Home / ಲೇಖನ / ಇತರೆ / ಪುರುಷೋತ್ತಮ’ ಯಶವಂತ ಚಿತ್ತಾಲ

ಪುರುಷೋತ್ತಮ’ ಯಶವಂತ ಚಿತ್ತಾಲ

ಪುರುಷೋತ್ತಮ ಯಶವಂತ ಚಿತ್ತಾಲರು ಇನ್ನಿಲ್ಲ. ಇಂದಿನ ಪ್ರಜಾವಣಿಯ ಮುಖಪುಟದಲ್ಲಿ ಅವರ ನಿರ್ಗಮನದ ಸುದ್ದಿಯನ್ನು ಓದಿ ಮನಸ್ಸು ನೆನಪಿನ ಸುರುಳಿ ಬಿಚ್ಚಿ ೨೦೦೬ನೆ ಇಸವಿಯ ಡಿಸೆಂಬರ್ ಮಾಹೆಯ ಒಂದು ಇಳಿಸಂಜೆಯ ಮೆಲುಕು ಹಾಕಲಾರಂಭಿಸಿತು. ಅಂದು ನಾನು ಇಂದು ಇನ್ನಿಲ್ಲವಾಗಿರುವ ಚಿತ್ತಾಲರನ್ನು ಅವರ ಬಾಂದ್ರಾ ನಿವಾಸದಲ್ಲಿ ಭೇಟಿಯಾಗಿದ್ದೆ. ಅವರ ಪ್ರೀತಿಯ ಸಮುದ್ರ ನೋಟವನ್ನು ಸವಿಯುತ್ತ ಅವರೆದಿರಾಗಿ ಕುರ್ಚಿಯಲ್ಲಿ ಕುಳಿತು ಸಾಹಿತ್ಯ, ತಾಂತ್ರಜ್ಞಾನದ ಬಗ್ಗೆ ಅವರ ವಿಚಾರಗಳನ್ನು ಕೇಳಿದ್ದೆ. ಅಂದು ಅವರು ಹೇಳಿದ ಒಂದು ಮಾತು ನನ್ನನ್ನು ಬಹಳವಾಗಿ ಪ್ರಭಾವಿಸಿತು. ದಕ್ಷಿಣ ಅಮೇರಿಕದ ಲೇಖಕನೊಬ್ಬ ಬರೆಯುವಾಗ/ಟೈಪಿಸುವಾಗ ತಪ್ಪಾದಾಗ ಅದು ಬರಿ ಕೈತಪ್ಪಲ್ಲ, ಮನಸ್ಸಿನ ಚಿಂತನೆಯಲ್ಲಿನ ತಪ್ಪು, ಎಂದು ಪರಿಭಾವಿಸಿ ಆ ಪುಟವನ್ನೇ ಹರಿದುಹಾಕಿ ಪುನಃ ಬರವಣಿಗೆಯನ್ನು ಪ್ರಾರಂಭಿಸುತ್ತಿದ್ದನು, ಆ ಬದ್ಧತೆ ನಮ್ಮ ಎಲ್ಲ ಚಿಂತನೆ, ಕೃತಿಯಲ್ಲಿರಬೇಕು ಎಂದಿದ್ದರು. ಅವರು ಅಂದು ನನ್ನಂತಹ ಕಿರಿಯನೊಂದಿಗೂ ತೋರಿದ ಮುಕ್ತ ಮನಸ್ಕತೆ, ಸೌಜನ್ಯವನ್ನು ನಾನೆಂದಿಗೂ ಮರೆಯಲಾರೆ. ಆತ್ಮದ ಕಲ್ಪನೆಯ ಬಗ್ಗೆ ಸಂಶಯಗಳನ್ನು ಹೊಂದಿರುವ ನಾನು ಚಿತ್ತಾಲರಂತಹ ಚೇತನ ನಾಡಿನೆಲ್ಲರನ್ನು ನೂರ್ಕಾಲ ಉದ್ದೀಪಿಸುತ್ತಿರಲಿ ಎಂದು ಹಾರೈಸ ಬಯಸುತ್ತೇನೆ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...