ಭಾರತಾಂಬೆಯ ಮಕ್ಕಳು

ಭಾರತಾಂಬೆಯ ಮಕ್ಕಳು ನಾವು
ಹೆಮ್ಮೆಯ ಭಾರತೀಯರು ನಾವು

ಸುಂದರ ವನಗಳ ಪುಷ್ಪಗಳು ನಾವು |
ಮಾತೆಯ ಪಾದಕೆ ಅರ್ಪಿತವು || ಭಾ ||

ಭಾವೈಕ್ಯದಲಿ ಒಂದಾಗುವೆವು
ಒಂದೇ ಮತ ಎನ್ನುವೆವು
ನಮ್ಮದು ಒಂದೇ ಮತ ಎನ್ನುವೆವು || ಭಾ ||

ದಿಗ್ ದಿಗಂತವನೇರಿ ಶಿಖರದಿ
ವಿಜಯ ಕಹಳೆಯ ಮೊಳಗುವೆವು
ನಾವು ವಿಜಯ ಕಹಳೆಯ ಮೊಳಗುವೆವು || ಭಾ ||

ಅನಂತ ಅನಂತ ರೂಪದಿ
ಮಾತೆಯ ಹರುಷದಿ ಹಾಡುವೆವು
ಮಾತೆಯ ಹರುಷದಿ ನಲಿಯುವೆವು || ಭಾ ||

ಕೋಟಿ ಕಷ್ಟಗಳೆ ಬರಲಿ ತಾಯಿ
ಮೆಟ್ಟಿ ನಿಂದು ದಿಟ್ಟತನದಿ ಎದುರಿಸುವೆವು
ತಾಯೆ ನಾವು ಎದುರಿಸುವೆವು || ಭಾ ||

ನಿತ್ಯವು ನಿನ್ನನು ಮನದಿ ಜಪಿಸಿ
ತಾಯೆ ನಿನಗೆ ನಮಿಸುವೆವು || ಭಾ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರ್‍ಗಿಲ್ ಹಾಡು
Next post ಅಲ್ಲಮನೆಂದರೆ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys