Home / ಕವನ / ಕವಿತೆ / ಶಾಂತಿಗಾಗಿ ಹಂಬಲ

ಶಾಂತಿಗಾಗಿ ಹಂಬಲ

ಬಾಂಬು ಭಯೋತ್ಪಾದನೆಯ ಸದ್ದುಗಳು
ಇಲ್ಲಿ ಕೇಳಿಸದೇ ಕಾಣಿಸದೇ ಹೋದರೂ
ಮನೆಗೆ ಬಂದು ಬೀಳುತ್ತವೆ
ಪತ್ರಿಕಾ ಸುದ್ದಿಗಳು, ಟಿ.ವಿ. ಚಿತ್ರಗಳು
ಮುಗಿಲುದ್ದ ಬಾಂಬುಗಳ ಹೊಗೆ
ನೆಲತುಂಬ ಸಾವು ನೋವುಗಳ ಆಕ್ರಂದನ
ಅಮಾಯಕರ ಗೋಳಾಟ
ತುಂಡು ತುಂಡಾದವರ ನರಕಯಾತನೆ
ತಲೆ ತುಂಬ ಭಾರ
ಮನಸ್ಸಿಗೆ ಕಿರಿ ಕಿರಿ ಅಶಾಂತಿ

ಬಾಂಬ್ ಭಯೋತ್ಪಾದನೆ ವಿರೋಧಿಗಾಗಲಿ
ಶಾಂತಿ ಪ್ರಿಯತೆಯ ಬಗೆಗಾಗಲಿ
ಒಂದಿಷ್ಟು ಬರೆದು ಭಯೋತ್ಪಾದಕರಿಗೆ ತಲುಪಿಸಬೇಕೆನ್ನುತ್ತೇನೆ
ಮನೆಯ ತಾರಸಿಯ ಮೇಲೆ ಹೋಗಿ
ಪಾರಿವಾಳಗಳನು ಹಾರಿಸಿಬಿಡುತ್ತೇನೆ
ಪಕ್ಕದ ಮನೆಯಲ್ಲೂ ಗುಟುರು ಹಾಕುತ್ತ
ಕುಳಿತ ಪಾರಿವಾಳಗಳಿಗೂ ಶಾಂತಿ ಸಂದೇಶ
ಕೊಟ್ಟು ಬಿಳಿಯ ದುಪಟ್ಟ
ಅವುಗಳೆಡೆಗೆ ಬೀಸಿ ಹಾರಿಸಿಬಿಟ್ಟು
ಹೃದಯ ಹಗುರವಾಗಿ ಬರೆಯಲು
ಇಳಿದು ಬರುತ್ತೇನೆ.

ದೂರದಲ್ಲೆಲ್ಲಿಂದಲೋ ’ಢಮಾರ್’ ಶಬ್ದ
ಬೆಚ್ಚಿಬಿದ್ದು ಕಿಟಕಿ ಬಾಗಿಲು ತೆರೆದರೆ

ಪಾರಿವಾಳಗಳು ಪಟಪಟನೆ ರೆಕ್ಕೆ ಬಡಿಯುತ
ಒಂದಿಷ್ಟು ಉರುಳಿಬೀಳುತ್ತಿವೆ
ಉಳಿದವು ರಕ್ತ ಚೆಲ್ಲುತ ನೆರಳಿ
ಮತ್ತೆ ತಾರಸಿಗೆ ಬರುತ್ತಿವೆ.
ಅರೆರೆ ! ನಮ್ಮ ನಡುವೆಯೂ, ಸುತ್ತಲೂ
ಭಯೋತ್ಪಾದಕರೆ, ಜೇಬಿನಲಿ
ನೀಲಿ ಪೆನ್ನಿನ ಬದಲು ಚಾಕು ಚೂರಿ ಪಿಸ್ತೂಲುಗಳೆ?

ಇನ್ನೇನು ಬರೆಯಲಿ, ಎದೆ ತುಂಬ ಕಣ್ಣೀರು
ಆದರೂ ಬರೆಯುತ್ತೇನೆ
ಶಾಂತಿಗಾಗಿ ಹಂಬಲಿಸುತ್ತೇನೆ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...