Home / ಕಥೆ / ಸಣ್ಣ ಕಥೆ / ಹುಚ್ಚನ ಕರಿಯ

ಹುಚ್ಚನ ಕರಿಯ

ಕಳಲೆಯೆಂಬ ಗ್ರಾಮದಲ್ಲಿ ಒಡೆಯರ ಜ್ಞಾತಿಗಳಿರುತ್ತಿದ್ದರು. ರಾಜ ಒಡೆಯರ ಕಾಲದಲ್ಲಿ ಆ ಗ್ರಾಮವನ್ನು ಲಕ್ಷ್ಮಿ ಕಾಂತಯ್ಯ ನೆಂಬಾತನು ಅನುಭವಿಸುತ್ತ ಭಿನ್ನೋದರರಾದ ತನ್ನ ಸಹೋದರರನ್ನು ಪೋಷಿಸುತ್ತಿದ್ದನು. ಆ ಸಹೋದರರಲ್ಲಿ ನಂದಿನಾಥಯ್ಯ, ಕಾಂತಯ್ಯ, ಚಂದ್ರಶೇಖರಯ್ಯರೆಂಬ ಮೂವರು-ಲಕ್ಷ್ಮೀ ಕಾಂತಯ್ಯನ ಬಲತಾಯಿ ಚನ್ನಾಜಯಮ್ಮಯ್ಯನ ಮಕ್ಕಳು-ಆ ಗ್ರಾಮವನ್ನು ತಾವೇ ಅನುಭವಿಸಬೇಕೆಂದು ದುರಾಲೋಚನೆಮಾಡಿ ಲಕ್ಷ್ಮೀ ಕಾಂತಯ್ಯನನ್ನು ಮೋಸದಿಂದ ಕೊಂದುಬಿಟ್ಟರು. ತರುವಾಯ ಮಲ್ಲರಾಜಯ್ಯನೆಂಬ ೫ ವರ್ಷದ ಹುಡುಗನನ್ನು ಕೊಲ್ಲಲು ಸಿದ್ದರಾದರು; ಆ ಹುಡುಗನು ರಾಜ ಒಡೆಯರ ಅಕ್ಕಂದಿರು ದೇವಾಜಮ್ಮಣ್ಣಿಯ ಮಗನೂ-ಲಕ್ಷ್ಮಿ ಕಾಂತಯ್ಯನ ಸಹೋದರನೂ ಆಗಿದ್ದನು. ಈ ಹುಡುಗನ ಕೊಲೆಗೆ ಈ ಮೂವರು ಸಿದ್ದರಾಗಿದ್ದು ಅವನನ್ನು ಹುಡುಕುತ್ತಲಿದ್ದರು.

ಆ ಕಾಲದಲ್ಲಿ ಆ ಹುಡುಗನು ಕುರುಬಗೇರಿಗೆ ಓಡಿದನು. ಅಲ್ಲಿ ಕುರುಬರ ‘ಹುಚ್ಚನ ಕರಿಯ’ ಎಂಬವನು ಆ ಬಾಲಕನನ್ನು ಗೋಪ್ಯವಾಗಿ ಸಂರಕ್ಷಿಸಿ, ರಾಜರ ಸೋದರಳಿಯನೆಂದು ತಿಳಿದು, ರಾತ್ರಿ ವೇಳೆಯಲ್ಲಿ ಹೊರಟು ಆ ಬಾಲಕನನ್ನು ತಂದು ರಾಜರಿಗೊಪ್ಪಿಸಿದನು. ರಾಜರು ಮಲ್ಲರಾಜಯ್ಯನ ವೃತ್ತಾಂತವನ್ನು ತಿಳಿದು ವ್ಯಸನ ಪಟ್ಟು ಆ ಮೂವರನ್ನು ಶಿಕ್ಷಿಸಲು ಸಂಕಲ್ಪ ಮಾಡಿಕೊಂಡರು.

ಅತ್ತಲಾಗಿ ಲಕ್ಷ್ಮೀಕಾಂತಯ್ಯನು ದುರ್ಮರಣಕ್ಕೆ ಸಿಕ್ಕ ಮೇಲೆ ಆತನ ಹೆಂಡತಿ ಲಿಂಗಾಜಮ್ಮಯ್ಯನೆಂಬುವಳು ಸಹಗಮನಕ್ಕೆ ಸಿದ್ಧಳಾದಳು. ಅಗ್ನಿಕುಂಡದಲ್ಲಿ ಧುಮುಕುವ ಮುನ್ನ ಆಕೆಯು “ನನ್ನ ಗಂಡನನ್ನು ಅನ್ಯಾಯದಿಂದ ವಧಿಸಿದ ಬಲ ಅತ್ತೇ ಮಕ್ಕಳ ಮೂವರ ವಂಶವೂ ನಷ್ಟವಾಗಲಿ; ಕಳಲೇ ಅರಸುಗಳು ಕೂಡ್ಲಾಪುರ ಬತ್ತದ ಅಕ್ಕಿಯನ್ನೇ ವಿಶ್ವಾಸದಿಂದ ಊಟಮಾಡುವದರಿಂದ ಆ ಅನ್ನವು ರಕ್ತದ ಕೂಳಿನಂತೆ ಆಗಲಿ; ನನ್ನ ಬಾಳು ತಪ್ಪಿಸಿದ ನನ್ನ ಗಂಡನ ವಂಶದ ಹೆಣ್ಣು ಮಕ್ಕಳು ಚನ್ನಾಗಿ ಬಾಳದೆ ಇರಲಿ; ಮತ್ತು, ಧರ್ಮಾತ್ಮರಾದ ಮಹೀಶರ ಮನೆತನದಲ್ಲಿ ಹುಟ್ಟಿದ ನನ್ನ ಬಲ ಅತ್ತೆಯಾದ ದೇವಾಜಮ್ಮಣ್ಣಿಯವರಿಗೆ ಪುತ್ರನ ವಂಶವು ನಡೆಯಲಿ” ಎಂದು ನುಡಿದಳು.

ವಯಸ್ಸು ಬಂದಮೇಲೆ ಮಲ್ಲರಾಜಯ್ಯನನ್ನು ರಾಜರು ದಳವಾಯಿತನಕ್ಕೆ ಗೊತ್ತುಮಾಡಿದರು. ಆದರೆ ಮಲ್ಲರಾಜಯ್ಯನು ಆ ಪದವಿಗೆ ಅಯೋಗ್ಯನಾಗಿದ್ದನು. ಕೆಲವು ದಿನಗಳಲ್ಲಿಯೇ ತನ್ನ ಮೊಮ್ಮಗನ ಮೂಲಕ ದಳವಾಯತನದ ಉಂಗುರವನ್ನು ರಾಜರಿಗೆ ಕಳಹಿಸಿಟ್ಟು ತಾವು ಸೋಮಾರಿಯಾಗಿಯೇ ಇದ್ದನು.
*****
[ವಂಶರತ್ನಾಕರ ಪುಟ ೪೬-೪೭ ; ವಂಶಾವಳಿ ಸಂ. ೧, ಪುಟ ೪೬, ೪೭ ಹೊಸ ಗೆಜಟಿಯರ್‌ ಸಂಪುಟ ೫, ಪುಟ ೬೮೭]

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...