Home / ಕಥೆ / ಸಣ್ಣ ಕಥೆ / ಹುಚ್ಚನ ಕರಿಯ

ಹುಚ್ಚನ ಕರಿಯ

ಕಳಲೆಯೆಂಬ ಗ್ರಾಮದಲ್ಲಿ ಒಡೆಯರ ಜ್ಞಾತಿಗಳಿರುತ್ತಿದ್ದರು. ರಾಜ ಒಡೆಯರ ಕಾಲದಲ್ಲಿ ಆ ಗ್ರಾಮವನ್ನು ಲಕ್ಷ್ಮಿ ಕಾಂತಯ್ಯ ನೆಂಬಾತನು ಅನುಭವಿಸುತ್ತ ಭಿನ್ನೋದರರಾದ ತನ್ನ ಸಹೋದರರನ್ನು ಪೋಷಿಸುತ್ತಿದ್ದನು. ಆ ಸಹೋದರರಲ್ಲಿ ನಂದಿನಾಥಯ್ಯ, ಕಾಂತಯ್ಯ, ಚಂದ್ರಶೇಖರಯ್ಯರೆಂಬ ಮೂವರು-ಲಕ್ಷ್ಮೀ ಕಾಂತಯ್ಯನ ಬಲತಾಯಿ ಚನ್ನಾಜಯಮ್ಮಯ್ಯನ ಮಕ್ಕಳು-ಆ ಗ್ರಾಮವನ್ನು ತಾವೇ ಅನುಭವಿಸಬೇಕೆಂದು ದುರಾಲೋಚನೆಮಾಡಿ ಲಕ್ಷ್ಮೀ ಕಾಂತಯ್ಯನನ್ನು ಮೋಸದಿಂದ ಕೊಂದುಬಿಟ್ಟರು. ತರುವಾಯ ಮಲ್ಲರಾಜಯ್ಯನೆಂಬ ೫ ವರ್ಷದ ಹುಡುಗನನ್ನು ಕೊಲ್ಲಲು ಸಿದ್ದರಾದರು; ಆ ಹುಡುಗನು ರಾಜ ಒಡೆಯರ ಅಕ್ಕಂದಿರು ದೇವಾಜಮ್ಮಣ್ಣಿಯ ಮಗನೂ-ಲಕ್ಷ್ಮಿ ಕಾಂತಯ್ಯನ ಸಹೋದರನೂ ಆಗಿದ್ದನು. ಈ ಹುಡುಗನ ಕೊಲೆಗೆ ಈ ಮೂವರು ಸಿದ್ದರಾಗಿದ್ದು ಅವನನ್ನು ಹುಡುಕುತ್ತಲಿದ್ದರು.

ಆ ಕಾಲದಲ್ಲಿ ಆ ಹುಡುಗನು ಕುರುಬಗೇರಿಗೆ ಓಡಿದನು. ಅಲ್ಲಿ ಕುರುಬರ ‘ಹುಚ್ಚನ ಕರಿಯ’ ಎಂಬವನು ಆ ಬಾಲಕನನ್ನು ಗೋಪ್ಯವಾಗಿ ಸಂರಕ್ಷಿಸಿ, ರಾಜರ ಸೋದರಳಿಯನೆಂದು ತಿಳಿದು, ರಾತ್ರಿ ವೇಳೆಯಲ್ಲಿ ಹೊರಟು ಆ ಬಾಲಕನನ್ನು ತಂದು ರಾಜರಿಗೊಪ್ಪಿಸಿದನು. ರಾಜರು ಮಲ್ಲರಾಜಯ್ಯನ ವೃತ್ತಾಂತವನ್ನು ತಿಳಿದು ವ್ಯಸನ ಪಟ್ಟು ಆ ಮೂವರನ್ನು ಶಿಕ್ಷಿಸಲು ಸಂಕಲ್ಪ ಮಾಡಿಕೊಂಡರು.

ಅತ್ತಲಾಗಿ ಲಕ್ಷ್ಮೀಕಾಂತಯ್ಯನು ದುರ್ಮರಣಕ್ಕೆ ಸಿಕ್ಕ ಮೇಲೆ ಆತನ ಹೆಂಡತಿ ಲಿಂಗಾಜಮ್ಮಯ್ಯನೆಂಬುವಳು ಸಹಗಮನಕ್ಕೆ ಸಿದ್ಧಳಾದಳು. ಅಗ್ನಿಕುಂಡದಲ್ಲಿ ಧುಮುಕುವ ಮುನ್ನ ಆಕೆಯು “ನನ್ನ ಗಂಡನನ್ನು ಅನ್ಯಾಯದಿಂದ ವಧಿಸಿದ ಬಲ ಅತ್ತೇ ಮಕ್ಕಳ ಮೂವರ ವಂಶವೂ ನಷ್ಟವಾಗಲಿ; ಕಳಲೇ ಅರಸುಗಳು ಕೂಡ್ಲಾಪುರ ಬತ್ತದ ಅಕ್ಕಿಯನ್ನೇ ವಿಶ್ವಾಸದಿಂದ ಊಟಮಾಡುವದರಿಂದ ಆ ಅನ್ನವು ರಕ್ತದ ಕೂಳಿನಂತೆ ಆಗಲಿ; ನನ್ನ ಬಾಳು ತಪ್ಪಿಸಿದ ನನ್ನ ಗಂಡನ ವಂಶದ ಹೆಣ್ಣು ಮಕ್ಕಳು ಚನ್ನಾಗಿ ಬಾಳದೆ ಇರಲಿ; ಮತ್ತು, ಧರ್ಮಾತ್ಮರಾದ ಮಹೀಶರ ಮನೆತನದಲ್ಲಿ ಹುಟ್ಟಿದ ನನ್ನ ಬಲ ಅತ್ತೆಯಾದ ದೇವಾಜಮ್ಮಣ್ಣಿಯವರಿಗೆ ಪುತ್ರನ ವಂಶವು ನಡೆಯಲಿ” ಎಂದು ನುಡಿದಳು.

ವಯಸ್ಸು ಬಂದಮೇಲೆ ಮಲ್ಲರಾಜಯ್ಯನನ್ನು ರಾಜರು ದಳವಾಯಿತನಕ್ಕೆ ಗೊತ್ತುಮಾಡಿದರು. ಆದರೆ ಮಲ್ಲರಾಜಯ್ಯನು ಆ ಪದವಿಗೆ ಅಯೋಗ್ಯನಾಗಿದ್ದನು. ಕೆಲವು ದಿನಗಳಲ್ಲಿಯೇ ತನ್ನ ಮೊಮ್ಮಗನ ಮೂಲಕ ದಳವಾಯತನದ ಉಂಗುರವನ್ನು ರಾಜರಿಗೆ ಕಳಹಿಸಿಟ್ಟು ತಾವು ಸೋಮಾರಿಯಾಗಿಯೇ ಇದ್ದನು.
*****
[ವಂಶರತ್ನಾಕರ ಪುಟ ೪೬-೪೭ ; ವಂಶಾವಳಿ ಸಂ. ೧, ಪುಟ ೪೬, ೪೭ ಹೊಸ ಗೆಜಟಿಯರ್‌ ಸಂಪುಟ ೫, ಪುಟ ೬೮೭]

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...