Home / ಕವನ / ಕವಿತೆ / ಮಲಾಲಾಳ ಮನದಾಳ (ಕಾಬೂಲಿವಾಲಾ ನೆನಪಿಸಿ)

ಮಲಾಲಾಳ ಮನದಾಳ (ಕಾಬೂಲಿವಾಲಾ ನೆನಪಿಸಿ)

ಹೊಟ್ಟೆಪಾಡಿಗೆ ದೂರದೇಶ ತಿರುಗಿ
ಮಿಠಾಯಿ ಮಾರಿ ಮಕ್ಕಳಿಗೆ ಕಥೆ ಹೇಳಿ
ನಗಿಸಿ ಅವರೊಳಗೆ ನನ್ನ ಕಂಡು
ಮಗಳು ಹೇಗಿದ್ದಾಳೋ ಎಂದಂದು
ಕರುಳು ಕತ್ತರಿಸಿದನುಭವಕೆ ಕಣ್ಣೀರು ಸುರಿಸಿ
ಭಾವನೆಗಳನ್ನೊತ್ತಿ ಗಂಟಲು ಬಿಗಿದದ್ದು…

ಅದೊಂದು ಸುಂದರ ಬೆಳಗು ನಮಗಾಗಿ
ಹಿಂದಿರುಗಿ ಬಂದೆಯಲ್ಲಪ್ಪ ನಮ್ಮೂರಿಗೆ

ದ್ರಾಕ್ಷಿ ಬದಾಮು ಖರ್ಜೂರು ಮಾರುವ
ಕೈಗೇತಕ್ಕೆ ಈಗ ಬಂದೂಕು ಗುಂಡುಗಳ ಸರಮಾಲೆ
ಯಾಕಿಷ್ಟೊಂದು ಕಠೋರ; ಅಪ್ಪಾ ಹೆದರಿ ಗುಬ್ಬಚ್ಚಿಯಾಗಿದ್ದೇನೆ.
ಸಿಹಿಯಾಗಿರುವ ನೀನು ಯಾಕಿಷ್ಟೊಂದು ವಿಷವಾದೆ.

ಈ ಹಾದಿ ಈ ಅಟ್ಟಹಾಸ ಬೇಡವೆಂದೆ
ಪ್ರಯತ್ನಿಸಿದೆ ಬಂದೂಕು ಕಿತ್ತೆಸೆಯಲು
ದೇವರೇ ನನ್ನಪ್ಪನಿಗೆ ಬುದ್ಧಿ ಕೊಡೆಂದೆ
ಪ್ರಾರ್ಥಿಸಿದ ಮೊಳಕಾಲೂರಿ ಬೇಡಿಕೊಂಡೆ
ಬದಲಾಗಿ ನನಗೆ ಓದಿಸಪ್ಪ; ಹಲುಬಿ ಹಂಬಲಿಸಿದೆ.

ಹಾಳು ಹೆಣ್ಣಿಗೆ ಅಕ್ಷರ ಓದು ಕೇಡೆಂದು
ನನ್ನೆದೆಗೆ ಗುಂಡಿಟ್ಟೆಯಲ್ಲಪ್ಪ…

ಬದುಕಿದ್ದೇನೆ ಇನ್ನೂ ಕನಸುಗಳ ಹೊತ್ತು
ಬಾಪ್ಪ ಮತ್ತೊಮ್ಮೆ ಮಿಠಾಯಿ ಮಾರು ಬಾ
ಬಂದೂಕು ಚೆಲ್ಲು ಮಾನವೀಯತೆ ಮೆರೆ
ನೋಡಪ್ಪ ನಾನು ನಿನ್ನ ಮಗಳು ಮಲಾಲಾ
ನನ್ನೊಂದಿಗೆ ನೀನು ನಿನ್ನೊಂದಿಗೆ ನಾನಿದ್ದು
ವಿಶ್ವಶಾಂತಿಗೆ ಕೈಜೋಡಿಸೋಣ ಬಾಪ್ಪ
ಬಾ ಬಾ ನನ್ನಪ್ಪ ಹೃದಯವಂತನಾಗು ಅಪ್ಪಾ.
*****
(ವಿಶ್ವಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಅತೀ ಚಿಕ್ಕವಯಸ್ಸಿನ ಹುಡುಗಿ ಪಾಕಿಸ್ತಾನ (ಅಪಘಾನಿಸ್ತಾನ)ದವಳು. ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಮತ್ತು ಶಿಕ್ಷಣಕ್ಕೆ ವಿರೋಧವಿರುವ ಉಗ್ರರಿಂದ ಗುಂಡೇಟಿಗೆ ಬಲಿಯಾಗಿ ಬದುಕಿ ಉಳಿದು ಹೆಣ್ಣುಮಕ್ಕಳ ಹಕ್ಕಿಗಾಗಿ ಹೋರಾಡುತ್ತಿದ್ದಾಳೆ.)

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...