ಇರುವಿಕೆ

ಯಾರಿಗೆ ಗೊತ್ತು ಸುದೀರ್ಘ ಪಯಣದ
ಈ ಹಾದಿ ಹೇಗೆಂದು
ಬಯಸಿದ್ದೆಲ್ಲ ಕೈಗೆಟಕುವದಿದೆಯೆಂದಿದ್ದರೆ…….
ಬಯಸದಿರಿ ಸುಮ್ಮನೆ ನಿರಾಸೆ
ಆಸೆಗಳೇ ತುಂಬಿ ಸೃಷ್ಠಿಯಾಗಿದೆಯೋ !
ಗಾಳಿ ಬೆಳಕು ಸಮುದ್ರದಲೆಗಳೊಳಗೆಲ್ಲ
ಏನೇನೋ ಅಸ್ಪಷ್ಟ ಶಬ್ದಗಳು – ರೇಖೆಗಳು
ಸೃಷ್ಟಿಯೇ ಆಸೆಯ ಬೆನ್ನೇರಿ ಬಂದಿದೆಯೋ !
ಸ್ವತಂತ್ರತೆ ಬಿಚ್ಚಿ ಹಾರಾಡಿ
ಸ್ವೇಚ್ಛೆಯಾಗಿಯೂ ನರಳಾಡುವ ತಳಮಳ

ಈ ಹಾದಿ ಬರಿ ಹಾದಿಯಲ್ಲ
ಪ್ರೀತಿ ಚಿಗಿತರೆ ಚಿಮ್ಮುವ ಸೆಳೆತ
ದ್ವೇಷ ಕೆರಳಿದರೆ ಧಗೆ
ಕಲ್ಲು ಮುಳ್ಳುಗಳ ಎಳೆತ ಒಳಗೊಳಗೇ ಉಮ್ಮಳ.

ಬೆಳಕು ಬೆಳದಿಂಗಳು
ಉತ್ಸಾಹಿ ಸೂರ್ಯಚಂದ್ರರ
ಮದಿರೆದಾಹದ ಮುಗುಳುನಗು
ಪಾರದರ್ಶಕ ಸೆಳೆತ ಕಣ್ಣು ಮುಚ್ಚಾಲೆಯಾಟ
ಬೆಚ್ಚಗಿನ ಇರುವಿಕೆಗೆ
ಆಸೆ ದುಃಖ ದುಮ್ಮಾಣಗಳ
ಮೂಟೆಕಟ್ಟಿ ಪ್ರಪಾತಕ್ಕೆಸೆದು
ಹಸಿರು ಹುಲ್ಲಿನ ಸ್ಪರ್ಷಕೆ
ನೆಮ್ಮದಿಯ ಕ್ಷಣಗಳ ಪುಳಕ.
*****

ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೋಕಾಕ್ ಚಳುವಳಿ ಅಂತ ರಂಪ ಮಾಡ್ಲಿಕತ್ತಾನಲ್ರಿ ಚಂಪಾ
Next post ಇನಿಯನೊಲುಮೆಯ ಹುಚ್ಚು

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ತಿಮ್ಮರಾಯಪ್ಪನ ಬುದ್ಧಿವಾದ

    ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…