Home / ಕವನ / ಕವಿತೆ / ಕಾಲ ಬಂದಿದೆ

ಕಾಲ ಬಂದಿದೆ

ಕಾಲ ಬಂದಿದೇ ಅಣ್ಣ ನಮ್ಮ ಕಾಲ ಬಂದಿದೆ ಅಣ್ಣಾ                           ||ಪ||

ಸಾವಿರ ಸಾವಿರ ವರ್ಷದ ಕತ್ತಲೆ ಸಾವು ನೋವುಗಳ ಕಾಲವು ಹೋಗಿ
ಮೂಡಲ ಕೆಂಪಿನ ಕಂಪಿನ ಗಾಳಿಯ ಬೆಳಕಿನ ಕಾಲವು ಅಣ್ಣಾ           ||೧||

ಬೆಳಕನೆಲ್ಲ ಬಚ್ಚಿಟ್ಟುಕೊಂಡು ಬರಿ ಕೊಳಕ ಕುಡಿಸಿದವರ
ಥಳುಕಿನಿಂದ ಕಂಗಳನು ಕುಕ್ಕಿ ಕುರುಡು ಮಾಡಿದವರ                   ||೨||

ಬಯಲಿಗೆಳೆದು ಬೆತ್ತಲೆಯಗೊಳಿಸಿ ಚಮ್ಮಟಿಗೆಯಿಂದ ಥಳಿಸು
ನಯದ ವಂಚಕರ ಸವರಿ ವರೆಸಿ ಮನೆಯನ್ನು ಸ್ವಚ್ಛಗೊಳಿಸು         ||೩||

ಧರ್ಮ ಧರ್ಮವೆಂದಂಧಕಾರವನೆ ರಾಜ್ಯವಾಳಿಸಿದರು
ಕಾಲು ಕೈಗಳನು ಕಟ್ಟಿದ೦ಥ ಕಟ್ಟುಗಳ ಕಿತ್ತು ಎಸೆವ                     ||೪||

ಮೇಲು ಕೀಳುಗಳ ಮಡಿಯ ಮೈಲಿಯ ಕಟ್ಟುಪಾಡು ಕಸವ
ಕಾಲು ಕೈಗಳನು ಕಟ್ಟಿದಂಥ ಕಟ್ಟುಗಳ ಕಿತ್ತು ಎಸೆವ                      ||೫||

ಹೊಸ ಸೆಲೆಯು ಇಲ್ಲದಿರುವಂಥ ಹಳಸು ನೀರಿರುವ ಮೌಢ್ಯ ಹೊಂಡ
ನಿಶೆಯನ್ನು ಉಸಿರು ನೀರೆಂದು ತಿಳಿವ ಅಜ್ಞಾನವಾಯ್ತು ಹೆಂಡ      ||೬||

ನೀತಿ ಶಾಸ್ತ್ರಗಳು ಕೋತಿ ಶಾಸ್ತ್ರಗಳು ನಮಗೆ ಹೇಳಲಿಕ್ಕೆ
ಮಾತು ಬೋಧೆ ತತ್ವಾರ್ಥವೆಲ್ಲ ನಮ್ಮ ಹೂಳಲಿಕ್ಕೆ                      ||೭||

ಪರಮ ಧರ್ಮ ಅಹಿಂಸೆ ಎಂದು ಒತ್ತಿ ಒತ್ತಿ ಸಾರಿ
ಕೊರಡು ಬಡಿದು ಪೌರುಷಪ ಕೊಂದು ಮಾಡಿದರು ಸವಾರಿ          ||೮||

ದಾಸನಾಗು ನಿನ್ನೆಲ್ಲ ಒಪ್ಪಿಸುತ ಕಾಲ ಕೆಳಗೆ ಹೊರಳು
ಭಕ್ತಿ ಮುಕ್ತಿ ಇದೆ ಎಂದು ಕತ್ತಲಲಿ ಎಳೆದರಲ್ಲ ಉರುಲು                ||೯||

ಸ್ನಾನದಂತೆ ಕುಂಯ್ಗುಡುತ ಕಾಲುಗಳ ನೆಕ್ಕಿದ್ದಿನ್ನು ಸಾಕು
ಆನೆಯಂತೆ ಮದ್ದಾನೆಯಂತೆ ತುಳಿದವರ ತುಳಿದು ನೂಕು           ||೧೦||

ಅಂಜಿ ಅಂಜಿ ಕುರಿ ಮಂದೆಯಂತೆ ಇದ್ದವರು ಸಿಂಹದಂತೆ
ಜೂಲು ಕೇಸರವ ಕೆದರಿ ಗರ್ಜಿಸುವ ಸಿಡಿಲು ಮೊಳಗಿದಂತೆ         ||೧೧||

************************************************
೧೧-೬-೮೭

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...