾಯಗೊಳಿಸಿ
ಈ ಗೂಡನೂಡೆದು ದೂಡಿ ಹಾರಿ ಹೋಗುತ್ತವೆ ಸ್ವಚ್ಛಂದ
ಹೊಳೆ ದಾಟಿದಂತೆ, ಬಿಡುಗಡೆಯಾದಂತೆ, ತೊಡರು ಹರಿದಂತೆ.
ಮುದಿಯಾದ ನಮ್ಮನ್ನು ಹದಕ್ಕೆ ಬರದ ನಮ್ಮ ಮರಿಗಳನ್ನು
ಬೀದಿಪಾಲು-ನಾಯಿಪಾಲು ಮಾಡಿ, ಹೊಸನಲ್ಲೆಯರೊಡನೆ
ಚಲ್ಲವಾಡುತ್ತ, ನಮ್ಮ ಹಣ್ಣೆಲೆತನವನ್ನು ಅಣಕಿಸಿ ಕಿಸಿಯುತ್ತ
ತಮ್ಮ ವೈಭವ ಭವನದ ಸುಖದಮಲಿನಲ್ಲಿ ನಾವು ಪೂರಾ ಕಾಣದಂತೆ
ಅವು ಮಬ್ಬೇರಿ ಹಾರಿದಾಗ

ಅಯ್ಯೋ ನೀತಿ ಅಳಿಯಿತು, ಕಾಲ ಕೆಟ್ಟಿತು, ಹೆಣ್ಣು ಕೆಡಿಸಿತು,
ಹೊನ್ನು ಭಿನ್ನ ಮಾಡಿತು, ತಾಯಿಗ್ಗಂಡರೆ, ಜಗಭಂಡರೇ
ಕೃತಘ್ನರೇ, ಕಡು ನಾರಕಿಗಳೇ ಎಂದು ಮುಂತಾಗಿ ನಾವು
ಹಳಿಯತೊಡಗಿದರೆ ನಮ್ಮ ಹಣೆಬರಹವನ್ನಷ್ಟೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸಿವು
Next post ಲಿಂಗಮ್ಮನ ವಚನಗಳು – ೮೫

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys