Home / ಕವನ / ಕವಿತೆ / ಕೂಡಿ ಕೆಳೆಯುವ ಆಟ

ಕೂಡಿ ಕೆಳೆಯುವ ಆಟ

ನನಗೆ ಅರವತ್ತು ವರ್ಷ
ನಮ್ಮವರಿಗೆ ಎಪ್ಪತ್ತು
ಏನೋ ಇಬ್ಬರಿಗೂ ಬೇಜಾರಾದಾಗೆಲ್ಲ
ನನ್ನ ಎಪ್ಪತ್ತರಲ್ಲಿ ನಿನ್ನ ಅರವತ್ತು ಕಳೆ
ಉಳಿದ ಹತ್ತರಲ್ಲಿ
ನೀನೈದು ವರ್ಷದವಳು ನಾನೈದು ವರ್ಷದವ
ಬಾ ಎಂದು ಕೈಹಿಡಿದು
ನನ್ನ ಮೊಮ್ಮಕ್ಕಳು ಸಾಕಿರುವ
ನಾಯಿಯ ಮರಿಯ ಹತ್ತಿರವೋ
ಬೆಕ್ಕಿನ ಮರಿಗಳ ಹತ್ತಿರವೋ ಒಯ್ದು
ಮರಿಗಳನ್ನು ನನ್ನ ಹೆಗಲ ಮೇಲೆಯೋ
ಕಾಲ ಹತ್ತಿರವೋ ಹಾಕಿದಾಗ
ಖುಷಿಯಾಗಿ ನನ್ನ ಕಣ್ಣಲ್ಲಿನೀರು ಬರುತ್ತದೆ
ಮೊಮ್ಮಕ್ಕಳು
‘ಹೋ ಅಜ್ಜಿ ಅಜ್ಜಿ ಅಳ್ತಾ ಇದೆ
ಎಂದು ಚಪ್ಪಾಳೆ ತಟ್ಟಿ ಆನಂದಿಸುವಾಗ
ನನ್ನವರು ಐದರಲ್ಲಿ ಇನ್ನೊ ಅರ್ಧವಾಗಿ
ಮೊಮ್ಮಕ್ಕಳ ಹಿಂದೆ ಓಡುತ್ತಾರೆ
ಸಂತೋಷದ ಕಣ್ಣೀರು ನನಗೆ ಉಕ್ಕಿ ಬಂದಾಗ
ಅಯ್ಯೋ ಪಾಪ ಅಜ್ಜಿ ಅಳ್ತಾ ಇದೆ, ಎಂದು
ಮೊಮ್ಮಕ್ಕಳೆಲ್ಲ ಮೆತ್ತಗೆ
ಒಳಗೆ ಒಯ್ದು
ಮೆತ್ತನೆಯ ಹಾಸಿಗೆಯ ಮೇಲೆ
ಮಲಗಿಸಿ
ಮಮ್ಮಿ
ಅಜ್ಜಾ- ಅಜ್ಜಿಗೆ ಬಿಸಿ ಕಾಫಿ
ಎಂದು ಆರ್ಡರ್ ಮಾಡಿದಾಗ
ನಾವು ಮೊಮ್ಮಕ್ಕಳಲ್ಲಿ
ಮರಿ ಮಕ್ಕಳಂತೆ ಕರಗಿ ಹೋಗಿದ್ದೆವು.
(ನಮ್ಮ ಪಕ್ಕದ ಮನೆಯ ಅಜ್ಜಿ ತನ್ನ ವಿಷಯವಾಗಿ ಒಂದು ಕವನ ಬರೆಯಲು ಹೇಳುತ್ತಿದ್ದರು. ಪ್ರತಿ ಸಲ ಬಂದಾಗ ವಿಚಾರಿಸುತ್ತಿದ್ದರು. ಅವರ ಅರವತ್ತರ ಹುಟ್ಟುಹಬ್ಬಕ್ಕೆ ಅವರ ವಿಷಯವೇ ಬರೆದುಕೊಟ್ಟಾಗ ನಿಜವಾಗಿಯೂ ಅವರ ಕಣ್ಣಲ್ಲಿ ಆನಂದ ಭಾಷ್ಪವು ಬಂದವು)
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...