ಕತ್ತಲು

ನಟ್ಟನಡು ರಾತ್ರಿಯಲಿ
ಹುತ್ತಗಟ್ಟಿತು ಕತ್ತಲು
ತುಟ್ಟತುದಿ ಕೋವಿಯಲಿ
ಹೆಡೆಯ ಎತ್ತಿತು ಸುತ್ತಲು

ಬುಸ್ಸೆನ್ನುವ ಭಾವದಲ್ಲಿ
ಸತ್ತ ಸಂಬಂಧಗಳು
ವಿಷನಾಗರ ನಾಲಗೆಯಲ್ಲಿ
ನಕ್ಷತ್ರಗಳ ನುಂಗಿದವು
ಗೋರಿಯೊಳಗೆ ತಂಗಿದವು
ಆಕಾಶದ ಹಣೆಯಲ್ಲಿ
ಕುಂಕುಮದ ಚಂದಿರನ
ಒಂದೇಕ್ಷಣ ಒರೆಸಿದವು
ಕರಿಮಣಿಗಳ ಕಿತ್ತವು
ಬೆಳದಿಂಗಳ ಬಸಿದವು.

ಮುಖ ಕಾಣದ ಸುಖ ಸಹಿಸದ
ಕುಣಿವ ಮೂಳೆಗತ್ತಲು
ಇತಿಹಾಸದ ಪರಿಹಾಸದ
ಹುಸಿಪಾಠವು ಎತ್ತಲು
ಸದ್ದಿಲ್ಲದೆ ಗೆದ್ದಲ ಗೆದ್ದು
ಗಾದಿಯ ಏರಿತು ಹಾವು
ಹೊರಗಿನ ಕತ್ತಲು ಒಳಗನು ಸೇರಿ
ಹತ್ತಿರವಾಯಿತು ಸಾವು
ಬೆಳಕಿನ ಚಿಗುರಿಗೆ ಉಗುರನು ಹಾಕಿ
ಕನಸನು ಕೊಂದಿತ್ತು-
ಕತ್ತಲು-
ಕನಸನು ಕೊಂದಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮೆ ಮತ್ತು ನೈಜತೆಗಳ ಸಾರಾಂಶ-Pirandello ನ Six Characters in Search of an Author
Next post ಆಸೆಯು ಮುಂದೆ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys