ಕೃತಕ ವನ

ಕೈಯಾರೆ ಬೆಳೆಸಿಕೊಂಡು ತಿದ್ದಿತೀಡಿ ಗಳಿಸಿಕೊಂಡ
ಈ ತೋಟದಲ್ಲಿ

ಸಹಜ ಸಮೃದ್ಧಿ ಇಲ್ಲ, ನೈಜ ಸಂಸಿದ್ಧಿ ಇಲ್ಲ,
ಬೇರಿಳಿಸಿಕೊಂಡ ಪುಣ್ಯವಿಲ್ಲ, ಪವಿತ್ರವಾದ ಪಾಪವಿಲ್ಲ
ಗಾಳಿಗೊಡ್ಡಿ ಬಾಹುಗಳು ಬಯಲ ತಬ್ಬಿ ಸುಖಿಸಲಿಲ್ಲ
ಎಲರಿನಲ್ಲೆಲೆಗಳು ಎಲ್ಲೆ ಮೀರಿದ ಮಾತನುಲಿಯಲಿಲ್ಲ
ಬಿಸಿಲಿಗೊದ್ದಿ ಮೈ ಚರ್ಮ ಮಿರಿಮಿರಿ ಮಿಂಚಲಿಲ್ಲ
ಮಿತ್ರನ ಕಣ್ಣ ಕಿರಣಗಳು ರೋಮಗಳೂಡನೆ ಬೆಸೆದು
ಬೆವರಿನರ್ಥವ ಕಂಡುಕೊಳ್ಳಲಿಲ್ಲ
ಹಕ್ಕಿಗಳೊಡನಾಡುವ ಇವಕ್ಕೆ ಪರದೇಶಿಗಳೊಡನೆ
ಸಂಭಾಷಿಸುವ ಗುದ್ದಾಟ

ಅಂಗಾಂಗಗಳ ಕತ್ತರಿಸಿಕೊಂಡ ಈ ಕೃತಕ ಚೆಲುವೆಯರಲಿ
ವಿಶ್ರಮಿಸಲು ಬರುವ ಪ್ರಣಯಿಗಳಿಗೆ ಪ್ರೇತಕಂಡ ಭಯ
ಇಲ್ಲಿಯ ಹೂಗಳಿಗೆಲ್ಲ ಮೇಲೊಂದು ಬಣ್ಣದ ಲೇಪ
ಇಲ್ಲಿಯ ಕಾಯಿಗಳಿಗೆ ಬೂದಿ ಬಿಳಿಚುಗಳ ಧೂಪ,
ಇಲ್ಲಿಯ ಹಣ್ಣುಗಳಿಗೆ ಬೇರೆ ವೇಷದ ಮೋಹ
ಮತ್ತು ಇವಕೆಲ್ಲ ಮೂಗಿನಿಂದ ಬ್ರಹ್ಮರಂದ್ರಕ್ಕೆ
ಸಲಾಕಿಯೇರಿಸುವ ಕಟು ವಾಸನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೆಂಟ್ಲು ಕೇಸು ಬಳ್ಳಾರಿ ರೆಡ್ಡಿನಾ? ಯಡ್ಡಿನಾ? ಕುಮ್ಮಿನಾ?
Next post ಶಾಂತಿಗಾಗಿ ಹಂಬಲ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys