Home / ಕವನ / ಕವಿತೆ / ರತ್ನನ್ ಮಾತು

ರತ್ನನ್ ಮಾತು

ನಿನ್ ಕೈ ಕೆಳಗ್ನೋನ್ ನಾನ್ ಅಂದಾಕ್ಸ್ನೆ
‘ಲೋ’ ಅಂತ್ ಏಳ್ ಅನ್ಬೇಕ?
‘ಅಪ್ಪ ಅಣ್ಣ’ ಅನ್ನೋದ್ ಬುಟ್ಟಿ
ದೊಡ್‌ಗಿಡ್‌ತನ ಮೂಲೇಗ್ ಇಟ್ಟಿ
ತಿಳದೋನೇನೆ ಯಿಂಗಂತ್ ಅಂದ್ರೆ
ಮೆಚ್ಕಂತೈತ ಲೋಕ? ೧

ಮೂರ್‍ನೆಯೋನ್ಗೆ ಚಿಕ್ಕೋನ್ ಮಾಡಿ
ದೊಡ್ಮನಸಾದೇಂತ್ ತಿಳದಿ
ಮೋಸ್ ಓಗ್ಬೇಡ. ಚಿಕ್ದು ದೊಡ್ದು
ವೋಗೋದೆಲ್ಲಾ ನಸೀಬ್ ಯಿಡ್ದು!
ಆರ್‍ಕಾಸ್ ರೂಪಾಯ್ ಆಗೋಗ್ತೈತೆ
ಕೊಟ್ರೆ ಸುಣ್ಣ ಬಳದಿ? ೨

ನಸೀಬ್ ಒಂದು ಬಸೀತಾನಿದ್ರೆ
ಮನ್ಸ ದೇವ್ರ್ ಆಗ್ತೌನೆ!
ಕಂಡಿದ್ ನೀರೂ ಯೆಂಡಾಗ್ತೈತೆ!
ಬತ್ಕೊಂಡ್ ವೊಟ್ಟೆ ಗುಂಡಾಗ್ತೈತೆ!
ನಸೀಬ್ ಏನ್ರ ಕೋಟಾ ಆದ್ರೆ
ಎಲ್ಲಾರ್ ಬೆನ್ನೂ ಗೂನೆ! ೩

ತಾಬೇದಾರಿ ಒಂದ್ ಸುಡಗಾಡು!
ಮನ್ಸನ್ ಮಣ್‌ ಮಾಡ್ತೈತೆ!
ತಾಬೇದಾರ್ರು ಮೇಲ್ನೋರ್ ಎದರು
ಯಿಂಗ್ ಅನ್ಬಾರ್‍ದು. ಗೊತ್ತು. ಆದ್ರೂ
ನರಮನ್ಸಾನ್ನೋನ್ ಸೈಸೋಕೂನೆ
ಮಿತಿ ಅಳತೆ ಐತೆ! ೪

ದೊಡ್ಡೋನ್ ನೀನು ಚಿಕ್ಕೋನ್ ನಾನು
ಇದೂ ಇರಬೌದ್, ಯೋಳ್ಕೊ;
ಆದ್ರೂನೂನೆ ‘ಚಿಕ್ಕೋನ್ ನೀನು’
ಅಂತೇಳಂತ ಮೂರೊತ್ತೂನು
ಮೊಟಕೋದ್‌ ಮಾತ್ರ ದೊಡ್ತನಾಲ್ಲ-
ಅನ್ನೊದ್ ಚೆಂದಾಗ್ ತಿಳ್ಕೊ! ೫

ತಿಳದೊರ್‍ಗ್ ಇಂಗೇಂತ್ ಯೋಳಾಕ್ ನಾನ!
ಕುಡಕ! ಅಳ್ಳಿ ಮುಕ್ಕ!
ನನಗೇನ್ ಅಂತ ಜಂಬಾನಿಲ್ಲ.
ಆದ್ರೂನೆ ನನಗಿರೋದೆಲ್ಲ-
ತಿಳದೋರ್‍ಗೂನೆ ಮಂಕ್ ಮುಚ್ಕೋಂತ
ಅನ್ನೊದ್ ಒಂದೇ ದುಕ್ಕ! ೬
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...