Home / ಕವನ / ಕವಿತೆ / ಕಾರ್‍ಗಿಲ್ ಹಾಡು

ಕಾರ್‍ಗಿಲ್ ಹಾಡು

ಕಾರ್‍ಗಿಲ್ ನಾಡಿನ ಈ ಹಾಡು
ಬಾನಂಗಳದ ಬೆಂಕಿ ಚೆಂಡು

ಎತ್ತರೆತ್ತರ ಮರಗಿಡಗಳ ಕಾಡಿನಲಿ
ಕಣಿವೆ ಕೊತ್ತಲಗಳಲಿ ಹರಿವ ನೀರಿನಲಿ
ಗುಂಡಿನ ಮೊರೆತದ ಹಾಡು

ಮೈ ಕೊರೆವ ಛಳಿಯಲಿ
ಬೆಂಬಿಡದೇ ಪತ್ತೆ ಹಚ್ಚಿಹರು ಶತ್ರುಗಳ ಜಾಡು
ನಮ್ಮ ಯೋಧರು ಬೀಡು ಬಿಟ್ಟಿಹರಡವಿಯಲಿ

ನುಗ್ಗಿಹರು ದಂಡು ದಂಡು ರೊಚ್ಚಿನಲಿ
ಶತೃಗಳ ಮೆಟ್ಟುತ ಶೌರ್‍ಯದಲಿ
ಕಣಿವೆಗಳ ಸೀಳುತ ಘರ್ಜಿಸಿದವು ಸಿಂಹಗಳು

ಮೊಳಗಿದವು ರಣಕಹಳೆ
ಬಾಂಬುಗಳ ದಾಳಿಯಿಡತಲಿ
ಆಗಸದೆತ್ತರ ಸಿಡಿದವು ಶೆಲ್ಲುಗಳು

ಗುಂಡಿಗೆ ಎದೆಯೊಡ್ಡಿದವು ಕಾರ್‍ಗಿಲ್ ಕೆನ್ನಾಲಿಗೆಯಲಿ
ಕಂಪು ಸೂಸುವ ಮೊದಲೇ ತಾಯ್ನೆಲವನಪ್ಪಿದವು
ಮೈಚಾಚಿ ಮುನ್ನುಗಿದ್ದ ಮೊಗ್ಗು ಅರಳಲಿಲ್ಲ

ಬುಗಿಲೆದ್ದ ಉರಿವ ಬೆಂಕಿಯ ಚಂಡಿನಲಿ
ಯೋಧರ ರಕುತದೋಕುಳಿಯಲಿ ಹಾರಿತು
ತ್ರಿವರ್ಣ ಧ್ವಜ ಕಾರ್‍ಗಿಲ್ ಗುಡ್ಡದ ಮೇಲೆ

ಉಳಿಯಿತು ಭಾರತಾಂಬೆಯ ಮಾನ
ಕ್ಷಣ ಕ್ಷಣಕ್ಕೂ ಕಾರ್‍ಗಿಲ್
ವಿಜಯವು ನಮ್ಮದಾಯಿತು

ಕಾರ್‍ಗಿಲ್ ಕಲಿಗಳಿಗೆ
ಇರಲಿ ನಮ್ಮ ನಮನ
ಇರಲಿ ನಮ್ಮ ಸ್ಮರಣೆ
*****
೬-೯-೨೦೦೯ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ
೧-೮-೨೦೦೯ರ ನಮ್ಮ ನಾಡು ಪತ್ರಿಕೆಯ ಚಿಣ್ಣರ ನಾಡು ವಿಭಾಗದಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...