ಕಾಲ ಬಂದಿದೆ

ಕಾಲ ಬಂದಿದೇ ಅಣ್ಣ ನಮ್ಮ ಕಾಲ ಬಂದಿದೆ ಅಣ್ಣಾ                           ||ಪ||

ಸಾವಿರ ಸಾವಿರ ವರ್ಷದ ಕತ್ತಲೆ ಸಾವು ನೋವುಗಳ ಕಾಲವು ಹೋಗಿ
ಮೂಡಲ ಕೆಂಪಿನ ಕಂಪಿನ ಗಾಳಿಯ ಬೆಳಕಿನ ಕಾಲವು ಅಣ್ಣಾ           ||೧||

ಬೆಳಕನೆಲ್ಲ ಬಚ್ಚಿಟ್ಟುಕೊಂಡು ಬರಿ ಕೊಳಕ ಕುಡಿಸಿದವರ
ಥಳುಕಿನಿಂದ ಕಂಗಳನು ಕುಕ್ಕಿ ಕುರುಡು ಮಾಡಿದವರ                   ||೨||

ಬಯಲಿಗೆಳೆದು ಬೆತ್ತಲೆಯಗೊಳಿಸಿ ಚಮ್ಮಟಿಗೆಯಿಂದ ಥಳಿಸು
ನಯದ ವಂಚಕರ ಸವರಿ ವರೆಸಿ ಮನೆಯನ್ನು ಸ್ವಚ್ಛಗೊಳಿಸು         ||೩||

ಧರ್ಮ ಧರ್ಮವೆಂದಂಧಕಾರವನೆ ರಾಜ್ಯವಾಳಿಸಿದರು
ಕಾಲು ಕೈಗಳನು ಕಟ್ಟಿದ೦ಥ ಕಟ್ಟುಗಳ ಕಿತ್ತು ಎಸೆವ                     ||೪||

ಮೇಲು ಕೀಳುಗಳ ಮಡಿಯ ಮೈಲಿಯ ಕಟ್ಟುಪಾಡು ಕಸವ
ಕಾಲು ಕೈಗಳನು ಕಟ್ಟಿದಂಥ ಕಟ್ಟುಗಳ ಕಿತ್ತು ಎಸೆವ                      ||೫||

ಹೊಸ ಸೆಲೆಯು ಇಲ್ಲದಿರುವಂಥ ಹಳಸು ನೀರಿರುವ ಮೌಢ್ಯ ಹೊಂಡ
ನಿಶೆಯನ್ನು ಉಸಿರು ನೀರೆಂದು ತಿಳಿವ ಅಜ್ಞಾನವಾಯ್ತು ಹೆಂಡ      ||೬||

ನೀತಿ ಶಾಸ್ತ್ರಗಳು ಕೋತಿ ಶಾಸ್ತ್ರಗಳು ನಮಗೆ ಹೇಳಲಿಕ್ಕೆ
ಮಾತು ಬೋಧೆ ತತ್ವಾರ್ಥವೆಲ್ಲ ನಮ್ಮ ಹೂಳಲಿಕ್ಕೆ                      ||೭||

ಪರಮ ಧರ್ಮ ಅಹಿಂಸೆ ಎಂದು ಒತ್ತಿ ಒತ್ತಿ ಸಾರಿ
ಕೊರಡು ಬಡಿದು ಪೌರುಷಪ ಕೊಂದು ಮಾಡಿದರು ಸವಾರಿ          ||೮||

ದಾಸನಾಗು ನಿನ್ನೆಲ್ಲ ಒಪ್ಪಿಸುತ ಕಾಲ ಕೆಳಗೆ ಹೊರಳು
ಭಕ್ತಿ ಮುಕ್ತಿ ಇದೆ ಎಂದು ಕತ್ತಲಲಿ ಎಳೆದರಲ್ಲ ಉರುಲು                ||೯||

ಸ್ನಾನದಂತೆ ಕುಂಯ್ಗುಡುತ ಕಾಲುಗಳ ನೆಕ್ಕಿದ್ದಿನ್ನು ಸಾಕು
ಆನೆಯಂತೆ ಮದ್ದಾನೆಯಂತೆ ತುಳಿದವರ ತುಳಿದು ನೂಕು           ||೧೦||

ಅಂಜಿ ಅಂಜಿ ಕುರಿ ಮಂದೆಯಂತೆ ಇದ್ದವರು ಸಿಂಹದಂತೆ
ಜೂಲು ಕೇಸರವ ಕೆದರಿ ಗರ್ಜಿಸುವ ಸಿಡಿಲು ಮೊಳಗಿದಂತೆ         ||೧೧||

************************************************
೧೧-೬-೮೭

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಂಪು ಕಡಲಿನ ರಂಗಿನ ಲೋಕ
Next post ಶೀತಕ್ಕೆ ಔಷಧಿ ಇದೆಯೇ?

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys