Home / ಕವನ / ಕವಿತೆ / ಕಾರ್‍ಗಿಲ್ ಹಾಡು

ಕಾರ್‍ಗಿಲ್ ಹಾಡು

ಕಾರ್‍ಗಿಲ್ ನಾಡಿನ ಈ ಹಾಡು
ಬಾನಂಗಳದ ಬೆಂಕಿ ಚೆಂಡು

ಎತ್ತರೆತ್ತರ ಮರಗಿಡಗಳ ಕಾಡಿನಲಿ
ಕಣಿವೆ ಕೊತ್ತಲಗಳಲಿ ಹರಿವ ನೀರಿನಲಿ
ಗುಂಡಿನ ಮೊರೆತದ ಹಾಡು

ಮೈ ಕೊರೆವ ಛಳಿಯಲಿ
ಬೆಂಬಿಡದೇ ಪತ್ತೆ ಹಚ್ಚಿಹರು ಶತ್ರುಗಳ ಜಾಡು
ನಮ್ಮ ಯೋಧರು ಬೀಡು ಬಿಟ್ಟಿಹರಡವಿಯಲಿ

ನುಗ್ಗಿಹರು ದಂಡು ದಂಡು ರೊಚ್ಚಿನಲಿ
ಶತೃಗಳ ಮೆಟ್ಟುತ ಶೌರ್‍ಯದಲಿ
ಕಣಿವೆಗಳ ಸೀಳುತ ಘರ್ಜಿಸಿದವು ಸಿಂಹಗಳು

ಮೊಳಗಿದವು ರಣಕಹಳೆ
ಬಾಂಬುಗಳ ದಾಳಿಯಿಡತಲಿ
ಆಗಸದೆತ್ತರ ಸಿಡಿದವು ಶೆಲ್ಲುಗಳು

ಗುಂಡಿಗೆ ಎದೆಯೊಡ್ಡಿದವು ಕಾರ್‍ಗಿಲ್ ಕೆನ್ನಾಲಿಗೆಯಲಿ
ಕಂಪು ಸೂಸುವ ಮೊದಲೇ ತಾಯ್ನೆಲವನಪ್ಪಿದವು
ಮೈಚಾಚಿ ಮುನ್ನುಗಿದ್ದ ಮೊಗ್ಗು ಅರಳಲಿಲ್ಲ

ಬುಗಿಲೆದ್ದ ಉರಿವ ಬೆಂಕಿಯ ಚಂಡಿನಲಿ
ಯೋಧರ ರಕುತದೋಕುಳಿಯಲಿ ಹಾರಿತು
ತ್ರಿವರ್ಣ ಧ್ವಜ ಕಾರ್‍ಗಿಲ್ ಗುಡ್ಡದ ಮೇಲೆ

ಉಳಿಯಿತು ಭಾರತಾಂಬೆಯ ಮಾನ
ಕ್ಷಣ ಕ್ಷಣಕ್ಕೂ ಕಾರ್‍ಗಿಲ್
ವಿಜಯವು ನಮ್ಮದಾಯಿತು

ಕಾರ್‍ಗಿಲ್ ಕಲಿಗಳಿಗೆ
ಇರಲಿ ನಮ್ಮ ನಮನ
ಇರಲಿ ನಮ್ಮ ಸ್ಮರಣೆ
*****
೬-೯-೨೦೦೯ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ
೧-೮-೨೦೦೯ರ ನಮ್ಮ ನಾಡು ಪತ್ರಿಕೆಯ ಚಿಣ್ಣರ ನಾಡು ವಿಭಾಗದಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...