Home / ಕವನ / ಕವಿತೆ / ನಡುವಿನವರಿಗೆ

ನಡುವಿನವರಿಗೆ

ಗುಡಿಯು ಮಠವು ನಿನಗೆ ಯಾಕೆ ನಡುವಿನವರಿಗೆ
ಗಡಿಯ ಗೋಡೆ ನಿನಗೆ ಯಾಕೆ ನಡುವಿನವರಿಗೆ
ಮೂರ್ತಿ ಮೂರ್ತಿ ರೂಪ ನೂರು ನಿನಗೆ ಯಾತಕೆ
ಕೀರ್ತಿ ಹಾಡಿ ತಮ್ಮ ಮೆರೆವ ನಡುವಿನವರಿಗೆ ||ಪ||

ಧರ್ಮ ಶಾಸ್ರ ಗ್ರಂಥ ಸೂತ್ರ ನಿನಗೆ ಯಾತಕೆ
ಕರ್ಮಗೇಡಿ ಕೆಲಸಗೇಡಿ ನಡುವಿನವರಿಗೆ
ಪುಣ್ಯ ತೊಳೆಯ ಪುಣ್ಯ ಕ್ಷೇತ್ರ ನಿನಗೆ ಯಾತಕೆ
ಪಣ್ಯ ನಾರಿಯಂತೆ ಸುಲಿವ ನಡುವಿನವರಿಗೆ ||೧|

ತೊಳೆಯಲೆಂದು ನದಿಯ ನೀರು ನಿನಗೆ ಯಾತಕೆ
ಆಭರಣ ಅಲಂಕಾರ ನಿನಗೆ ಯಾತಕೆ
ಶೋಭೆಯಿಂದ ಸೋಗು ಮೆರೆವ ನಡುವಿನವರಿಗೆ ||೨||

ಪೂಜೆಯೋಜೆ ಯಜ್ಞಯಾಗ ನಿನಗೆ ಯಾತಕೆ
ಸಾಜವಾಗಿ ಕುಳಿತುಣ್ಣಲು ನಡುವಿನವರಿಗೆ
ಜಪವು ತಪವು ಕಿಙತ೯ನೆಗಳು ನಿನಗೆ ಯಾತಕೆ
ಕಪಟತನವ ಮಾಡುವಂಥ ನಡುವಿನವರಿಗೆ ||೩||

ಪುರಾಣ ಪುಣ್ಯ ಕಥೆಯು ನಿನಗೆ ಯಾತಕೆ
ಬರೀ ಕುರಿಗಳಾಗಲೆಂಬ ನಡುವಿನವರಿಗೆ
ಹಬ್ಬ ಪರಿಷೆ ಉತ್ಸವಗಳು ನಿನಗೆ ಯಾತಕೆ
ಕೊಬ್ಬು ಬಾಯಿ ತಿಂಡಿಗಾಗಿ ನಡುವಿನವರಿಗೆ ||೪|

ಹೂವು ಹಣ್ಣು ನೈವೇದ್ಯವು ನಿನಗೆ ಯಾತಕೆ
ನೋವಿಲ್ಲದೆ ಹೊಟ್ಟೆ ಹೊರೆವ ನಡುವಿನವರಿಗೆ
ಕಪ್ಪೆ ಮಂತ್ರ ಪಠಣ ಗಡಣ ನಿನಗೆ ಯಾತಕೆ
ಬೆಪ್ಪು ಮಾಡಲೆಲ್ಲರನ್ನು ನಡುವಿನವರಿಗೆ ||೫|

ಗಂಟೆ ಜಗಟೆ ತಾಳ ಬೇರಿ ನಿನಗೆ ಯಾತಕೆ
ಕಂಠ ಮಟ್ಟ ತಿಂಬ ವೇಳೆ ನಡುವಿನವರಿಗೆ
ಮಂಡೆ ಬೋಳು ಕಾವಿ ಬಟ್ಟೆ ನಿನಗೆ ಯಾತಕೆ
ಭಂಡ ಪಾಪ ಮುಚ್ಚಿ ಕೊಳಲು ನಡುವಿನವರಿಗೆ ||೬||

ಹೆಣ್ಣು ಸೇವೆ ದೇವದಾಸಿ ನಿನಗೆ ಯಾತಕೆ
ಹಣ್ಣು ಮಾಡಿ ಸವಿಯಲಿಕ್ಕೆ ನಡುವಿನವರಿಗೆ
ಅಡ್ಡ ಉದ್ದ ನಾಮಾವಳಿ ನಿನಗೆ ಯಾತಕೆ
ಗೊಡ್ಡಮ್ಮಯನೇರುವಂಥ ನಡುವಿನವರಿಗೆ ||೭||

ಗಂಧಾಕ್ಷತೆ ದೀಪ ಧೂಪ ನಿನಗೆ ಯಾತಕೆ
ಮಂದಮತಿಯ ಬೆಳೆಸಲಿಕ್ಕೆ ನಡುವಿನವರಿಗೆ
ಹುಂಡಿಯಲ್ಲಿ ಲಕ್ಷ ನೋಟು ನಿನಗೆ ಯಾತಕೆ
ದಂಡ ಕಪ್ಪ ಹಣವ ಪಡೆದ ನಡುವಿನವರಿಗೆ ||೮||

ಹೊಸಾ ಹೊಸಾ ಗುಡಿಗೋಪುರ ನಿನಗೆ ಯಾತಕೆ
ಹೊಸಾ ಸುಲಿಗೆಗಳಿಗೆ ಕಳಸ ನಡುವಿನವರಿಗೆ
ಅದ್ಭುತ ಪವಾಡ ಮೆರೆತ ನಿನಗೆ ಯಾತಕೆ
ಅಬ್ಬರದಲಿ ಮಟ್ಟು ಬೆಳೆಸೆ ನಡುವಿನವರಿಗೆ ||೯|

ಅವತಾರೋದ್ಧಾರ ಕಥನ ನಿನಗೆ ಯಾತಕೆ
ಸವಿಯಾಗಿಯೆ ಕುರಿಬೋಳಿಸೆ ನಡುವಿನವರಿಗೆ
ನಿನ್ನ ಹೆಸರಿನಲ್ಲಿ ಎಲ್ಲ ನಿನಗೆ ಯಾತಕೆ
ನಿನ್ನವರೆಗೆ ಅಲ್ಲ ಬರೀ ನಡುವಿನವರಿಗೆ ||೧೦||

ನನ್ನ ನಿನ್ನ ನಡುವೆ ನಡುವಿನವರು ಯಾತಕೆ
ನನಗೆ ನೀನು ನಿನಗೆ ನಾನು ಬೇರೆ ಯಾತಕೆ ||೧೧||

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...