Home / ಕವನ / ಕವಿತೆ / ಅಲ್ಲಮನೆಂದರೆ

ಅಲ್ಲಮನೆಂದರೆ

ಮನಸ್ಸಿನಾಳಕೆ ಇಳಿದ ನಿಮ್ಮ ಘನ
ವೇದ್ಯ, ಪಾಪ ಪುಣ್ಯ ಸುಖ ದುಃಖ
ಎಲ್ಲವ ದಾಟಿ ಮರಣವನು ಜನನವಾಗಿಸಿ,
ಕಾಲ ಸರಿದ ಮಹಿಮೆ ಅವನ ನಿಜ ಒಲವು.

ಎಲ್ಲ ವಿಷಯಗಳ ಅರಿದೆನೆಂಬ ಅಹಂ ಭಾವ
ನಿಜದ ನೆರಳ ಸವರಿ ಸುಖಕ್ಕೆ ಆರೋಚಕವಿಲ್ಲ.
ಶರಣನಿಗೆ ಭಯವಿಲ್ಲ ಬಂಧನವಿಲ್ಲ. ಮತ್ತೆ
ಪುರುಷಕ್ಕೆ ಬೆಲೆ ಬಂದಿತು ಅಂಗದ ಲಿಂಗದಿಂದ.

ಹಗಲಲಿ ಇರುಳಲಿ ಅಲ್ಲಿಂದ ಇಲ್ಲಿಂದ ಒಡಲ
ಕಾವಿಗೆ ತಳಮಳಿಸಿದ ಜೀವ ನೆತ್ತಿಯ ಒಳಗಿನ,
ಮೃತ್ಯು ನೆರಳು ಕಾಣದೇ ಸುಳ್ಳು ಬೆಳದಿಂಗಳ,
ಬಯಲ ನೋಡಿ, ಹಿಂದಣ ಹೆಜ್ಜೆಗಳು ನೆಲಗೊಳ್ಳದು.

ದಾರಿಗುಂಟ ನಡೆದವರಿಲ್ಲ ಎಲ್ಲ ಲೆಕ್ಕಾಚಾರಗಳ
ಬದಲಿಸಿ ಜಾರಿ ಬಿದ್ದವರು, ನೆಲವ ಬಿಟ್ಟು
ಆಕಾಶದಲಿ ನಿಂತು, ಮುಗಿಲೊಳು ಮಿಂಚದೇ,
ಸಾಮಾನ್ಯದ ಅರಿವಿನ ಘಮ ಕಳೆದು ಹೋಗುವುದು.

ಕಂಗಳ ಮುಂದಿನ ಕತ್ತಲೆ, ಮನದ ಮುಂದೆ
ಬಟ್ಟೆ, ಹೊರಗಡೆಯ ಶೃಂಗಾರ ಮರೆತು
ಒಳಗೆ ನೋಡಿದವರ ಬೆಳಕಿನ ಸೂರ್ಯನ ಕಿರಣಗಳು,
ಅಂಬರದೊಳಗೆ ಒಂದು ಹಸಿರು ಬಯಲು ಹುಟ್ಟುವುದು.
ಅಲ್ಲಮನೆಂದರೆ ಘನ ರೂಪದ ಚಿತ್ರ ಬರೆಯಬಹುದು.
ಆದರೆ ಪ್ರಾಣವ ಹಿಡಿಯಲು ಬಾರದು.

ಅಲ್ಲಮನೆಂದರೆ ಅಲ್ಲಿ ಇಲ್ಲಿ ಎಲ್ಲಿಯೂ ಇಲ್ಲದ ಬಯಲು.
ಅಂತಃ ಶೂನ್ಯಂ, ಬಹಿಃ ಶೂನ್ಯಂ ಶೂನ್ಯಂ ಸರ್ವ ಶೂನ್ಯಂ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...