ಆಸೆಯು ಮುಂದೆ

ಆಸೆಯು ಮುಂದೆ ನಿರಾಸೆಯು ಹಿಂದೆ|
ಆಮಿಷದಿಂದೆ ಬೇಸರ ಮುಂದೆ|
ತಿಳಿದೂ ಅದರ ಹಿಂದೆ ಹೋದರೆ
ನಾವೂ ಕುರಿ ಮಂದೆ||

ಬೆಳಕ ಜೊತೆಯಲಿ ನೆರಳಿರುವಂತೆ
ದೀಪದ ಕೆಳಗಡೆ ಕತ್ತಲಿರುವಂತೆ
ಆಸೆಯು ತುಂಬಾ ಚಿಕ್ಕದಿರಬೇಕು|
ನಾಳೆಯ ಕಾಣಲಷ್ಟೇ ಆಸೆಯು ಬೇಕು
ದುರಾಸೆಯ ಬುದ್ಧಿಯ ಕೈ ಬಿಡಬೇಕು|
ಅಸೂಯ್ಯೆ ಅಸಹನೆ ಅಸಹಕಾರ
ಮನುಜನ ಅವಸಾನಕೆ ಕಾರಣ||

ಆಸೆಯೇ ದುಃಖದ ಮೂಲವೆಂದರು
ಜೀವನವನರಿತ ಶಿವ ಶರಣವರೇಣ್ಯರು|
ಆಮಿಷ ಮನುಜನ ಮೋಸದ ಜಾಲ|
ಬಲಿಯಾಗುವ ಮುನ್ನವೇ
ತಿಳಿಯಿರಿ ನೀವದರ ಮೂಲ|
ಅತೀ ಆಸೆಯ ಪಡದೆ ನಿರಾಸೆಹೊಂದದೆ
ಇತಿಮಿತಿಯಲಿ ಜೀವಿಸುವುದೇ ಸುಖದ ಮೂಲ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕತ್ತಲು
Next post ಹೊಸಕಾಲದ ಕವಿ!

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…