Home / ಕವನ / ಕವಿತೆ / ಇರುವಿಕೆ

ಇರುವಿಕೆ

ಯಾರಿಗೆ ಗೊತ್ತು ಸುದೀರ್ಘ ಪಯಣದ
ಈ ಹಾದಿ ಹೇಗೆಂದು
ಬಯಸಿದ್ದೆಲ್ಲ ಕೈಗೆಟಕುವದಿದೆಯೆಂದಿದ್ದರೆ…….
ಬಯಸದಿರಿ ಸುಮ್ಮನೆ ನಿರಾಸೆ
ಆಸೆಗಳೇ ತುಂಬಿ ಸೃಷ್ಠಿಯಾಗಿದೆಯೋ !
ಗಾಳಿ ಬೆಳಕು ಸಮುದ್ರದಲೆಗಳೊಳಗೆಲ್ಲ
ಏನೇನೋ ಅಸ್ಪಷ್ಟ ಶಬ್ದಗಳು – ರೇಖೆಗಳು
ಸೃಷ್ಟಿಯೇ ಆಸೆಯ ಬೆನ್ನೇರಿ ಬಂದಿದೆಯೋ !
ಸ್ವತಂತ್ರತೆ ಬಿಚ್ಚಿ ಹಾರಾಡಿ
ಸ್ವೇಚ್ಛೆಯಾಗಿಯೂ ನರಳಾಡುವ ತಳಮಳ

ಈ ಹಾದಿ ಬರಿ ಹಾದಿಯಲ್ಲ
ಪ್ರೀತಿ ಚಿಗಿತರೆ ಚಿಮ್ಮುವ ಸೆಳೆತ
ದ್ವೇಷ ಕೆರಳಿದರೆ ಧಗೆ
ಕಲ್ಲು ಮುಳ್ಳುಗಳ ಎಳೆತ ಒಳಗೊಳಗೇ ಉಮ್ಮಳ.

ಬೆಳಕು ಬೆಳದಿಂಗಳು
ಉತ್ಸಾಹಿ ಸೂರ್ಯಚಂದ್ರರ
ಮದಿರೆದಾಹದ ಮುಗುಳುನಗು
ಪಾರದರ್ಶಕ ಸೆಳೆತ ಕಣ್ಣು ಮುಚ್ಚಾಲೆಯಾಟ
ಬೆಚ್ಚಗಿನ ಇರುವಿಕೆಗೆ
ಆಸೆ ದುಃಖ ದುಮ್ಮಾಣಗಳ
ಮೂಟೆಕಟ್ಟಿ ಪ್ರಪಾತಕ್ಕೆಸೆದು
ಹಸಿರು ಹುಲ್ಲಿನ ಸ್ಪರ್ಷಕೆ
ನೆಮ್ಮದಿಯ ಕ್ಷಣಗಳ ಪುಳಕ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...