Home / ಕವನ / ಕವಿತೆ / ಕೂಡಿ ಕೆಳೆಯುವ ಆಟ

ಕೂಡಿ ಕೆಳೆಯುವ ಆಟ

ನನಗೆ ಅರವತ್ತು ವರ್ಷ
ನಮ್ಮವರಿಗೆ ಎಪ್ಪತ್ತು
ಏನೋ ಇಬ್ಬರಿಗೂ ಬೇಜಾರಾದಾಗೆಲ್ಲ
ನನ್ನ ಎಪ್ಪತ್ತರಲ್ಲಿ ನಿನ್ನ ಅರವತ್ತು ಕಳೆ
ಉಳಿದ ಹತ್ತರಲ್ಲಿ
ನೀನೈದು ವರ್ಷದವಳು ನಾನೈದು ವರ್ಷದವ
ಬಾ ಎಂದು ಕೈಹಿಡಿದು
ನನ್ನ ಮೊಮ್ಮಕ್ಕಳು ಸಾಕಿರುವ
ನಾಯಿಯ ಮರಿಯ ಹತ್ತಿರವೋ
ಬೆಕ್ಕಿನ ಮರಿಗಳ ಹತ್ತಿರವೋ ಒಯ್ದು
ಮರಿಗಳನ್ನು ನನ್ನ ಹೆಗಲ ಮೇಲೆಯೋ
ಕಾಲ ಹತ್ತಿರವೋ ಹಾಕಿದಾಗ
ಖುಷಿಯಾಗಿ ನನ್ನ ಕಣ್ಣಲ್ಲಿನೀರು ಬರುತ್ತದೆ
ಮೊಮ್ಮಕ್ಕಳು
‘ಹೋ ಅಜ್ಜಿ ಅಜ್ಜಿ ಅಳ್ತಾ ಇದೆ
ಎಂದು ಚಪ್ಪಾಳೆ ತಟ್ಟಿ ಆನಂದಿಸುವಾಗ
ನನ್ನವರು ಐದರಲ್ಲಿ ಇನ್ನೊ ಅರ್ಧವಾಗಿ
ಮೊಮ್ಮಕ್ಕಳ ಹಿಂದೆ ಓಡುತ್ತಾರೆ
ಸಂತೋಷದ ಕಣ್ಣೀರು ನನಗೆ ಉಕ್ಕಿ ಬಂದಾಗ
ಅಯ್ಯೋ ಪಾಪ ಅಜ್ಜಿ ಅಳ್ತಾ ಇದೆ, ಎಂದು
ಮೊಮ್ಮಕ್ಕಳೆಲ್ಲ ಮೆತ್ತಗೆ
ಒಳಗೆ ಒಯ್ದು
ಮೆತ್ತನೆಯ ಹಾಸಿಗೆಯ ಮೇಲೆ
ಮಲಗಿಸಿ
ಮಮ್ಮಿ
ಅಜ್ಜಾ- ಅಜ್ಜಿಗೆ ಬಿಸಿ ಕಾಫಿ
ಎಂದು ಆರ್ಡರ್ ಮಾಡಿದಾಗ
ನಾವು ಮೊಮ್ಮಕ್ಕಳಲ್ಲಿ
ಮರಿ ಮಕ್ಕಳಂತೆ ಕರಗಿ ಹೋಗಿದ್ದೆವು.
(ನಮ್ಮ ಪಕ್ಕದ ಮನೆಯ ಅಜ್ಜಿ ತನ್ನ ವಿಷಯವಾಗಿ ಒಂದು ಕವನ ಬರೆಯಲು ಹೇಳುತ್ತಿದ್ದರು. ಪ್ರತಿ ಸಲ ಬಂದಾಗ ವಿಚಾರಿಸುತ್ತಿದ್ದರು. ಅವರ ಅರವತ್ತರ ಹುಟ್ಟುಹಬ್ಬಕ್ಕೆ ಅವರ ವಿಷಯವೇ ಬರೆದುಕೊಟ್ಟಾಗ ನಿಜವಾಗಿಯೂ ಅವರ ಕಣ್ಣಲ್ಲಿ ಆನಂದ ಭಾಷ್ಪವು ಬಂದವು)
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...