ಗುರುತುಗಳು


ಕೇಸು ಖಟ್ಳೆಗಳೆಂದು ಮುನಿಸಿಪಲ್ ಕಛೇರಿಗಳೆಂದು
ತುರ್ತಾಗಿ ದಾಪುಗಾಲಿಕ್ಕುತಿರುವ ನಿಮ್ಮನ್ನು
ಕೈಸನ್ನೆಯಿಂದ ನಿಲ್ಲಿಸಿ
ಗಂಭೀರವಾಗಿ ಒಂದು ಬೀಡಿ ಕೇಳುವ ಮುದುಕ
ತೆಂಕು ಪೇಟೆಯಲ್ಲಿ ನಾಲ್ಕೈದು ಅಂಗಡಿಗಳನ್ನಿಟ್ಟಿದ್ದ


ಸದಾ ಬಾಯಿಗೆ ಗಿಡಿದ ಬೀಡದ ಕೆಂಪು ರಸವನ್ನು
ಬೀದಿಯ ಉದ್ದಕ್ಕೂ ಫೂ ಫೂ ಎಂದು ಉಗುಳುತ್ತ
ಎದುರು ಸಿಕ್ಕಿದವರನ್ನೆಲ್ಲ ಮಾತಾಡಿಸುತ್ತ
ಸುಡುಬಿಸಿಲಿಗೆ ಬೆವರುತ್ತ ನಡೆಯುವ ಮಾಸ್ತರರು
ಮೊದಲು ಕವಿತೆಗಳನ್ನು ಬರೆಯುತ್ತಿದ್ದರು


ಹಳೆ ಮಂಗಳೂರು ಹಂಚಿನ ಮನೆ ಚಾವಡಿಯಲ್ಲಿ ಕುಲಿತು
ಈಗಿರುವ ಇಲ್ಲದ ಎಂದೂ ಇದ್ದಿರದ ವ್ಯಕ್ತಿಗಳನ್ನು
ಅವಾಚ್ಯ ಶಬ್ದಗಳಿಂದ ಬಯ್ಯುವ ಅಥವ ಕರೆಯುವ
ಇಳಿವಯಸ್ಸಿನ ಹೆಂಗಸು
ಈ ಪೇಟೆಯಲ್ಲಿ ಮೊತ್ತಮೊದಲು ತುಟಿಗೆ ರಂಗು ಹಾಕಿದವಳು


ಲೈಟುಕಂಭದ ಕೆಳಗೆ ತನ್ನ ನೆರಳನ್ನೇ ತುಳಿದು
ಹಟಯೋಗಿಯಂತೆ ನಿಂತ ಮನುಷ್ಯ
ಹಿಂದೆ ದಿನಸಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ.
ಯಾರನ್ನೂ ನೋಡದೆ, ಮಾತಾಡಿಸದೆ
ಎಲ್ಲವನ್ನೂ ತಿರಸ್ಕರಿಸುತ್ತಾನೆ-ನನ್ನನ್ನೂ ಈ ಪೇಟೆಯನ್ನೂ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೂರ್ಣಚಂದ್ರ
Next post ಕೂಡಿ ಕೆಳೆಯುವ ಆಟ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…