Home / ಕವನ / ಕವಿತೆ / ಶಾಂತಿಗಾಗಿ ಹಂಬಲ

ಶಾಂತಿಗಾಗಿ ಹಂಬಲ

ಬಾಂಬು ಭಯೋತ್ಪಾದನೆಯ ಸದ್ದುಗಳು
ಇಲ್ಲಿ ಕೇಳಿಸದೇ ಕಾಣಿಸದೇ ಹೋದರೂ
ಮನೆಗೆ ಬಂದು ಬೀಳುತ್ತವೆ
ಪತ್ರಿಕಾ ಸುದ್ದಿಗಳು, ಟಿ.ವಿ. ಚಿತ್ರಗಳು
ಮುಗಿಲುದ್ದ ಬಾಂಬುಗಳ ಹೊಗೆ
ನೆಲತುಂಬ ಸಾವು ನೋವುಗಳ ಆಕ್ರಂದನ
ಅಮಾಯಕರ ಗೋಳಾಟ
ತುಂಡು ತುಂಡಾದವರ ನರಕಯಾತನೆ
ತಲೆ ತುಂಬ ಭಾರ
ಮನಸ್ಸಿಗೆ ಕಿರಿ ಕಿರಿ ಅಶಾಂತಿ

ಬಾಂಬ್ ಭಯೋತ್ಪಾದನೆ ವಿರೋಧಿಗಾಗಲಿ
ಶಾಂತಿ ಪ್ರಿಯತೆಯ ಬಗೆಗಾಗಲಿ
ಒಂದಿಷ್ಟು ಬರೆದು ಭಯೋತ್ಪಾದಕರಿಗೆ ತಲುಪಿಸಬೇಕೆನ್ನುತ್ತೇನೆ
ಮನೆಯ ತಾರಸಿಯ ಮೇಲೆ ಹೋಗಿ
ಪಾರಿವಾಳಗಳನು ಹಾರಿಸಿಬಿಡುತ್ತೇನೆ
ಪಕ್ಕದ ಮನೆಯಲ್ಲೂ ಗುಟುರು ಹಾಕುತ್ತ
ಕುಳಿತ ಪಾರಿವಾಳಗಳಿಗೂ ಶಾಂತಿ ಸಂದೇಶ
ಕೊಟ್ಟು ಬಿಳಿಯ ದುಪಟ್ಟ
ಅವುಗಳೆಡೆಗೆ ಬೀಸಿ ಹಾರಿಸಿಬಿಟ್ಟು
ಹೃದಯ ಹಗುರವಾಗಿ ಬರೆಯಲು
ಇಳಿದು ಬರುತ್ತೇನೆ.

ದೂರದಲ್ಲೆಲ್ಲಿಂದಲೋ ’ಢಮಾರ್’ ಶಬ್ದ
ಬೆಚ್ಚಿಬಿದ್ದು ಕಿಟಕಿ ಬಾಗಿಲು ತೆರೆದರೆ

ಪಾರಿವಾಳಗಳು ಪಟಪಟನೆ ರೆಕ್ಕೆ ಬಡಿಯುತ
ಒಂದಿಷ್ಟು ಉರುಳಿಬೀಳುತ್ತಿವೆ
ಉಳಿದವು ರಕ್ತ ಚೆಲ್ಲುತ ನೆರಳಿ
ಮತ್ತೆ ತಾರಸಿಗೆ ಬರುತ್ತಿವೆ.
ಅರೆರೆ ! ನಮ್ಮ ನಡುವೆಯೂ, ಸುತ್ತಲೂ
ಭಯೋತ್ಪಾದಕರೆ, ಜೇಬಿನಲಿ
ನೀಲಿ ಪೆನ್ನಿನ ಬದಲು ಚಾಕು ಚೂರಿ ಪಿಸ್ತೂಲುಗಳೆ?

ಇನ್ನೇನು ಬರೆಯಲಿ, ಎದೆ ತುಂಬ ಕಣ್ಣೀರು
ಆದರೂ ಬರೆಯುತ್ತೇನೆ
ಶಾಂತಿಗಾಗಿ ಹಂಬಲಿಸುತ್ತೇನೆ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...