Home / ಕವನ / ಕವಿತೆ / ಕೂಡಿ ಕೆಳೆಯುವ ಆಟ

ಕೂಡಿ ಕೆಳೆಯುವ ಆಟ

ನನಗೆ ಅರವತ್ತು ವರ್ಷ
ನಮ್ಮವರಿಗೆ ಎಪ್ಪತ್ತು
ಏನೋ ಇಬ್ಬರಿಗೂ ಬೇಜಾರಾದಾಗೆಲ್ಲ
ನನ್ನ ಎಪ್ಪತ್ತರಲ್ಲಿ ನಿನ್ನ ಅರವತ್ತು ಕಳೆ
ಉಳಿದ ಹತ್ತರಲ್ಲಿ
ನೀನೈದು ವರ್ಷದವಳು ನಾನೈದು ವರ್ಷದವ
ಬಾ ಎಂದು ಕೈಹಿಡಿದು
ನನ್ನ ಮೊಮ್ಮಕ್ಕಳು ಸಾಕಿರುವ
ನಾಯಿಯ ಮರಿಯ ಹತ್ತಿರವೋ
ಬೆಕ್ಕಿನ ಮರಿಗಳ ಹತ್ತಿರವೋ ಒಯ್ದು
ಮರಿಗಳನ್ನು ನನ್ನ ಹೆಗಲ ಮೇಲೆಯೋ
ಕಾಲ ಹತ್ತಿರವೋ ಹಾಕಿದಾಗ
ಖುಷಿಯಾಗಿ ನನ್ನ ಕಣ್ಣಲ್ಲಿನೀರು ಬರುತ್ತದೆ
ಮೊಮ್ಮಕ್ಕಳು
‘ಹೋ ಅಜ್ಜಿ ಅಜ್ಜಿ ಅಳ್ತಾ ಇದೆ
ಎಂದು ಚಪ್ಪಾಳೆ ತಟ್ಟಿ ಆನಂದಿಸುವಾಗ
ನನ್ನವರು ಐದರಲ್ಲಿ ಇನ್ನೊ ಅರ್ಧವಾಗಿ
ಮೊಮ್ಮಕ್ಕಳ ಹಿಂದೆ ಓಡುತ್ತಾರೆ
ಸಂತೋಷದ ಕಣ್ಣೀರು ನನಗೆ ಉಕ್ಕಿ ಬಂದಾಗ
ಅಯ್ಯೋ ಪಾಪ ಅಜ್ಜಿ ಅಳ್ತಾ ಇದೆ, ಎಂದು
ಮೊಮ್ಮಕ್ಕಳೆಲ್ಲ ಮೆತ್ತಗೆ
ಒಳಗೆ ಒಯ್ದು
ಮೆತ್ತನೆಯ ಹಾಸಿಗೆಯ ಮೇಲೆ
ಮಲಗಿಸಿ
ಮಮ್ಮಿ
ಅಜ್ಜಾ- ಅಜ್ಜಿಗೆ ಬಿಸಿ ಕಾಫಿ
ಎಂದು ಆರ್ಡರ್ ಮಾಡಿದಾಗ
ನಾವು ಮೊಮ್ಮಕ್ಕಳಲ್ಲಿ
ಮರಿ ಮಕ್ಕಳಂತೆ ಕರಗಿ ಹೋಗಿದ್ದೆವು.
(ನಮ್ಮ ಪಕ್ಕದ ಮನೆಯ ಅಜ್ಜಿ ತನ್ನ ವಿಷಯವಾಗಿ ಒಂದು ಕವನ ಬರೆಯಲು ಹೇಳುತ್ತಿದ್ದರು. ಪ್ರತಿ ಸಲ ಬಂದಾಗ ವಿಚಾರಿಸುತ್ತಿದ್ದರು. ಅವರ ಅರವತ್ತರ ಹುಟ್ಟುಹಬ್ಬಕ್ಕೆ ಅವರ ವಿಷಯವೇ ಬರೆದುಕೊಟ್ಟಾಗ ನಿಜವಾಗಿಯೂ ಅವರ ಕಣ್ಣಲ್ಲಿ ಆನಂದ ಭಾಷ್ಪವು ಬಂದವು)
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...