ಭಾರತಾಂಬೆಯ ಮಕ್ಕಳು

ಭಾರತಾಂಬೆಯ ಮಕ್ಕಳು ನಾವು
ಹೆಮ್ಮೆಯ ಭಾರತೀಯರು ನಾವು

ಸುಂದರ ವನಗಳ ಪುಷ್ಪಗಳು ನಾವು |
ಮಾತೆಯ ಪಾದಕೆ ಅರ್ಪಿತವು || ಭಾ ||

ಭಾವೈಕ್ಯದಲಿ ಒಂದಾಗುವೆವು
ಒಂದೇ ಮತ ಎನ್ನುವೆವು
ನಮ್ಮದು ಒಂದೇ ಮತ ಎನ್ನುವೆವು || ಭಾ ||

ದಿಗ್ ದಿಗಂತವನೇರಿ ಶಿಖರದಿ
ವಿಜಯ ಕಹಳೆಯ ಮೊಳಗುವೆವು
ನಾವು ವಿಜಯ ಕಹಳೆಯ ಮೊಳಗುವೆವು || ಭಾ ||

ಅನಂತ ಅನಂತ ರೂಪದಿ
ಮಾತೆಯ ಹರುಷದಿ ಹಾಡುವೆವು
ಮಾತೆಯ ಹರುಷದಿ ನಲಿಯುವೆವು || ಭಾ ||

ಕೋಟಿ ಕಷ್ಟಗಳೆ ಬರಲಿ ತಾಯಿ
ಮೆಟ್ಟಿ ನಿಂದು ದಿಟ್ಟತನದಿ ಎದುರಿಸುವೆವು
ತಾಯೆ ನಾವು ಎದುರಿಸುವೆವು || ಭಾ ||

ನಿತ್ಯವು ನಿನ್ನನು ಮನದಿ ಜಪಿಸಿ
ತಾಯೆ ನಿನಗೆ ನಮಿಸುವೆವು || ಭಾ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರ್‍ಗಿಲ್ ಹಾಡು
Next post ಅಲ್ಲಮನೆಂದರೆ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…