ಹಾಡಬೇಕು

ಹಾಡು ಹಾಡಬೇಕು ಹೀಗೆ ಹಾಡು ಹಾಡಬೇಕು
ಮನಸಿನ ಮೂಸೆಯ ಭಾವದ ಕುದಿಗಳು
ಉಕ್ಕಿ ಹರಿಯಬೇಕು ಹಾಡಿನ ಪಾಡು ಪಡೆಯಬೇಕು      ||ಪ||

ಅಂತರಂಗದಲಿ ರಿಂಗಣಗುಣಿಯುತ
ಒಲವು ಉಲಿಯಬೇಕು ಸಹಜದ ಲಯವು ನಲಿಯಬೇಕು
ಒಳ ತಲ್ಲಣಗಳ ಪಲ್ಲವಿ ನರಳುತ
ಹೂವು ಅರಳಬೇಕು ಸುಗಂಧ ಸುತ್ತ ಹರಡಬೇಕು        ||೧||

ಎಲ್ಲ ದಿಕ್ಕುಗಳ ಎಲೆ ಕಡ್ಡಿಗಳನು
ತಂದು ಹೆಣೆಯಬೇಕು ಕನಸಿನ ಗೂಡು ಕಟ್ಟಬೇಕು
ಆಶೆಯ ಮರಿಗಳ ಹಸಿವು ನೋವುಗಳ
ಅಳುವು ನಿಲ್ಲಬೇಕು ನಗುವಿನ ಹಕ್ಕಿ ಹಾಡಬೇಕು          ||೨||

ಛಿದ್ರ ಭಿದ್ರ ತುಂಡುಗಳ ಜೋಡಿಸುತ
ಕನ್ನಡಿ ನಗಬೇಕು ತಿಳಿವಿನ ಬಿಂಬ ಕಾಣಬೇಕು
ಸಂದು ಗೊಂದುಗಳ ಕಂದಕ ಸೆರೆಗಳ
ತೂರಿ ಚಿಮ್ಮಬೇಕು ಹಾಡಿನ ಹೊಳೆಯು ಹೊಮ್ಮಬೇಕು  ||೩||

ಹರಿದು ಕೊಳೆಯುವೀ ಎಳೆಗಳ ಕಲೆಸುತ
ಬಟ್ಟೆ ನೇಯಬೇಕು ಬಾಳಿಗೆ ಬಟ್ಟೆದೋರಬೇಕು
ಗೊಬ್ಬರ ಕೊಳೆಗಳ ಈ ನೆಲದಿಂದಲೆ
ಗಿಡವು ಮೂಡಬೇಕು ಜೀವನ ರಸಫಲ ಬಿಡಬೇಕು       ||೪||

ದಿನ ದಿನ ಸಾಗುವ ಸಂಜೆ ಬೆಳಗುಗಳ
ಬಣ್ಣ ಬಳಸಬೇಕು ಸಂಧ್ಯಾ ರಾಗ ಹರಿಯಬೇಕು
ಮುದಿ ಸಂಜೆಗೆ ಹಸುಗಂದನ ಎಳೆ ನಗೆ
ಬೆಸುಗೆಯಾಗಬೇಕು ಚೇತನ ಸೆಲೆಯು ಸದಾ ಬೇಕು    ||೫||

ಹೇಡಿತನದ ಹುಳು ಹತ್ತಿದ ಜೀವಕೆ
ಜೀವ ಸತ್ವ ಬೇಕು ಹಾಡಿನ ಶಕ್ತಿ ತುಂಬಬೇಕು
ದೇಶದ ಹೃದಯವು ದುಡಿಯುವ ಕೈಗಳ
ನಾಡಿ ಹಿಡಿಯಬೇಕು, ಜನಮನದಾಳ ಮಿಡಿಯಬೇಕು   ||೬||

ಕಣ್ಣೀರಿನ ಧಾರೆಗಳನು ಒರೆಸುವ
ಕೈಯಿದಾಗಬೇಕು ದುಡಿಯುವ ಕೈಗೆ ಬಾಗಬೇಕು
ಒಣಗಿದ ಮರುಭೂಮಿಗಳೆದೆಯೊಳಗಡೆ
ಒಲವು ಹರಿಯಬೇಕು ಹಿಗ್ಗಿನ ತೋಟವರಳಬೇಕು         ||೭||

ದುಷ್ಟ ಶಕ್ತಿಗಳ ಮುಳ್ಳುಕಳ್ಳಿಗಳ
ಕೊಚ್ಚಿ ಹಾಕಬೇಕು ಹಾಡಿದು ಕತ್ತಿಯಾಗಬೇಕು
ಮೋಸ ವಂಚನೆಯ ಸ್ವಾರ್ಥ ಚಿಂತನೆಯ
ಕಸವ ಸುಡಲು ಬೇಕು ಬೆಂಕಿಯು ಹಾಡಿದಾಗಬೇಕು       ||೮||

ದುರ್ಬಲರಿಗೆ ಬಲವೀಯುತ ಕೊಬ್ಬಿದ
ಖೂಳರೆದೆಗೆ ಬಾಣಾ ಸಾರ್ಥಕ ಹಾಡಿನ ಪರಿ ಕಾಣಾ
ದಿನ ದಿನ ಹೊಸ ಹೊಸ ಚೆಲುವನು ತಾಳುತ
ಹಾಡು ಕುಣಿಯಬೇಕು ಕಾಲದ ಹೆಜ್ಜೆ ಮೇಳಬೇಕು
*****************

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶಿಷ್ಟ ವಸ್ತು ಸಂಗ್ರಹಾಲಯ
Next post ಕಳಪೆ ವಿದೇಶೀ ಬಲ್ಫಗಳು

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys