Home / ಕವನ / ಕವಿತೆ / ಕಾಲ ಬಂದಿದೆ

ಕಾಲ ಬಂದಿದೆ

ಕಾಲ ಬಂದಿದೇ ಅಣ್ಣ ನಮ್ಮ ಕಾಲ ಬಂದಿದೆ ಅಣ್ಣಾ                           ||ಪ||

ಸಾವಿರ ಸಾವಿರ ವರ್ಷದ ಕತ್ತಲೆ ಸಾವು ನೋವುಗಳ ಕಾಲವು ಹೋಗಿ
ಮೂಡಲ ಕೆಂಪಿನ ಕಂಪಿನ ಗಾಳಿಯ ಬೆಳಕಿನ ಕಾಲವು ಅಣ್ಣಾ           ||೧||

ಬೆಳಕನೆಲ್ಲ ಬಚ್ಚಿಟ್ಟುಕೊಂಡು ಬರಿ ಕೊಳಕ ಕುಡಿಸಿದವರ
ಥಳುಕಿನಿಂದ ಕಂಗಳನು ಕುಕ್ಕಿ ಕುರುಡು ಮಾಡಿದವರ                   ||೨||

ಬಯಲಿಗೆಳೆದು ಬೆತ್ತಲೆಯಗೊಳಿಸಿ ಚಮ್ಮಟಿಗೆಯಿಂದ ಥಳಿಸು
ನಯದ ವಂಚಕರ ಸವರಿ ವರೆಸಿ ಮನೆಯನ್ನು ಸ್ವಚ್ಛಗೊಳಿಸು         ||೩||

ಧರ್ಮ ಧರ್ಮವೆಂದಂಧಕಾರವನೆ ರಾಜ್ಯವಾಳಿಸಿದರು
ಕಾಲು ಕೈಗಳನು ಕಟ್ಟಿದ೦ಥ ಕಟ್ಟುಗಳ ಕಿತ್ತು ಎಸೆವ                     ||೪||

ಮೇಲು ಕೀಳುಗಳ ಮಡಿಯ ಮೈಲಿಯ ಕಟ್ಟುಪಾಡು ಕಸವ
ಕಾಲು ಕೈಗಳನು ಕಟ್ಟಿದಂಥ ಕಟ್ಟುಗಳ ಕಿತ್ತು ಎಸೆವ                      ||೫||

ಹೊಸ ಸೆಲೆಯು ಇಲ್ಲದಿರುವಂಥ ಹಳಸು ನೀರಿರುವ ಮೌಢ್ಯ ಹೊಂಡ
ನಿಶೆಯನ್ನು ಉಸಿರು ನೀರೆಂದು ತಿಳಿವ ಅಜ್ಞಾನವಾಯ್ತು ಹೆಂಡ      ||೬||

ನೀತಿ ಶಾಸ್ತ್ರಗಳು ಕೋತಿ ಶಾಸ್ತ್ರಗಳು ನಮಗೆ ಹೇಳಲಿಕ್ಕೆ
ಮಾತು ಬೋಧೆ ತತ್ವಾರ್ಥವೆಲ್ಲ ನಮ್ಮ ಹೂಳಲಿಕ್ಕೆ                      ||೭||

ಪರಮ ಧರ್ಮ ಅಹಿಂಸೆ ಎಂದು ಒತ್ತಿ ಒತ್ತಿ ಸಾರಿ
ಕೊರಡು ಬಡಿದು ಪೌರುಷಪ ಕೊಂದು ಮಾಡಿದರು ಸವಾರಿ          ||೮||

ದಾಸನಾಗು ನಿನ್ನೆಲ್ಲ ಒಪ್ಪಿಸುತ ಕಾಲ ಕೆಳಗೆ ಹೊರಳು
ಭಕ್ತಿ ಮುಕ್ತಿ ಇದೆ ಎಂದು ಕತ್ತಲಲಿ ಎಳೆದರಲ್ಲ ಉರುಲು                ||೯||

ಸ್ನಾನದಂತೆ ಕುಂಯ್ಗುಡುತ ಕಾಲುಗಳ ನೆಕ್ಕಿದ್ದಿನ್ನು ಸಾಕು
ಆನೆಯಂತೆ ಮದ್ದಾನೆಯಂತೆ ತುಳಿದವರ ತುಳಿದು ನೂಕು           ||೧೦||

ಅಂಜಿ ಅಂಜಿ ಕುರಿ ಮಂದೆಯಂತೆ ಇದ್ದವರು ಸಿಂಹದಂತೆ
ಜೂಲು ಕೇಸರವ ಕೆದರಿ ಗರ್ಜಿಸುವ ಸಿಡಿಲು ಮೊಳಗಿದಂತೆ         ||೧೧||

************************************************
೧೧-೬-೮೭

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...