Home / ಕವನ / ಕವಿತೆ / ಅಲ್ಲಮನೆಂದರೆ

ಅಲ್ಲಮನೆಂದರೆ

ಮನಸ್ಸಿನಾಳಕೆ ಇಳಿದ ನಿಮ್ಮ ಘನ
ವೇದ್ಯ, ಪಾಪ ಪುಣ್ಯ ಸುಖ ದುಃಖ
ಎಲ್ಲವ ದಾಟಿ ಮರಣವನು ಜನನವಾಗಿಸಿ,
ಕಾಲ ಸರಿದ ಮಹಿಮೆ ಅವನ ನಿಜ ಒಲವು.

ಎಲ್ಲ ವಿಷಯಗಳ ಅರಿದೆನೆಂಬ ಅಹಂ ಭಾವ
ನಿಜದ ನೆರಳ ಸವರಿ ಸುಖಕ್ಕೆ ಆರೋಚಕವಿಲ್ಲ.
ಶರಣನಿಗೆ ಭಯವಿಲ್ಲ ಬಂಧನವಿಲ್ಲ. ಮತ್ತೆ
ಪುರುಷಕ್ಕೆ ಬೆಲೆ ಬಂದಿತು ಅಂಗದ ಲಿಂಗದಿಂದ.

ಹಗಲಲಿ ಇರುಳಲಿ ಅಲ್ಲಿಂದ ಇಲ್ಲಿಂದ ಒಡಲ
ಕಾವಿಗೆ ತಳಮಳಿಸಿದ ಜೀವ ನೆತ್ತಿಯ ಒಳಗಿನ,
ಮೃತ್ಯು ನೆರಳು ಕಾಣದೇ ಸುಳ್ಳು ಬೆಳದಿಂಗಳ,
ಬಯಲ ನೋಡಿ, ಹಿಂದಣ ಹೆಜ್ಜೆಗಳು ನೆಲಗೊಳ್ಳದು.

ದಾರಿಗುಂಟ ನಡೆದವರಿಲ್ಲ ಎಲ್ಲ ಲೆಕ್ಕಾಚಾರಗಳ
ಬದಲಿಸಿ ಜಾರಿ ಬಿದ್ದವರು, ನೆಲವ ಬಿಟ್ಟು
ಆಕಾಶದಲಿ ನಿಂತು, ಮುಗಿಲೊಳು ಮಿಂಚದೇ,
ಸಾಮಾನ್ಯದ ಅರಿವಿನ ಘಮ ಕಳೆದು ಹೋಗುವುದು.

ಕಂಗಳ ಮುಂದಿನ ಕತ್ತಲೆ, ಮನದ ಮುಂದೆ
ಬಟ್ಟೆ, ಹೊರಗಡೆಯ ಶೃಂಗಾರ ಮರೆತು
ಒಳಗೆ ನೋಡಿದವರ ಬೆಳಕಿನ ಸೂರ್ಯನ ಕಿರಣಗಳು,
ಅಂಬರದೊಳಗೆ ಒಂದು ಹಸಿರು ಬಯಲು ಹುಟ್ಟುವುದು.
ಅಲ್ಲಮನೆಂದರೆ ಘನ ರೂಪದ ಚಿತ್ರ ಬರೆಯಬಹುದು.
ಆದರೆ ಪ್ರಾಣವ ಹಿಡಿಯಲು ಬಾರದು.

ಅಲ್ಲಮನೆಂದರೆ ಅಲ್ಲಿ ಇಲ್ಲಿ ಎಲ್ಲಿಯೂ ಇಲ್ಲದ ಬಯಲು.
ಅಂತಃ ಶೂನ್ಯಂ, ಬಹಿಃ ಶೂನ್ಯಂ ಶೂನ್ಯಂ ಸರ್ವ ಶೂನ್ಯಂ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...