Home / ಕವನ / ಕವಿತೆ / ಟಿಸಿ ಮದ್ದು

ಟಿಸಿ ಮದ್ದು

ನೀವು ಆಡಾಡ್ತಾ ಅಡವಿ ಬೀಳ್ತೀರೇನೋ
ದೊಡ್ಡ ಆಟಂಬಾಂಬ ಪಟಾಕಿ ಹಾರುತ್ತದೆಂದು
ಬೆಂಕಿ ಹಚ್ಚಿದಾಗ ನೀವು, ಕಿವಿ ಮುಚ್ಚಿಗೊಳ್ಳಲು ಜನ
ಅದು ಸುರು ಸುರು ಎಂದು ಮೊದಲು ಬುಸುಗುಟ್ಟಿ
ನಂತರ ಮದ್ದು ಮುಟ್ಟುವುದರೊಳಗೇ ಟಿಸ್ಸೆನ್ನುವುದೇನೋ!

ತಳದೊಳಗಿಂದೇಳದೆ
ಒಳತಂತು ಮಿಡಿಯದೆ ಸಹಜರಾಗ
ಆ ಕೂಗು ಈ ಕೂಗು ಸೇರಿ ಜಾತ್ರೆಯಬ್ಬರದೊಳಗೆ
ನಾಲ್ವರಂತೆ ನಾರಾಯಣ ಎನ್ನುತ್ತ ಬೊಗಳುವ ನಾಯಿಗಳೊಡನೆ
ನಮ್ಮದೂ ಇರಲೆಂದು ಸೇರಿಸಿದ ಬೊಗಳಾಗಿಬಿಡುವುದೇನೋ
ಗುರಿಯಿಟ್ಟವನನ್ನು ಪಲ್ಲಕ್ಕಿಯಲ್ಲಿಟ್ಟು ಮೆರೆಸಿ ಒಣ ಒಣ
ನೀವು ನಿಮ್ಮ ನಿಮ್ಮ ಬಣ್ಣ ಬಯಲುಗೊಳಿಸಿಕೊಳ್ಳಲು
ಮೆರೆದಾಟದ ನಿಮ್ಮ ತಿಂಡಿಯನ್ನಿಷ್ಟು ತೀರಿಸಿಕೊಂಡು
ಪಲ್ಲಕ್ಕಿಯನ್ನು ಸುಡುಗಾಡಿನಲ್ಲಿಟ್ಟು
ನೀವು ಕೈ ಒರೆಸಿಕೊಂಡು ಹೋಗಿ ಬಿಡುವಿರೇನೋ!

ಚಲಿಸಲಾಗದ ಬೆಟ್ಟದ ಮುಂದೆ ನಿಂತು ಕೂಗುವ ಕೂಗಾಗುವುದೇನೋ
ಅಥವ ಹೊರಲು ಹೋಗಿ ಗೂದೆ ಹಾದು ಅರಚಿದ
ರಾವಣನ ರೋದನವಾಗುವುದೇನೋ?
ಮಾತಿನ ಮಂತ್ರದಿಂದ ಮಾವಿನಕಾಯಿಯನುದುರಿಸುವಿರೇನೋ?
ಹರೆಯದ ಹರವಿಗೊಂದು ಕಾಲುವೆ ತೋಡಿಕೊಂಡು
ಹರಿಸಿಕೊಂಡು ಕಾವಳಿದು ಉಕ್ಕಿಳಿದು ಸೆಲೆಬತ್ತಿದಾಗ
ನಿಮ್ಮ ಹರಿದಾಟವೂ ಸತ್ತು ಬಿಡುವುದೇನೋ
ಕಾವ್ಯಗರತಿಯನ್ನು ರಾಜಕಾರಣ ವಿಟನಿಗೆ ಮಾರಿ
ಹೊಟ್ಟೆ ತುಂಬಿಕೊಳ್ಳುವ ಹೇಸಿತನವಾಗುವುದೇನೋ?
ಬೇರನ್ನೆಲ್ಲ ಬೈದು ಭೇದಿಸಿ ಅತಂತ್ರ ಜೋತಾಡುವ
ಕಾಗದ ಹೂವಾಗುವಿರೇನೋ?
ಅಥವಾ ಮೇಲಂಟಿಸಿಕೊಂಡ ಮೀಸೆಯಾಗಿಬಿಡುವಿರೇನೋ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...