ಹೊಸಕಾಲದ ಕವಿ!

ಹೊಸಕಾಲದ ಕವಿಯೊಬ್ಬನೆ ನಾನು!
ಹೊಸೆಯುವೆನೆಂತಹ ಕವನಗಳನ್ನು!


ಪ್ರತಿಭಾದೇವಿಯ ದಯೆ ಬೇಕಿಲ್ಲ ;
ಅವಳಿಗೆ ಮಣಿಯುವ ಕವಿ ನಾನಲ್ಲ !
ಎಡಗೈಯಲಿ ನಿಂತಿಹಳಾ ಹುಡುಗಿ,
ನನ್ನ ನೋಡಿದರೆ ಅವಳೆದೆ ನಡುಗಿ-
ಚಳಿಯುರಿಯಲಿ ಗದಗುಟ್ಟುವಳು ;
ಉಳಿದವರಿಗೆ ದೊಡ್ಡವಳವಳು !


ಮಳೆಗಾಲದ ಕಾಲುವೆನೀರಂತೆ
ಗಾಯಗೊಂಡ ಮೈನೆತ್ತರಿನಂತೆ
ಹಿಂಗದೆ ಹರಿವುದು ನನ್ನಯ ಭಾವ;
ತಳಮಳಗೊಳಿಪುದು ರಸಿಕರ ಜೀವ-
ಬತ್ತಲೆ ಹೆಣ್ಣಿನ ಚೆಲುವಿನೊಲು,
ನನ್ನ ಬಿಚ್ಚುನುಡಿಗಳ ಹುರುಳು!


ಕಾವ್ಯೋನ್ಮಾದವು ಮೆದುಳಲಿ ಸೇರಿ,
ಫೌಂಟನ್‌ಪೆನ್ನಿನ ಕುದುರೆಯನೇರಿ,
ಸುತ್ತಿಬರುವೆ ನಾ ಸೃಷ್ಟಿಯ ತುಂಬಾ ;
ದಣಿದ ಕುದುರೆಯಾ ಬಾಯ್ ನೊರೆಯೆಂಬಾ
ಪೆನ್ನಿನ ಮಸಿ ಎಲ್ಲೆಡೆ ಸುರಿದು,
ವಿಶ್ವವನೇ ಮಾಡಿತು ಕರಿದು.


ನನ್ನ ಕವನಗಳ ತೆಗಳುವರಲ್ಲವೆ?
ನನ್ನ ಕವನಗಳ ಹೊಗಳುವರಿಲ್ಲವೆ?
ತೆಗಳ್ವವರಿಗೆ ಕಾಲ್‌ಚೆಪ್ಪಲಿಯೇಟು !
ಹೊಗಳ್ಳವರಿಗೆ ಮೆಚ್ಚೆನ್ನಯ ಹ್ಯಾಟು !
ಬನ್ನಿರಿ, ಬನ್ನಿರಿ ಮುಂದೆ ;
ತೆಗಳುವ ಗಂಡೆದೆ ಯಾರಿಗಿದೆ ?
* * *
ಹೊಸಕಾಲದ ಕವಿಯೊಬ್ಬನೆ ನಾನು !
ಹೊಸೆದೊಗೆವೆನು ನೂರ್ ಕವಿತೆಗಳನ್ನು !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಸೆಯು ಮುಂದೆ
Next post ಯಕ್ಷಿ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys