Home / ಕಥೆ / ಸಣ್ಣ ಕಥೆ / ಹುಚ್ಚನ ಕರಿಯ

ಹುಚ್ಚನ ಕರಿಯ

ಕಳಲೆಯೆಂಬ ಗ್ರಾಮದಲ್ಲಿ ಒಡೆಯರ ಜ್ಞಾತಿಗಳಿರುತ್ತಿದ್ದರು. ರಾಜ ಒಡೆಯರ ಕಾಲದಲ್ಲಿ ಆ ಗ್ರಾಮವನ್ನು ಲಕ್ಷ್ಮಿ ಕಾಂತಯ್ಯ ನೆಂಬಾತನು ಅನುಭವಿಸುತ್ತ ಭಿನ್ನೋದರರಾದ ತನ್ನ ಸಹೋದರರನ್ನು ಪೋಷಿಸುತ್ತಿದ್ದನು. ಆ ಸಹೋದರರಲ್ಲಿ ನಂದಿನಾಥಯ್ಯ, ಕಾಂತಯ್ಯ, ಚಂದ್ರಶೇಖರಯ್ಯರೆಂಬ ಮೂವರು-ಲಕ್ಷ್ಮೀ ಕಾಂತಯ್ಯನ ಬಲತಾಯಿ ಚನ್ನಾಜಯಮ್ಮಯ್ಯನ ಮಕ್ಕಳು-ಆ ಗ್ರಾಮವನ್ನು ತಾವೇ ಅನುಭವಿಸಬೇಕೆಂದು ದುರಾಲೋಚನೆಮಾಡಿ ಲಕ್ಷ್ಮೀ ಕಾಂತಯ್ಯನನ್ನು ಮೋಸದಿಂದ ಕೊಂದುಬಿಟ್ಟರು. ತರುವಾಯ ಮಲ್ಲರಾಜಯ್ಯನೆಂಬ ೫ ವರ್ಷದ ಹುಡುಗನನ್ನು ಕೊಲ್ಲಲು ಸಿದ್ದರಾದರು; ಆ ಹುಡುಗನು ರಾಜ ಒಡೆಯರ ಅಕ್ಕಂದಿರು ದೇವಾಜಮ್ಮಣ್ಣಿಯ ಮಗನೂ-ಲಕ್ಷ್ಮಿ ಕಾಂತಯ್ಯನ ಸಹೋದರನೂ ಆಗಿದ್ದನು. ಈ ಹುಡುಗನ ಕೊಲೆಗೆ ಈ ಮೂವರು ಸಿದ್ದರಾಗಿದ್ದು ಅವನನ್ನು ಹುಡುಕುತ್ತಲಿದ್ದರು.

ಆ ಕಾಲದಲ್ಲಿ ಆ ಹುಡುಗನು ಕುರುಬಗೇರಿಗೆ ಓಡಿದನು. ಅಲ್ಲಿ ಕುರುಬರ ‘ಹುಚ್ಚನ ಕರಿಯ’ ಎಂಬವನು ಆ ಬಾಲಕನನ್ನು ಗೋಪ್ಯವಾಗಿ ಸಂರಕ್ಷಿಸಿ, ರಾಜರ ಸೋದರಳಿಯನೆಂದು ತಿಳಿದು, ರಾತ್ರಿ ವೇಳೆಯಲ್ಲಿ ಹೊರಟು ಆ ಬಾಲಕನನ್ನು ತಂದು ರಾಜರಿಗೊಪ್ಪಿಸಿದನು. ರಾಜರು ಮಲ್ಲರಾಜಯ್ಯನ ವೃತ್ತಾಂತವನ್ನು ತಿಳಿದು ವ್ಯಸನ ಪಟ್ಟು ಆ ಮೂವರನ್ನು ಶಿಕ್ಷಿಸಲು ಸಂಕಲ್ಪ ಮಾಡಿಕೊಂಡರು.

ಅತ್ತಲಾಗಿ ಲಕ್ಷ್ಮೀಕಾಂತಯ್ಯನು ದುರ್ಮರಣಕ್ಕೆ ಸಿಕ್ಕ ಮೇಲೆ ಆತನ ಹೆಂಡತಿ ಲಿಂಗಾಜಮ್ಮಯ್ಯನೆಂಬುವಳು ಸಹಗಮನಕ್ಕೆ ಸಿದ್ಧಳಾದಳು. ಅಗ್ನಿಕುಂಡದಲ್ಲಿ ಧುಮುಕುವ ಮುನ್ನ ಆಕೆಯು “ನನ್ನ ಗಂಡನನ್ನು ಅನ್ಯಾಯದಿಂದ ವಧಿಸಿದ ಬಲ ಅತ್ತೇ ಮಕ್ಕಳ ಮೂವರ ವಂಶವೂ ನಷ್ಟವಾಗಲಿ; ಕಳಲೇ ಅರಸುಗಳು ಕೂಡ್ಲಾಪುರ ಬತ್ತದ ಅಕ್ಕಿಯನ್ನೇ ವಿಶ್ವಾಸದಿಂದ ಊಟಮಾಡುವದರಿಂದ ಆ ಅನ್ನವು ರಕ್ತದ ಕೂಳಿನಂತೆ ಆಗಲಿ; ನನ್ನ ಬಾಳು ತಪ್ಪಿಸಿದ ನನ್ನ ಗಂಡನ ವಂಶದ ಹೆಣ್ಣು ಮಕ್ಕಳು ಚನ್ನಾಗಿ ಬಾಳದೆ ಇರಲಿ; ಮತ್ತು, ಧರ್ಮಾತ್ಮರಾದ ಮಹೀಶರ ಮನೆತನದಲ್ಲಿ ಹುಟ್ಟಿದ ನನ್ನ ಬಲ ಅತ್ತೆಯಾದ ದೇವಾಜಮ್ಮಣ್ಣಿಯವರಿಗೆ ಪುತ್ರನ ವಂಶವು ನಡೆಯಲಿ” ಎಂದು ನುಡಿದಳು.

ವಯಸ್ಸು ಬಂದಮೇಲೆ ಮಲ್ಲರಾಜಯ್ಯನನ್ನು ರಾಜರು ದಳವಾಯಿತನಕ್ಕೆ ಗೊತ್ತುಮಾಡಿದರು. ಆದರೆ ಮಲ್ಲರಾಜಯ್ಯನು ಆ ಪದವಿಗೆ ಅಯೋಗ್ಯನಾಗಿದ್ದನು. ಕೆಲವು ದಿನಗಳಲ್ಲಿಯೇ ತನ್ನ ಮೊಮ್ಮಗನ ಮೂಲಕ ದಳವಾಯತನದ ಉಂಗುರವನ್ನು ರಾಜರಿಗೆ ಕಳಹಿಸಿಟ್ಟು ತಾವು ಸೋಮಾರಿಯಾಗಿಯೇ ಇದ್ದನು.
*****
[ವಂಶರತ್ನಾಕರ ಪುಟ ೪೬-೪೭ ; ವಂಶಾವಳಿ ಸಂ. ೧, ಪುಟ ೪೬, ೪೭ ಹೊಸ ಗೆಜಟಿಯರ್‌ ಸಂಪುಟ ೫, ಪುಟ ೬೮೭]

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...