Home / ಕವನ / ಕವಿತೆ / ನಡುವಿನವರಿಗೆ

ನಡುವಿನವರಿಗೆ

ಗುಡಿಯು ಮಠವು ನಿನಗೆ ಯಾಕೆ ನಡುವಿನವರಿಗೆ
ಗಡಿಯ ಗೋಡೆ ನಿನಗೆ ಯಾಕೆ ನಡುವಿನವರಿಗೆ
ಮೂರ್ತಿ ಮೂರ್ತಿ ರೂಪ ನೂರು ನಿನಗೆ ಯಾತಕೆ
ಕೀರ್ತಿ ಹಾಡಿ ತಮ್ಮ ಮೆರೆವ ನಡುವಿನವರಿಗೆ ||ಪ||

ಧರ್ಮ ಶಾಸ್ರ ಗ್ರಂಥ ಸೂತ್ರ ನಿನಗೆ ಯಾತಕೆ
ಕರ್ಮಗೇಡಿ ಕೆಲಸಗೇಡಿ ನಡುವಿನವರಿಗೆ
ಪುಣ್ಯ ತೊಳೆಯ ಪುಣ್ಯ ಕ್ಷೇತ್ರ ನಿನಗೆ ಯಾತಕೆ
ಪಣ್ಯ ನಾರಿಯಂತೆ ಸುಲಿವ ನಡುವಿನವರಿಗೆ ||೧|

ತೊಳೆಯಲೆಂದು ನದಿಯ ನೀರು ನಿನಗೆ ಯಾತಕೆ
ಆಭರಣ ಅಲಂಕಾರ ನಿನಗೆ ಯಾತಕೆ
ಶೋಭೆಯಿಂದ ಸೋಗು ಮೆರೆವ ನಡುವಿನವರಿಗೆ ||೨||

ಪೂಜೆಯೋಜೆ ಯಜ್ಞಯಾಗ ನಿನಗೆ ಯಾತಕೆ
ಸಾಜವಾಗಿ ಕುಳಿತುಣ್ಣಲು ನಡುವಿನವರಿಗೆ
ಜಪವು ತಪವು ಕಿಙತ೯ನೆಗಳು ನಿನಗೆ ಯಾತಕೆ
ಕಪಟತನವ ಮಾಡುವಂಥ ನಡುವಿನವರಿಗೆ ||೩||

ಪುರಾಣ ಪುಣ್ಯ ಕಥೆಯು ನಿನಗೆ ಯಾತಕೆ
ಬರೀ ಕುರಿಗಳಾಗಲೆಂಬ ನಡುವಿನವರಿಗೆ
ಹಬ್ಬ ಪರಿಷೆ ಉತ್ಸವಗಳು ನಿನಗೆ ಯಾತಕೆ
ಕೊಬ್ಬು ಬಾಯಿ ತಿಂಡಿಗಾಗಿ ನಡುವಿನವರಿಗೆ ||೪|

ಹೂವು ಹಣ್ಣು ನೈವೇದ್ಯವು ನಿನಗೆ ಯಾತಕೆ
ನೋವಿಲ್ಲದೆ ಹೊಟ್ಟೆ ಹೊರೆವ ನಡುವಿನವರಿಗೆ
ಕಪ್ಪೆ ಮಂತ್ರ ಪಠಣ ಗಡಣ ನಿನಗೆ ಯಾತಕೆ
ಬೆಪ್ಪು ಮಾಡಲೆಲ್ಲರನ್ನು ನಡುವಿನವರಿಗೆ ||೫|

ಗಂಟೆ ಜಗಟೆ ತಾಳ ಬೇರಿ ನಿನಗೆ ಯಾತಕೆ
ಕಂಠ ಮಟ್ಟ ತಿಂಬ ವೇಳೆ ನಡುವಿನವರಿಗೆ
ಮಂಡೆ ಬೋಳು ಕಾವಿ ಬಟ್ಟೆ ನಿನಗೆ ಯಾತಕೆ
ಭಂಡ ಪಾಪ ಮುಚ್ಚಿ ಕೊಳಲು ನಡುವಿನವರಿಗೆ ||೬||

ಹೆಣ್ಣು ಸೇವೆ ದೇವದಾಸಿ ನಿನಗೆ ಯಾತಕೆ
ಹಣ್ಣು ಮಾಡಿ ಸವಿಯಲಿಕ್ಕೆ ನಡುವಿನವರಿಗೆ
ಅಡ್ಡ ಉದ್ದ ನಾಮಾವಳಿ ನಿನಗೆ ಯಾತಕೆ
ಗೊಡ್ಡಮ್ಮಯನೇರುವಂಥ ನಡುವಿನವರಿಗೆ ||೭||

ಗಂಧಾಕ್ಷತೆ ದೀಪ ಧೂಪ ನಿನಗೆ ಯಾತಕೆ
ಮಂದಮತಿಯ ಬೆಳೆಸಲಿಕ್ಕೆ ನಡುವಿನವರಿಗೆ
ಹುಂಡಿಯಲ್ಲಿ ಲಕ್ಷ ನೋಟು ನಿನಗೆ ಯಾತಕೆ
ದಂಡ ಕಪ್ಪ ಹಣವ ಪಡೆದ ನಡುವಿನವರಿಗೆ ||೮||

ಹೊಸಾ ಹೊಸಾ ಗುಡಿಗೋಪುರ ನಿನಗೆ ಯಾತಕೆ
ಹೊಸಾ ಸುಲಿಗೆಗಳಿಗೆ ಕಳಸ ನಡುವಿನವರಿಗೆ
ಅದ್ಭುತ ಪವಾಡ ಮೆರೆತ ನಿನಗೆ ಯಾತಕೆ
ಅಬ್ಬರದಲಿ ಮಟ್ಟು ಬೆಳೆಸೆ ನಡುವಿನವರಿಗೆ ||೯|

ಅವತಾರೋದ್ಧಾರ ಕಥನ ನಿನಗೆ ಯಾತಕೆ
ಸವಿಯಾಗಿಯೆ ಕುರಿಬೋಳಿಸೆ ನಡುವಿನವರಿಗೆ
ನಿನ್ನ ಹೆಸರಿನಲ್ಲಿ ಎಲ್ಲ ನಿನಗೆ ಯಾತಕೆ
ನಿನ್ನವರೆಗೆ ಅಲ್ಲ ಬರೀ ನಡುವಿನವರಿಗೆ ||೧೦||

ನನ್ನ ನಿನ್ನ ನಡುವೆ ನಡುವಿನವರು ಯಾತಕೆ
ನನಗೆ ನೀನು ನಿನಗೆ ನಾನು ಬೇರೆ ಯಾತಕೆ ||೧೧||

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...