ಗಣೇಶ ಬಂದ

ಗಣೇಶ ಬಂದ

ಚಿತ್ರ: ಪ್ರಮೋದ್ ಪಿ ಟಿ

ಗಣೇಶಬಂದ
ಕಾಯ್ ಕಡುಬು ತಿಂದ,
ಇನ್ನೂ ಬೇಕು ಅಂದ
ಹೊಟ್ಟೆ ಬಿರಿಯ ಮೆಂದ

ಕಾಯಿ ಕಡುಬಿನ್ ಜೊತೆಗೆ
ಕರಿಗಡುಬನ್ನೂ ಬಾರಿಸ್ದ
ಐದ್ ಸುತ್ತಿನ್ ಚಕ್ಲೀನ
ಹೊಟ್ಟೆಯೊಳಗೆ ತೂರಿಸ್ದ

ಸಿಹಿ ಹೂರಣ ತುಂಬಿದ್ದ
ಒಂದು ತಟ್ಟೆ ಮೋದಕ
ಹೊಟ್ಟೇ ಮೂಲೇಲ್ ಇಳ್ಸಿ
ಕುಡಿದ ಕೊಳಗ ಪಾನಕ

ಹೊಟ್ಟೆ ಭಾರ ಆಗ್ಹೋಯ್ತು
ನಡಿಯೋಕ್ ಆಗದೆ ಹೋಯ್ತು
ಅಲ್ಲೇ ಒಂದು ಇಲೀ ಮರಿ
ಸಂತೆಗೆ ಹೋಗ್ತಾ ಇತ್ತು.

ಡೊಳ್ಳು ಹೊಟ್ಟೆ ಗಣಪ
ಇಲೀ ಮೇಲೆ ಕೂತ,
ಸುಮ್ನೆ ಇರದೆ ಇಲಿಗೆ
ಕೊಟ್ಟ ಎರಡು ಲಾತ!

ಇಲಿಗೆ ಕೋಪ ಬಂತು
ಕೆಳಕ್ಕೆ ಕೆಡವಿ ಓಡ್ತು,
ಗಣಪನ ಹೊಟ್ಟೆ ಒಡೆದು
ಕಡುಬು ಚೆಲ್ಲಿಹೋಯ್ತು!

ಚೆಲ್ಲಿದ ಕಡುಬನ್ ಎತ್ತಿ ಗಣಪ
ಹೊಟ್ಟೆ ಒಳಗೆ ಹಾಕ್ದ
ಅಲ್ಲೇ ಮಲಗಿದ ಹಾವನ್ನು
ಹೊಟ್ಟೆ ಸುತ್ತ ಬಿಗಿದ

ಭಲೆ ಭಲೆ ಗಣಪ
ತಿಂಡಿ ಪೋತ ಠೊಣಪ!
ಕಡುಬು ಬೇಕಾ ಇನ್ನೂನೂ
ಮನೆ ಹತ್ರ ಬಾಪ್ಪ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂಪನಿಗೆ
Next post ಮಸ್ತಕ ತಿಂತು ಮನುಷ್ಯನ್ನ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys