Home / ಕವನ / ಕವಿತೆ / ಮಲಾಲಾಳ ಮನದಾಳ (ಕಾಬೂಲಿವಾಲಾ ನೆನಪಿಸಿ)

ಮಲಾಲಾಳ ಮನದಾಳ (ಕಾಬೂಲಿವಾಲಾ ನೆನಪಿಸಿ)

ಹೊಟ್ಟೆಪಾಡಿಗೆ ದೂರದೇಶ ತಿರುಗಿ
ಮಿಠಾಯಿ ಮಾರಿ ಮಕ್ಕಳಿಗೆ ಕಥೆ ಹೇಳಿ
ನಗಿಸಿ ಅವರೊಳಗೆ ನನ್ನ ಕಂಡು
ಮಗಳು ಹೇಗಿದ್ದಾಳೋ ಎಂದಂದು
ಕರುಳು ಕತ್ತರಿಸಿದನುಭವಕೆ ಕಣ್ಣೀರು ಸುರಿಸಿ
ಭಾವನೆಗಳನ್ನೊತ್ತಿ ಗಂಟಲು ಬಿಗಿದದ್ದು…

ಅದೊಂದು ಸುಂದರ ಬೆಳಗು ನಮಗಾಗಿ
ಹಿಂದಿರುಗಿ ಬಂದೆಯಲ್ಲಪ್ಪ ನಮ್ಮೂರಿಗೆ

ದ್ರಾಕ್ಷಿ ಬದಾಮು ಖರ್ಜೂರು ಮಾರುವ
ಕೈಗೇತಕ್ಕೆ ಈಗ ಬಂದೂಕು ಗುಂಡುಗಳ ಸರಮಾಲೆ
ಯಾಕಿಷ್ಟೊಂದು ಕಠೋರ; ಅಪ್ಪಾ ಹೆದರಿ ಗುಬ್ಬಚ್ಚಿಯಾಗಿದ್ದೇನೆ.
ಸಿಹಿಯಾಗಿರುವ ನೀನು ಯಾಕಿಷ್ಟೊಂದು ವಿಷವಾದೆ.

ಈ ಹಾದಿ ಈ ಅಟ್ಟಹಾಸ ಬೇಡವೆಂದೆ
ಪ್ರಯತ್ನಿಸಿದೆ ಬಂದೂಕು ಕಿತ್ತೆಸೆಯಲು
ದೇವರೇ ನನ್ನಪ್ಪನಿಗೆ ಬುದ್ಧಿ ಕೊಡೆಂದೆ
ಪ್ರಾರ್ಥಿಸಿದ ಮೊಳಕಾಲೂರಿ ಬೇಡಿಕೊಂಡೆ
ಬದಲಾಗಿ ನನಗೆ ಓದಿಸಪ್ಪ; ಹಲುಬಿ ಹಂಬಲಿಸಿದೆ.

ಹಾಳು ಹೆಣ್ಣಿಗೆ ಅಕ್ಷರ ಓದು ಕೇಡೆಂದು
ನನ್ನೆದೆಗೆ ಗುಂಡಿಟ್ಟೆಯಲ್ಲಪ್ಪ…

ಬದುಕಿದ್ದೇನೆ ಇನ್ನೂ ಕನಸುಗಳ ಹೊತ್ತು
ಬಾಪ್ಪ ಮತ್ತೊಮ್ಮೆ ಮಿಠಾಯಿ ಮಾರು ಬಾ
ಬಂದೂಕು ಚೆಲ್ಲು ಮಾನವೀಯತೆ ಮೆರೆ
ನೋಡಪ್ಪ ನಾನು ನಿನ್ನ ಮಗಳು ಮಲಾಲಾ
ನನ್ನೊಂದಿಗೆ ನೀನು ನಿನ್ನೊಂದಿಗೆ ನಾನಿದ್ದು
ವಿಶ್ವಶಾಂತಿಗೆ ಕೈಜೋಡಿಸೋಣ ಬಾಪ್ಪ
ಬಾ ಬಾ ನನ್ನಪ್ಪ ಹೃದಯವಂತನಾಗು ಅಪ್ಪಾ.
*****
(ವಿಶ್ವಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಅತೀ ಚಿಕ್ಕವಯಸ್ಸಿನ ಹುಡುಗಿ ಪಾಕಿಸ್ತಾನ (ಅಪಘಾನಿಸ್ತಾನ)ದವಳು. ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಮತ್ತು ಶಿಕ್ಷಣಕ್ಕೆ ವಿರೋಧವಿರುವ ಉಗ್ರರಿಂದ ಗುಂಡೇಟಿಗೆ ಬಲಿಯಾಗಿ ಬದುಕಿ ಉಳಿದು ಹೆಣ್ಣುಮಕ್ಕಳ ಹಕ್ಕಿಗಾಗಿ ಹೋರಾಡುತ್ತಿದ್ದಾಳೆ.)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...