ಕಲಿಸಿದರು

ರೆಕ್ಕೆ ಬಲಿಯುವ ಮೊದಲೇ ಕತ್ತರಿಸಿ ಉಗುರು ಕೊಯ್ದು
ಕೊಕ್ಕ ಬಂಡೆಗೆ ಕುಕ್ಕಿಸಿ ಮೊಂಡಾಗಿಸಿ ಹೀಗೆ
ಬೆಳೆಸಿ ಬಿಟ್ಟರು-ಬೆಳೆಯ ಬಿಟ್ಟರು
ಕಣ್ಣು ಕಟ್ಟಿ ಕಾರಡವಿಯಲ್ಲಟ್ಟಿ ಬಿಟ್ಟರು

ಹೂಮಾಂಸವನರಳಿಸಿಕೋ ಎಂದು ಹದ್ದುಗಳಿಗಿಟ್ಟರು
ಹುಲ್ಲಂತೆ ಬಾಗೆಂದು ಬೆನ್ನ ಬಿಲ್ಲಾಗಿಸಿದರು
ಮಲ್ಲಿಗೆಯಾಗೆಂದು ಕಲ್ಲ ಕೆಳಗಪ್ಪಚ್ಚಿಗಿಕ್ಕಿದರು
ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯೊಡ್ಡೆಂದು
ಮೀಸೆ ಹೊತ್ತ ಮುಖಕ್ಕೆ ಮಸಿ ಹಚ್ಚಿದರು
ವಿಷವಿಕ್ಕಿದವಗೆ ಷಡ್ರಸವನಿಕ್ಕೆಂದು ಮನೆಹಾಳತನವ ಬೋಧಿಸಿದರು
ಒದೆಸಿಕೊಂಡರೂ ಅಳುನುಂಗಿ ನಗು ಎಂದು
ಅಳುಬುರುಕುತನವ ಕಲಿಸಿದರು

ಉಗುಳಿದರೆ ಒರೆಸಿಕೊಂಡು ಹೊಗಳೆಂದು
ಬೊಗಳುಸನ್ನಿತನವ ಕಲಿಸಿದರು
ಕೋಡಿದ್ದರೂ ತಿವಿಯದೆ ತಲೆಹಾಕುವುದ ಕಲಿಸಿದರು
ಗಂಡ ಬೇರನ್ನು ಕೊಟ್ಟು ಕಸಿ ಮಾಡಿ
ನರಹಿಚುಕಿ ಜೀವಧಾತು ಹರಿಯದೆ ಬರಲಾಗಿಸಿ
ಕೆಂಡ ಕೆರಳದಂತೆ ತಣ್ಣೀರು ಹಾಕಿ
ಷಂಡತನವ ಕಲಿಸಿದರು ನಮ್ಮವರು

ತಲೆ ಪಂಜರಪಕ್ಷಿಗೆ ಗಿಳಿಯೋದಿಸಿ
ಮೂಗುಹಿಡಿಸಿ ಜಪ ಮಾಡ ಕಲಿಸಿದರು
ತೀರ್ಥಕುಡಿಸಿ ಮಬ್ಬೇರಿಸಿ ಗೂಡಿನಲ್ಲಿಹಪರವೆಂದು ಕೂಡಿಹಾಕಿ
ಬಯಲಾಗಸದ ತಿಳಿಹೊಳೆಯ ಗಿರಿನೀರ ತನಿವಣ್ಣ ರಸಗಳಿಗೆಲ್ಲ
ಎರವಾಗಿಸಿ ಬಂದೋಬಸ್ತಾಗಿ ಬಂಧಿಸಿದರೋ ನಾಗರಿಕ ನೆರಳಲ್ಲಿ
ಕತ್ತಿಕೋಲು ಕುಣಿದಾಡುವ ಗೊಂಡಾರಣ್ಯದಲ್ಲಿ
ಮುಳ್ಳುಗಳೆದ್ದೆದ್ದು ಕಣ್ಣು ಚುಚ್ಚುವಲ್ಲಿ
ಕೋರೆ ಹಲ್ಲುಗಳು ಮಸೆಯುವಲ್ಲಿ ಕೆನ್ನಾಲಿಗೆ ಚಾಚಿದಲ್ಲಿ
ಕಲ್ಲು ಗುಂಡು ಸದಾ ಸುರಿಯುವಲ್ಲಿ
ಬೋಳಾಗಿಸಿ ಬಿಳಿಚು ಮಲ್ಲಿಗೆಯಾಗಿಸಿ
ಬಾಳಾ ಬಾಳೆಂದು ಕಲಿಸಿಬಿಟ್ಟರು ನಮ್ಮವರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕಿಗಾಗಿ…
Next post ಪುರುಷೋತ್ತಮ’ ಯಶವಂತ ಚಿತ್ತಾಲ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…