Home / ಕವನ / ಕವಿತೆ / ಬೇರೊಬ್ಬರ ಮಕ್ಕಳಿಗಾಗಿ

ಬೇರೊಬ್ಬರ ಮಕ್ಕಳಿಗಾಗಿ

ಮೋರೆ ಮರೆಯಾಯ್ತಿನ್ನು ಮೇಲೆ, ಕಣ್ಣುಗಳೆಂತು
ಯಾರಿಗೂ ಮೋಹನವ ಮಾಡಲಾಪವು! ಕಂದ
ಕಾರಿಬಾರಿಗಳಂತೆ ಸರಿಮಾಡಿದ ಸುಖವು
ಎಲ್ಲಡಗಿತೀಗ ಎಲ್ಲ?

ನಾರಾಯಣಾ ! ಅಹಹ ! ಎಂಥ ಕೋಮಲ ಜೀವ!
ವಾರಿಜದವೋಲ್ ಮಂಜಿನಿಂದ ಮರಣವು ಬಂತೆ !
ಪಾರಿಜಾತದ ಹೂವಿನಂತೆ ಮುಟ್ಟಿದ ಒಡನೆ
ಬಾಡಿ ಅಸು ಬಿಟ್ಟಿತಲ್ಲೆ !

ನೀಟುಗಾರರನೆಲ್ಲ ನಾಡೆ ನಾಚಿಸುವಂಥ
ಮಾಟಮಾಡುವ ಕಣ್ಣು, ಮಾಟವಾಗಿಹ ಮೊಗವು
ಚಾಟು ವಚನಗಳಿಂದ ಬೇಟ ಮನವನು ಮರುಳು-
ಮಾಡಿ ಗಡ ಒಡನೆ ಕೂಡಿ

ಓಟದಿಂ ನೋಟದಿಂ ಚಾಪಲ್ಯವಂ ತೋರಿ
ತಾಟಿನಿಂದಾಟದಿಂ ಜಿಂಕೆಗೂ ಮೀಟಾಗಿ
ನಾಟಕದವೋಲ್ ತಾಸಿನೊಳು ತೀರಿಹೋದೆಯಾ?
ಹಾಯ್‌ಹಾಯ್‌ಸಾವ ಸೊಗಸೆ !

ಇಂಥ ಮರಣದ ಹಾಡು, ಮೇಲೆ ಕೇಳ್ವುದು ನಾರಿ-
ಯಂಥ ಕರುಣೆಯ ಹೃದಯ, ಇನ್ನು ಅದಕ್ಕೂ ಹೆಚ್ಚು
ಕಂಠಿಯೊಳಗಿನ ಹವಳದಂತಿರುವ ಕರುಳೆರಡು
ಕಳಕೊಂಡ ತಾಯಿ ಕೇಳೆ

ಅಂತರಂಗಕೆ ಬೆಂಕಿಹತ್ತಿ ಹರಿದಿತು ಚಿತ್ತ
ಕಂಠದೊಳಗಿಂಧೊರಟ ಕಂಬನಿಯು ಕಣ್ಣಿನೊಳು
ಕುಂಠಿತಂ ಆಗೆ, ಕಣ್ ಬಿರಿಬಿರಿಯೆ ಬಿಟ್ಟು ನಿಟ್ಟು-
ಸರಿ ಕಿವಿಗೊಟ್ಟಳಾಗ್ಗೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...