Home / ಕವನ / ಕವಿತೆ / ರತ್ನನ್ ಮಾತು

ರತ್ನನ್ ಮಾತು

ನಿನ್ ಕೈ ಕೆಳಗ್ನೋನ್ ನಾನ್ ಅಂದಾಕ್ಸ್ನೆ
‘ಲೋ’ ಅಂತ್ ಏಳ್ ಅನ್ಬೇಕ?
‘ಅಪ್ಪ ಅಣ್ಣ’ ಅನ್ನೋದ್ ಬುಟ್ಟಿ
ದೊಡ್‌ಗಿಡ್‌ತನ ಮೂಲೇಗ್ ಇಟ್ಟಿ
ತಿಳದೋನೇನೆ ಯಿಂಗಂತ್ ಅಂದ್ರೆ
ಮೆಚ್ಕಂತೈತ ಲೋಕ? ೧

ಮೂರ್‍ನೆಯೋನ್ಗೆ ಚಿಕ್ಕೋನ್ ಮಾಡಿ
ದೊಡ್ಮನಸಾದೇಂತ್ ತಿಳದಿ
ಮೋಸ್ ಓಗ್ಬೇಡ. ಚಿಕ್ದು ದೊಡ್ದು
ವೋಗೋದೆಲ್ಲಾ ನಸೀಬ್ ಯಿಡ್ದು!
ಆರ್‍ಕಾಸ್ ರೂಪಾಯ್ ಆಗೋಗ್ತೈತೆ
ಕೊಟ್ರೆ ಸುಣ್ಣ ಬಳದಿ? ೨

ನಸೀಬ್ ಒಂದು ಬಸೀತಾನಿದ್ರೆ
ಮನ್ಸ ದೇವ್ರ್ ಆಗ್ತೌನೆ!
ಕಂಡಿದ್ ನೀರೂ ಯೆಂಡಾಗ್ತೈತೆ!
ಬತ್ಕೊಂಡ್ ವೊಟ್ಟೆ ಗುಂಡಾಗ್ತೈತೆ!
ನಸೀಬ್ ಏನ್ರ ಕೋಟಾ ಆದ್ರೆ
ಎಲ್ಲಾರ್ ಬೆನ್ನೂ ಗೂನೆ! ೩

ತಾಬೇದಾರಿ ಒಂದ್ ಸುಡಗಾಡು!
ಮನ್ಸನ್ ಮಣ್‌ ಮಾಡ್ತೈತೆ!
ತಾಬೇದಾರ್ರು ಮೇಲ್ನೋರ್ ಎದರು
ಯಿಂಗ್ ಅನ್ಬಾರ್‍ದು. ಗೊತ್ತು. ಆದ್ರೂ
ನರಮನ್ಸಾನ್ನೋನ್ ಸೈಸೋಕೂನೆ
ಮಿತಿ ಅಳತೆ ಐತೆ! ೪

ದೊಡ್ಡೋನ್ ನೀನು ಚಿಕ್ಕೋನ್ ನಾನು
ಇದೂ ಇರಬೌದ್, ಯೋಳ್ಕೊ;
ಆದ್ರೂನೂನೆ ‘ಚಿಕ್ಕೋನ್ ನೀನು’
ಅಂತೇಳಂತ ಮೂರೊತ್ತೂನು
ಮೊಟಕೋದ್‌ ಮಾತ್ರ ದೊಡ್ತನಾಲ್ಲ-
ಅನ್ನೊದ್ ಚೆಂದಾಗ್ ತಿಳ್ಕೊ! ೫

ತಿಳದೊರ್‍ಗ್ ಇಂಗೇಂತ್ ಯೋಳಾಕ್ ನಾನ!
ಕುಡಕ! ಅಳ್ಳಿ ಮುಕ್ಕ!
ನನಗೇನ್ ಅಂತ ಜಂಬಾನಿಲ್ಲ.
ಆದ್ರೂನೆ ನನಗಿರೋದೆಲ್ಲ-
ತಿಳದೋರ್‍ಗೂನೆ ಮಂಕ್ ಮುಚ್ಕೋಂತ
ಅನ್ನೊದ್ ಒಂದೇ ದುಕ್ಕ! ೬
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...