ಇರುವಿಕೆ

ಯಾರಿಗೆ ಗೊತ್ತು ಸುದೀರ್ಘ ಪಯಣದ
ಈ ಹಾದಿ ಹೇಗೆಂದು
ಬಯಸಿದ್ದೆಲ್ಲ ಕೈಗೆಟಕುವದಿದೆಯೆಂದಿದ್ದರೆ…….
ಬಯಸದಿರಿ ಸುಮ್ಮನೆ ನಿರಾಸೆ
ಆಸೆಗಳೇ ತುಂಬಿ ಸೃಷ್ಠಿಯಾಗಿದೆಯೋ !
ಗಾಳಿ ಬೆಳಕು ಸಮುದ್ರದಲೆಗಳೊಳಗೆಲ್ಲ
ಏನೇನೋ ಅಸ್ಪಷ್ಟ ಶಬ್ದಗಳು – ರೇಖೆಗಳು
ಸೃಷ್ಟಿಯೇ ಆಸೆಯ ಬೆನ್ನೇರಿ ಬಂದಿದೆಯೋ !
ಸ್ವತಂತ್ರತೆ ಬಿಚ್ಚಿ ಹಾರಾಡಿ
ಸ್ವೇಚ್ಛೆಯಾಗಿಯೂ ನರಳಾಡುವ ತಳಮಳ

ಈ ಹಾದಿ ಬರಿ ಹಾದಿಯಲ್ಲ
ಪ್ರೀತಿ ಚಿಗಿತರೆ ಚಿಮ್ಮುವ ಸೆಳೆತ
ದ್ವೇಷ ಕೆರಳಿದರೆ ಧಗೆ
ಕಲ್ಲು ಮುಳ್ಳುಗಳ ಎಳೆತ ಒಳಗೊಳಗೇ ಉಮ್ಮಳ.

ಬೆಳಕು ಬೆಳದಿಂಗಳು
ಉತ್ಸಾಹಿ ಸೂರ್ಯಚಂದ್ರರ
ಮದಿರೆದಾಹದ ಮುಗುಳುನಗು
ಪಾರದರ್ಶಕ ಸೆಳೆತ ಕಣ್ಣು ಮುಚ್ಚಾಲೆಯಾಟ
ಬೆಚ್ಚಗಿನ ಇರುವಿಕೆಗೆ
ಆಸೆ ದುಃಖ ದುಮ್ಮಾಣಗಳ
ಮೂಟೆಕಟ್ಟಿ ಪ್ರಪಾತಕ್ಕೆಸೆದು
ಹಸಿರು ಹುಲ್ಲಿನ ಸ್ಪರ್ಷಕೆ
ನೆಮ್ಮದಿಯ ಕ್ಷಣಗಳ ಪುಳಕ.
*****

ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೋಕಾಕ್ ಚಳುವಳಿ ಅಂತ ರಂಪ ಮಾಡ್ಲಿಕತ್ತಾನಲ್ರಿ ಚಂಪಾ
Next post ಇನಿಯನೊಲುಮೆಯ ಹುಚ್ಚು

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…